ವಾಸ್ತವ್ಯ ಇಲ್ಲದ ಮನೆಗೆ ನುಗ್ಗಿದ ಕಳ್ಳರು, ಹೊರಗಡೆ ಇರಿಸಿದ್ದ ಎರ್ಟಿಗಾ ಕಾರು ಎಗರಿಸಿ ಪರಾರಿ !

23-07-21 04:57 pm       Headline Karnataka News Network   ಕ್ರೈಂ

ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯೆಲ್ಲ ತಡಕಾಡಿ ಏನೂ ಸಿಗದೆ, ಹೊರಗಡೆ ನಿಲ್ಲಿಸಿದ್ದ ಎರ್ಟಿಗಾ ಕಾರನ್ನು ಕದ್ದೊಯ್ದ ಘಟನೆ ಉಳ್ಳಾಲ ಮುಕ್ಕಚ್ಚೇರಿಯಲ್ಲಿ ನಡೆದಿದೆ. 

ಉಳ್ಳಾಲ, ಜು.23: ವಾಸ್ತವ್ಯ ಇಲ್ಲದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯೆಲ್ಲ ತಡಕಾಡಿ ಏನೂ ಸಿಗದೆ, ಹೊರಗಡೆ ನಿಲ್ಲಿಸಿದ್ದ ಎರ್ಟಿಗಾ ಕಾರನ್ನು ಕದ್ದೊಯ್ದ ಘಟನೆ ಉಳ್ಳಾಲ ಮುಕ್ಕಚ್ಚೇರಿಯಲ್ಲಿ ನಡೆದಿದೆ. 

ಮುಕ್ಕಚ್ಚೇರಿ ನಿವಾಸಿ ಅಬ್ಬು ಸಾಲಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಬ್ಬು ಸಾಲಿ ಅವರು ಕುಟುಂಬ ಸಮೇತ ವಿದೇಶದಲ್ಲಿ ನೆಲೆಸಿದ್ದಾರೆ. ಮುಕ್ಕಚ್ಚೇರಿ ಮನೆಯಲ್ಲಿ ಅಬ್ಬು ಸಾಲಿ ಅವರ ಕಾರು ಚಾಲಕ ಹನೀಫ್ ಎಂಬವರು ವಾಸವಿದ್ದರು. 

ಹನೀಫ್ ಅವರು ಬಕ್ರೀದ್ ಹಬ್ಬದ ಸಲುವಾಗಿ ಊರಿಗೆ ತೆರಳಿದ್ದು ಇಂದು ಬೆಳಗ್ಗೆ ಕೆಲಸಕ್ಕೆ ವಾಪಸಾಗುತ್ತಿದ್ದಂತೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಯಾರೂ ವಾಸ್ತವ್ಯವಿಲ್ಲದ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮನೆಯ ಕಪಾಟುಗಳನ್ನು ತಡಕಾಡಿದ್ದಾರೆ. ಕೊನೆಗೆ ಮನೆಯೊಳಗೆ ಕಾರಿನ ಕೀ ದೊರಕಿದ್ದು ಅಂಗಳದಲ್ಲಿ ನಿಲ್ಲಿಸಲಾಗಿದ್ದ ಎರ್ಟಿಗಾ ಕಾರನ್ನು ಕದ್ದೊಯ್ದಿದ್ದಾರೆ. 

ಸ್ಥಳಕ್ಕೆ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಅವರ ತಂಡ ಭೇಟಿ ನೀಡಿದ್ದು ಬೆರಳಚ್ಚು ತಜ್ಞರು, ಶ್ವಾನದಳದಿಂದ ತಪಾಸಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Mangalore Thieves break into house find nothing finally steal Car in Ullal. Residents of this house are working abroad and the only car driver was said to be at the house maintaining the car. When the driver came to duty today the car was missing and the house door was broke. Ullal police are now investigating the case.