ಬಂದೂಕು ತಯಾರಿಸಿ ಮಾರುತ್ತಿದ್ದ ವ್ಯಕ್ತಿ ಸೇರಿ ನಾಲ್ವರ ಸೆರೆ ; ಸುಳ್ಯ ಪೊಲೀಸರ ಕಾರ್ಯಾಚರಣೆ

11-05-21 12:24 pm       Mangalore Correspondent   ಕ್ರೈಂ

ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ದಿವಾಕರ ಆಚಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

ಸುಳ್ಯ, ಮೇ 11: ಇಲ್ಲಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ದಿವಾಕರ ಆಚಾರಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು ದಿವಾಕರ ಆಚಾರಿ ತನ್ನ ಮನೆ ಬಳಿಯ ಶೆಡ್ ನಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದು ಇದರ ಜೊತೆಗೆ ಬಂದೂಕು ಮತ್ತು ಸಜೀವ ತೋಟೆಯನ್ನು ವಶಕ್ಕೆ ಪಡೆದಿದ್ದಾರೆ. 

ಆರೋಪಿ ದಿವಾಕರ ಇತರ ಕೆಲವು ಮಂದಿಗೆ ಬಂದೂಕು ತಯಾರಿಸಿ ನೀಡಿದ್ದಾಗಿ ತಿಳಿಸಿದ್ದು ಅದರಂತೆ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾರ್ತಿಕ್ ನೂಚಿಲ, ಅಶೋಕ್ ಬಿಳಿನೆಲೆ ಮತ್ತು ಹಾಸನ ಮೂಲದ ಚಂದನ್ ಎಂಬವರನ್ನು ಬಂಧಿಸಿ ಅವರಲ್ಲಿದ್ದ ನಾಡಕೋವಿಯನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರ ವಿರುದ್ಧ ಅಕ್ರಮ ಕೋವಿ ಇರಿಸಿಕೊಂಡ ಬಗ್ಗೆ ಪ್ರಕರಣ ದಾಖಲಾಗಿದೆ.

Man arrested for illegally manufacturing guns with the aim of selling the same. Based on the information collected, Sullia police circle inspector, Navinchandra Jogi and police sub-inspector Omana raided the house and seized the weapons.