ಉಳ್ಳಾಲ: ಅಕ್ರಮ ಮರಳುಗಾರಿಕೆಗೆ ಇಲ್ಲ ಲಾಕ್ಡೌನ್, ಮಫ್ತಿಯಲ್ಲಿ ಮರಳು ಲಾರಿ ಜಪ್ತಿ ಮಾಡಿದ ಇನ್ಸ್ ಪೆಕ್ಟರ್ !

14-05-21 11:16 am       Mangalore Correspondent   ಕ್ರೈಂ

ನಕಲಿ ಪರ್ಮಿಟ್ ಬಳಸಿ ಸ್ಥಳೀಯರಿಗೆ ಮರಳು ಪೂರೈಸುವ ಧಂದೆ ರಾಜಾರೋಷವಾಗಿ ನಡೆಯುತ್ತಿದ್ದು ಇಂದು ಬೆಳಗ್ಗೆ ಉಳ್ಳಾಲ ಪಿಐ ಸಂದೀಪ್ ಅವರು ಮಫ್ತಿಯಲ್ಲಿ ಬಂದು ಅಕ್ರಮ ಮರಳು ಟಿಪ್ಪರನ್ನು ಜಪ್ತಿ ಮಾಡಿದ್ದಾರೆ. 

ಉಳ್ಳಾಲ, ಮೇ 14: ಉಳ್ಳಾಲ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆಗೆ ಲಾಕ್ಡೌನ್ ನಿರ್ಬಂಧ ಎಫೆಕ್ಟ್ ತಟ್ಟಿಲ್ಲ.‌ ನಕಲಿ ಪರ್ಮಿಟ್ ಬಳಸಿ ಸ್ಥಳೀಯರಿಗೆ ಮರಳು ಪೂರೈಸುವ ಧಂದೆ ರಾಜಾರೋಷವಾಗಿ ನಡೆಯುತ್ತಿದ್ದು ಇಂದು ಬೆಳಗ್ಗೆ ಉಳ್ಳಾಲ ಪಿಐ ಸಂದೀಪ್ ಅವರು ಮಫ್ತಿಯಲ್ಲಿ ಬಂದು ಅಕ್ರಮ ಮರಳು ಟಿಪ್ಪರನ್ನು ಜಪ್ತಿ ಮಾಡಿದ್ದಾರೆ. 

ತೊಕ್ಕೊಟ್ಟು ಬಳಿಯ ಕಾಪಿಕಾಡಿನ ಗೇರು ಸಂಶೋಧನಾ ಕೇಂದ್ರದ ಬಳಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರನ್ನು ಮಫ್ತಿಯಲ್ಲಿ ಬಂದ ಇನ್ಸ್ ಪೆಕ್ಟರ್ ಸಂದೀಪ್ ಅವರು ತಡೆದಿದ್ದು ಈ ವೇಳೆ ಟಿಪ್ಪರ್ ಚಲಾಯಿಸುತ್ತಿದ್ದ ಚಾಲಕ ಪರಾರಿಯಾಗಿದ್ದಾನೆ. ಯಾವುದೋ ಒಂದು ದೂರ ಪ್ರಯಾಣದ ಪರ್ಮಿಟ್ ಬಳಸಿ ಒಳರಸ್ತೆಗಳಲ್ಲಿ ಸ್ಥಳೀಯವಾಗಿ ಮರಳು ಪೂರೈಸುವ ಧಂಧೆ ಎಗ್ಗಿಲ್ಲದೆ ನಡೆಯುತ್ತಲೇ ಇವೆ.

ಓವರ್ ಬ್ರಿಡ್ಜ್ ಜಂಕ್ಷನ್ ನಲ್ಲಿ ಮರಳು ದಂಧೆಯ ಪುಢಾರಿಗಳು ರಸ್ತೆ ಅಂಚಿನಲ್ಲಿ ನಿಂತು ಮರಳುಗಾರಿಕೆಗೆ ಎಸ್ಕಾರ್ಟ್ ನೀಡುವ ದೃಶ್ಯ ಸಾಮಾನ್ಯವಾಗಿದೆ. ಅಕ್ರಮ‌ ಮರಳುಗಾರಿಕೆ ನಡೆಸುವ ಟಿಪ್ಪರ್ ಗಳಲ್ಲಿ ಸರಿಯಾಗಿ ನಂಬರ್ ಪ್ಲೇಟ್ ಗಳನ್ನೂ ಹಾಕಲಾಗುತ್ತಿಲ್ಲ. ಅದಕ್ಕೆ ಪೂರಕ ಎಂಬಂತೆ ಇಂದು ವಶ ಪಡಿಸಿಕೊಂಡಿರುವ ಟಿಪ್ಪರ್ ನ ಹಿಂದೆ ನಂಬರ್ ಪ್ಲೇಟ್ ಇದ್ದಿರಲಿಲ್ಲ.

Illegal Sand Truck Seized by Ullal Police Inspector Sandeeo at Thokottu in Mangalore. The truck was moving without permit.