ಬ್ರೇಕಿಂಗ್ ನ್ಯೂಸ್
18-02-21 09:02 pm Mangaluru Correspondent ಕ್ರೈಂ
ಉಳ್ಳಾಲ, ಫೆ.18: ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ಮೊಬೈಲ್ ಅಂಗಡಿಗೆ ಬಂದಿದ್ದ ಗಾಂಜಾ ವ್ಯಸನಿ ರೌಡಿಯೊಬ್ಬ ದಾಂಧಲೆಗೈದ ಘಟನೆ ಗುರುವಾರ ಸಂಜೆ ನಡೆದಿದೆ.
ರೌಡಿಯ ವಿರುದ್ಧ ದೂರು ಕೊಟ್ಟ ಮೊಬೈಲ್ ಅಂಗಡಿಯ ಯುವಕನಿಗೆ ಪೊಲೀಸರ ಸಮ್ಮುಖದಲ್ಲೇ ಕಲ್ಲೆಸೆದಿದ್ದಲ್ಲದೆ, ನಂತರ ಮೊಬೈಲ್ ಅಂಗಡಿಗೆ ತೆರಳಿ ತಲವಾರು ಝಳಪಿಸಿ ಬೆದರಿಸಿದ್ದಾನೆ. ಸ್ಮಾರ್ಟ್ ಸಿಟಿ ಕಟ್ಟಡದಲ್ಲಿರುವ ಸ್ಪೋರ್ಟ್ಸ್ ವಿನ್ನರ್ ಎನ್ನುವ ಕ್ರೀಡಾ ಪರಿಕರಗಳ ಮಳಿಗೆಯ ಪಾಲುದಾರ ಎನ್ನಲಾದ ಉಳ್ಳಾಲದ ಸುಭಾಷ್ ನಗರ ನಿವಾಸಿ ಸವಾದ್ ಯಾನೆ ಶವ್ವ ಎಂಬಾತನೇ ಧಾಂದಲೆಗೈದ ರೌಡಿ. ಈತ ಸಂಜೆ ಹೊತ್ತಿಗೆ ಅದೇ ಕಟ್ಟಡದಲ್ಲಿರುವ ಬ್ಲಾಸ್ಟ್ ಎಂಬ ಮೊಬೈಲ್ ಅಂಗಡಿಗೆ ತೆರಳಿ ಕ್ಷುಲ್ಲಕ ಕಾರಣ ಎತ್ತಿ ಅಲ್ಲಿನ ಗಾಜು ಇನ್ನಿತರ ಸೊತ್ತುಗಳನ್ನು ಚಾಕುವಿನಿಂದ ಒಡೆದು ಹಾಕಿದ್ದಾನೆ ಎನ್ನಲಾಗಿದೆ.
ಅಂಗಡಿ ಮಾಲೀಕ ನೌಫಾಲ್ ಕೂಡಲೇ (ಸಂಜೆ 6.40ರ ವೇಳೆಗೆ) ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದು ಬಂದಿದ್ದಾರೆ. ಈ ವೇಳೆ ಕಟ್ಟಡದಲ್ಲೇ ಇದ್ದ ರೌಡಿ ಸವಾದ್ ಪೊಲೀಸರಿಬ್ಬರು ನೋಡುತ್ತಿದ್ದಂತೆಯೇ ದೂರು ನೀಡಿದ್ದ ನೌಫಾಲನ್ನು ಗುರಿಯಾಗಿಸಿ ಜಲ್ಲಿ ಕಲ್ಲುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಧಾಂದಲೆ ನಡೆಸಿದ್ದಾನೆ. ಎಸೆದ ಕಲ್ಲುಗಳು ಅಲ್ಲಿ ನೆರೆದಿದ್ದ ಸಾರ್ವಜನಿಕರ ಮೇಲೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿದೆ.
ಪೊಲೀಸರು ತೆರಳಿದ ನಂತರ ಮತ್ತೆ ಬಂದ ಸವಾದ್ ಮೊಬೈಲ್ ಅಂಗಡಿಯತ್ತ ತೆರಳಿ ಮತ್ತೆ ಅಲ್ಲಿ ಬಾಟಲಿಯನ್ನು ಒಡೆದು ತಲವಾರು ಝಲಪಿಸಿದ್ದಾನೆಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಮತ್ತೆ ಬಂದ ಪಿ.ಎಸ್.ಐ ರೇವಣ ಸಿದ್ದಯ್ಯ ಬಳಿ ಅಲ್ಲಿನ ವ್ಯಾಪಾರಿಗಳು ಘಟನೆಯ ಬಗ್ಗೆ ವಿವರಿಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದಾರೆ. ಸವಾದ್ ಈ ಹಿಂದೆಯೂ ಇದೇ ಕಟ್ಟಡದಲ್ಲಿ ಗಲಾಟೆ ನಡೆಸಿದ್ದನೆನ್ನಲಾಗಿದೆ. ಸವಾದ್ ಮಾದಕ ವ್ಯಸನಿಯಾಗಿದ್ದು ಪದೇ ಪದೇ ಕಟ್ಟಡದಲ್ಲಿ ಗಲಾಟೆ ನಡೆಸುತ್ತಾ ಬಂದಿದ್ದಾನೆ. ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಅಲ್ಲಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದ್ದು ರೌಡಿ ನಡೆಸಿದ ಭಯಾನಕ ಕೃತ್ಯಗಳು ದಾಖಲಾಗಿವೆ. ಕೊನೆಗೆ, ಮತ್ತೆ ಕಟ್ಟಡಕ್ಕೆ ಎಂಟ್ರಿ ಕೊಟ್ಟ ಸವಾದ್ ನನ್ನು ಅಲ್ಲಿನ ನಿವಾಸಿಗಳೇ ಹಿಡಿದಿಟ್ಟು ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿ ವರ್ತಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.
Miscreant Damages Mobile shop using stones and also shows sword to public and creates panic at Thokottu in Mangalore. The Konaje Polie have arrested the accused.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am