ಬ್ರೇಕಿಂಗ್ ನ್ಯೂಸ್
30-06-21 04:15 pm Headline Karnataka News Network ಕ್ರೈಂ
Photo credits : ANI @ ANI
ಭುವನೇಶ್ವರ್, ಜೂನ್ 30: ಪೋರ್ಜರಿ ದಾಖಲೆಗಳನ್ನು ಬಳಸ್ಕೊಂಡು ಲಕ್ಷಾಂತರ ಸಿಮ್ ಕಾರ್ಡ್ ಏಕ್ಟಿವೇಟ್ ಮಾಡಿ ಕ್ರಿಮಿನಲ್ ಚಟುವಟಿಕೆಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು ಖಾಸಗಿ ಟೆಲಿಕಾಂ ಕಂಪನಿಯ ಏಳು ಮಂದಿಯನ್ನು ಬಂಧಿಸಿದ್ದಾರೆ.
ಜಾಲಕ್ಕೆ ಸಂಬಂಧಿಸಿ 16,147 ಏಕ್ಟಿವ್ ಸಿಮ್ ಕಾರ್ಡ್ ಹಾಗೂ 110 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮಹೇಶ್ವರ್ ಬಾರಿಕ್(38), ರಜನಿಜಾಂತ ಪಾಣಿಗ್ರಹಿ(30), ಸುಬ್ರತ್ ಕುಮಾರ್ ಪಾಣಿಗ್ರಹಿ(24), ಸುಕಾಂತ ಕುಮಾರ್ ದಾಸ್ (30), ಸ್ರೀನಿಬಾಶ್ ಘಡಾಯಿ(21), ರಾಜೇಶ್ ಕುಮಾರ್ ಸೇಥಿ (29), ಮಂಗಲಮಾಯ ಮಿಶ್ರಾ (27) ಎಂದು ಗುರುತಿಸಲಾಗಿದೆ.


ಸಿಮ್ ಪಡೆಯಲು ಬರುವ ಅಸಲಿ ಗ್ರಾಹಕರದ್ದೇ ಐಡಿ ದಾಖಲೆ ಪ್ರತಿಗಳನ್ನು ಮತ್ತು ಫೋಟೊಗಳನ್ನು ಪೋರ್ಜರಿ ಮಾಡಿ ನಕಲಿಯಾಗಿ ಸಿಮ್ ಕಾರ್ಡ್ ತಯಾರಿಸುತ್ತಿದ್ದರು. ಲಕ್ಷಾಂತರ ಸಿಮ್ ಕಾರ್ಡ್ ಗಳನ್ನು ನಕಲಿ ಜಾಲದಲ್ಲಿ ಏಕ್ಟಿವೇಟ್ ಮಾಡಿ, ಅವುಗಳನ್ನು ವ್ಯವಸ್ಥಿತವಾಗಿ ಒಡಿಶಾ ಹೊರಭಾಗಕ್ಕೆ ಮಾರಾಟ ಮಾಡಲಾಗುತ್ತಿತ್ತು.
ಒಡಿಶಾ ಹೊರಭಾಗಕ್ಕೆ ಯಾವುದೇ ವಿಳಾಸ ದಾಖಲೆ ಪಡೆಯದೆ ಸಿಮ್ ಗಳನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ ಸಿಮ್ ಪಡೆದವರನ್ನು ಟ್ರೇಸ್ ಮಾಡುವುದು ಸಾಧ್ಯವಿಲ್ಲ. ನಕಲಿ ಸಿಮ್ ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.
ಈ ಗ್ಯಾಂಗ್ ಎರಡು ಲಕ್ಷಕ್ಕೂ ಹೆಚ್ಚು ನಕಲಿ ಸಿಮ್ ಗಳನ್ನು ಮಾರಾಟ ಮಾಡಿರುವ ಅಂದಾಜಿದೆ. ದೇಶದ ಭದ್ರತೆಗೆ ಇದೊಂದು ಅಪಾಯಕಾರಿ ಆಗಬಲ್ಲ ನಡೆಯಾಗಿದ್ದು ನಕಲಿ ಸಿಮ್ ಬಳಸಿ ಭದ್ರತೆಗೆ ಸವಾಲಾಗುವ ರೀತಿಯ ಅಪರಾಧ ಕೃತ್ಯಗಳನ್ನು ಎಸಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Commissioner of Police, Bhubaneswar-Cuttack, S K Priyadarsi said the pre-activated SIMs were sold outside the state.
29-10-25 09:12 pm
Bangalore Correspondent
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 06:55 pm
Mangalore Correspondent
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
29-10-25 10:09 pm
Bangalore Correspondent
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm