ಬ್ರೇಕಿಂಗ್ ನ್ಯೂಸ್
28-07-21 08:26 pm Mangaluru correspondent ಕ್ರೈಂ
ಮಂಗಳೂರು, ಜುಲೈ 28: ಆಟೋ ರಿಕ್ಷಾ ಚಾಲಕನಿಂದ ಕಿರುಕುಳ ಆಗ್ತಿದೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ತಾಯಿ ಜೊತೆಗೆ ಪೊಲೀಸರಿಗೆ ದೂರು ನೀಡಲು ಬಂದಿದ್ದಳು. ದೂರು ಪಡೆದ ಪೊಲೀಸ್ ಪೇದೆ ಆಟೋ ಚಾಲಕನನ್ನು ಗದರಿಸಿ, ಹುಡುಗಿಯ ನಂಬರ್ ಪಡೆದಿದ್ದ. ಆನಂತರ ಕಿರುಕುಳಕ್ಕೆ ಒಳಗಾದ ಹುಡುಗಿಯ ಜೊತೆ ತಾನೇ ಚಾಟ್ ಮಾಡಲು ಆರಂಭಿಸಿದ್ದ. ನ್ಯಾಯ ಕೇಳಿಕೊಂಡು ಬಂದ ಹುಡುಗಿಗೆ ತಾನೇ ಕಿರುಕುಳ ಕೊಡಲು ಆರಂಭಿಸಿದ್ದ.
ಸಿನಿಮಾಗಳಲ್ಲಿ ಸ್ಲಂ ಹುಡುಗಿಯರನ್ನು ಯಾಮಾರಿಸಿದ ಆಟೋ ಚಾಲಕನನ್ನು ದೂರಕ್ಕೆ ತಳ್ಳಿ ಪೊಲೀಸರೇ ಕಾಮತೃಷೆ ತೀರಿಸಿಕೊಳ್ಳುವ ಕತೆಯಿರುತ್ತೆ. ಆದರೆ, ಈಗ ನಾವು ಹೇಳ್ತಿರೋದು ಯಾವ ಸಿನಿಮಾ ಕತೆಯೂ ಅಲ್ಲ. ಬುದ್ಧಿವಂತರು ಎಂದು ಕರೆಸಿಕೊಳ್ಳುವ ಮಂಗಳೂರು ನಗರದಲ್ಲೇ ಆಗಿರುವ ರಿಯಲ್ ಕತೆ.


ಅಪ್ರಾಪ್ತ ಹುಡುಗಿ ಕಳೆದ ಜನವರಿಯಲ್ಲಿ ಆಟೋ ಚಾಲಕನ ಕಿರುಕುಳ ತಾಳಲಾರದೆ ದೂರು ಹಿಡಿದು ಬಂದಿದ್ದಳು. ಈ ಬಗ್ಗೆ ಆಟೋ ಚಾಲಕನನ್ನು ಗದರಿಸುತ್ತೇನೆಂದು ಹುಡುಗಿಯ ನಂಬರ್ ಪಡೆದಿದ್ದ ಪೊಲೀಸಪ್ಪ ತಾನು ಹೇಳಿದ ಕೆಲಸವನ್ನು ಮಾಡಿದ್ದಾನೆ. ಆದರೆ, ಸದಾ ಕಳ್ಳರು, ದರೋಡೆಕೋರರು, ಪಾಪಿಗಳ ಜೊತೆಗೆ ಇದ್ದುಕೊಂಡಿದ್ದ ಕಾರಣಕ್ಕೋ ಏನೋ, ಆ ಪೊಲೀಸಪ್ಪನಿಗೂ ಅದೇ ವರ್ತನೆ ಬಂದಿದೆ. ಪಾಪದ ಹುಡುಗಿಗೆ ವಿಕೃತ ಕಿರುಕುಳ ನೀಡಲು ಮುಂದಾಗಿದ್ದ. ಸೆಕ್ಸ್ ವಿಚಾರದಲ್ಲಿ ಚಾಟಿಂಗ್ ಮಾಡುತ್ತಾ ಕಿರುಕುಳ ಕೊಟ್ಟಿದ್ದಾನೆ. ತಾನು ಪೊಲೀಸ್, ತನ್ನದೇನೂ ಹೊರಗೆ ಬರುವುದಿಲ್ಲ. ಪಾಪದ ಹುಡುಗಿ ಏನು ಮಾಡುತ್ತಾಳೆಂಬ ದರ್ಪದಲ್ಲಿ ಇಂಥ ಕೃತ್ಯಕ್ಕೆ ಇಳಿದಿದ್ದನೋ ಏನೋ..
ಹುಡುಗಿಯ ಮನೆಯವರು ಪೊಲೀಸ್ ಪೇದೆಯ ಕಿರುಕುಳ ತಾಳಲಾರದೆ, ವಿಧಿ ಕಾಣದೆ ಯಾರೋ ಹೇಳಿದರೆಂದು ಚೈಲ್ಡ್ ಲೈನ್ ಸಂಸ್ಥೆಯವರಲ್ಲಿ ವಿಷಯ ಹೇಳಿಕೊಂಡಿದ್ದಾರೆ. ಮೊಬೈಲಿನಲ್ಲಿ ವಿಕೃತವಾಗಿದ್ದ ಚಾಟಿಂಗ್ ರೆಕಾರ್ಡನ್ನು ನೋಡಿದ ಅಲ್ಲಿನ ಸಿಬಂದಿ ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕಂಕನಾಡಿ ನಗರ ಠಾಣೆಯ ಪೇದೆ ಬೆಂಗ್ರೆ ನಿವಾಸಿ ವಿನೋದ್ ನನ್ನು ಬಂಧಿಸಿದ್ದಾರೆ. ಅಲ್ಲದೆ, ಅಪ್ರಾಪ್ತ ಹುಡುಗಿಗೆ ಕಿರುಕುಳ ನೀಡಿದ್ದ ಕಾರಣಕ್ಕೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
ಪೊಲೀಸ್ ಕರ್ತವ್ಯದಲ್ಲಿದ್ದುಕೊಂಡು ಈ ರೀತಿಯ ಕೃತ್ಯ ಮಾಡಬಾರದು ಎಂದು ಖುದ್ದು ಪೊಲೀಸ್ ಕಮಿಷನರ್ ಸಾಹೇಬ್ರೇ ವಿಷಯ ಗೊತ್ತಾಗುತ್ತಲೇ ಖಡಕ್ಕಾಗಿ ಕ್ರಮ ಜರುಗಿಸಲು ಸೂಚಿಸಿದ್ದಾರೆ.
POCSO case is filed against a police constable of Kankandy Town Police. The police constable has been arrested. The arrested has been identified as Vinod.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm