ಬ್ರೇಕಿಂಗ್ ನ್ಯೂಸ್
23-07-21 06:03 pm Headline Karnataka News Network ಕ್ರೈಂ
ಮುಂಬೈ, ಜುಲೈ 23: ತಾಯಿಗೆ ಮಕ್ಕಳು ಹೆಗ್ಗಣ ಆಗಿದ್ದರೂ ಚಿನ್ನವಂತೆ. ಆದರೆ, ಮಕ್ಕಳಿಗೆ ಹಾಗೇನೂ ಇಲ್ವಲ್ಲ. ಇಲ್ಲೊಬ್ಬ 18 ವರ್ಷದ ಹುಡುಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಕುತ್ತಿಗೆ ಅಮುಕಿ ಕೊಲೆ ಮಾಡಿದ್ದಾನೆ. ಹೌದು.. ಮುಂಬೈನ ವಸಾಯಿ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲಿವಾಡದಲ್ಲಿ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಗಂಡ ತೀರಿಕೊಂಡ ಬಳಿಕ 59 ವರ್ಷದ ಮಹಿಳೆ ಕುಡಿಯಲು ತೊಡಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರ ಇಬ್ಬರು ಮಕ್ಕಳು ಮತ್ತು ತಾಯಿ ನಡುವೆ ಕಂದಕ ತಂದಿಟ್ಟಿತ್ತು. ಮೊನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ತಾಯಿ, ಮಕ್ಕಳ ನಡುವೆ ಜಗಳ ಆಗಿತ್ತು.

ಎಂಟನೇ ಕ್ಲಾಸ್ ಓದುತ್ತಿದ್ದ 18 ವರ್ಷದ ಹುಡುಗ, ತನ್ನ ತಂಗಿಯನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾನೆ. ಆಕೆ ಹೊರ ನಡೆಯುತ್ತಿದ್ದಂತೆ, ಮನೆಯ ಬಾಗಿಲನ್ನು ಒಳಗಿಂದ ಲಾಕ್ ಮಾಡಿದ್ದ ಹುಡುಗ ತಾಯಿಯ ಕುತ್ತಿಗೆ ಬೆಲ್ಟ್ ನಲ್ಲಿ ಅದುಮಿದ್ದಾನೆ. ವಿಲವಿಲ ಒದ್ದಾಡಿ ಸಾಯುವ ತನಕವೂ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಸ್ವಲ್ಪ ಹೊತ್ತಿನ ಬಳಿಕ ತಂಗಿ ಮನೆಗೆ ಮರಳಿದ್ದು, ಅಲ್ಲಿನ ದೃಶ್ಯ ನೋಡಿ ಹೌಹಾರಿದ್ದಾಳೆ. ತಾಯಿಯನ್ನೇ ಕೊಲೆ ಮಾಡಿದ್ದು ನೋಡಿ ಸ್ಥಳೀಯರನ್ನು ಕರೆದಿದ್ದಾಳೆ. ಬಳಿಕ ವಸಾಯಿ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ತಾಯಿಯನ್ನು ಕೊಲೆಗೈದ ಬಳಿಕ ಅಲ್ಲಿಯೇ ಕುಳಿತಿದ್ದ ಮಗನನ್ನು ವಶಕ್ಕೆ ಪಡೆದಿದ್ದಾರೆ. ತಂದೆಯ ಉಳಿಸಿದ್ದ ಹಣವನ್ನು ತಾಯಿ ಕುಡಿತಕ್ಕೇ ಮುಗಿಸುತ್ತಿದ್ದಾಳೆಂದು ಕೊಲೆ ಮಾಡಿದ್ದಾಗಿ ಹುಡುಗ ಹೇಳಿದ್ದಾನಂತೆ.
29-10-25 09:12 pm
Bangalore Correspondent
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
30-10-25 11:28 am
Udupi Correspondent
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡ...
29-10-25 10:47 pm
ಕೊಳಲನ್ನೂದುತ್ತ ಈಜಿನಲ್ಲಿ ವಿಶ್ವದಾಖಲೆ ; ಅಲೋಶಿಯಸ್...
29-10-25 06:55 pm
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm