ಬ್ರೇಕಿಂಗ್ ನ್ಯೂಸ್
04-02-21 01:15 pm Headline Karnataka News Network ಕ್ರೈಂ
ಚಿಕ್ಕಮಗಳೂರು, ಫೆ.4: ಕಲ್ಲು ಕೋರೆಯಲ್ಲಿ ದುಡಿಯುತ್ತಿದ್ದ 15 ವರ್ಷದ ಬಾಲಕಿಯನ್ನು ಐದಾರು ತಿಂಗಳಿಂದ 17ಕ್ಕೂ ಹೆಚ್ಚು ಮಂದಿ ನಿರಂತರವಾಗಿ ಅತ್ಯಾಚಾರ ನಡೆಸಿ ಶೋಷಣೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಶೃಂಗೇರಿ ಠಾಣೆಯಲ್ಲಿ ಗ್ಯಾಂಗ್ ರೇಪ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಬೆಳಗಾವಿ ಜಿಲ್ಲೆಯ ಶಿಗ್ಗಾಂವಿ ಮೂಲದವಳಾಗಿದ್ದು ಕೂಲಿ ಕೆಲಸಕ್ಕೆಂದು ಕುಟುಂಬದ ಜೊತೆ ಬಂದಿದ್ದಳು. ಮೂರು ವರ್ಷದ ಹಿಂದೆ ಬಾಲಕಿ ತಾಯಿ ತೀರಿಕೊಂಡಿದ್ದು, ಬಳಿಕ ಆಕೆಯ ಚಿಕ್ಕಮ್ಮ ತನ್ನ ಜೊತೆಗೆ ಕುಳ್ಳಿರಿಸಿ ಓದಿಸುವುದಾಗಿ ಹೇಳಿಕೊಂಡಿದ್ದಳು. ಶಾಲೆಗೆ ಹೋಗುತ್ತಿದ್ದ ಬಾಲಕಿ ಹತ್ತನೇ ಕ್ಲಾಸ್ ನಲ್ಲಿ ಕಲಿಯುತ್ತಿದ್ದಳು. ಆದರೆ, ಈ ನಡುವೆ ಕೊರೊನಾದಿಂದಾಗಿ ಶಾಲೆ ಇಲ್ಲದ ಕಾರಣ ತನ್ನ ಜೊತೆ ಜಲ್ಲಿ ಕ್ರಷರ್ ನಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಳು.
ಶೃಂಗೇರಿಯ ಎಂಜಿಆರ್ ಕ್ರಷರ್ ನಲ್ಲಿ ಬಾಲಕಿಯ ಚಿಕ್ಕಮ್ಮ ಗೀತಾ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಕೆಲಸಕ್ಕಾಗಿ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಸರದಿಯಂತೆ ಅಲ್ಲಿನ ಕೆಲಸಗಾರರು ಅತ್ಯಾಚಾರ ನಡೆಸಿದ್ದಾರೆ. ಮೊದಲಿಗೆ ಅಲ್ಲಿಯೇ ಲಾರಿ ಚಾಲಕನಾಗಿದ್ದ ಗಿರೀಶ್ ಎಂಬಾತ ಅತ್ಯಾಚಾರ ನಡೆಸಿದ್ದು, ಬಳಿಕ ಅಭಿ ಎಂಬ ಯುವಕನಿಗೆ ಹುಡುಗಿಯನ್ನು ಪರಿಚಯ ಮಾಡಿದ್ದ. ಅಭಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ ಫೋಟೋ, ವಿಡಿಯೋ ತೆಗೆದಿಟ್ಟು ಬ್ಲಾಕ್ ಮೇಲ್ ಮಾಡಿ ತನ್ನ ಗೆಳೆಯರಿಗೂ ಗ್ಯಾಂಗ್ ರೇಪ್ ಮಾಡಲು ನೀಡಿದ್ದಾನೆ. ಈ ವಿಚಾರ ಆಕೆಯ ಚಿಕ್ಕಮ್ಮನಿಗೆ ಗೊತ್ತಿದ್ದು, ಆಕೆಗೆ ಹಣ ನೀಡಿ ತಂಡ ಬಾಯಿ ಮುಚ್ಚಿಸಿದ್ದರು.


ಕಳೆದ ಐದಾರು ತಿಂಗಳಲ್ಲಿ 17ಕ್ಕೂ ಹೆಚ್ಚು ಮಂದಿ ಗ್ಯಾಂಗ್ ರೇಪ್ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ವಿಷಯ ತಿಳಿದ ಚೈಲ್ಡ್ ಲೈನ್ ಸಂಸ್ಥೆಯವರು ಜ.30ರಂದು ಶೃಂಗೇರಿ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಪೊಲೀಸರು ಆಕೆಯ ಆಂಟಿ ಗೀತಾ ಸಹಿತ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಅಭಿ, ಗಿರೀಶ್, ಮಣಿಕಂಠ, ಅಶ್ವಥ್ ಗೌಡ, ರಾಜೇಶ್, ವಿಕಾಸ್, ಅಮಿತ್, ಸಂತೋಷ್, ದೀಕ್ಷಿತ್, ಸಂತೋಷ್, ನಿರಂಜನ್, ನಾರಾಯಣ ಗೌಡ, ಅಭಿ ಗೌಡ, ಯೋಗೀಶ್ ಸೇರಿದಂತೆ ಜಲ್ಲಿ ಕ್ರಷರ್ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಸದ್ಯಕ್ಕೆ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಾಲಕಿಯ ಪ್ರಕಾರ 30ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಆರೋಪಿಗಳ ವಿರುದ್ಧ ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದು ಮತ್ತು ಪೋಕ್ಸೋ ಹಾಗೂ ಅಪ್ರಾಪ್ತೆಯನ್ನು ಜಲ್ಲಿ ಕ್ರಶರ್ ನಲ್ಲಿ ಕಾರ್ಮಿಕೆಯಾಗಿ ದುಡಿಸಿಕೊಂಡಿರುವ ವಿಚಾರದಲ್ಲಿ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಬಿಜೆಪಿ ಪ್ರಮುಖರ ಆಪ್ತರು ಎನ್ನಲಾಗುತ್ತಿದ್ದು, ಇದಕ್ಕಾಗೇ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಸಿ.ಟಿ. ರವಿ ಸುಮ್ಮನಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಆರೋಪ ಕೇಳಿಬರುತ್ತಿದ್ದಂತೆ ಎಚ್ಚತ್ತುಕೊಂಡ ಸಂಸದೆ ಶೋಭಾ ಕರಂದ್ಲಾಜೆ, ಈ ಬಗ್ಗೆ ಚಿಕ್ಕಮಗಳೂರು ಪೊಲೀಸ್ ವರಿಷ್ಠರ ಜೊತೆ ಮಾತನಾಡಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಆ ಹುಡುಗಿ ಯಾಕೆ ಬಂದಿದ್ದಾಳೆ, ಆರೋಪಿತ ಮಹಿಳೆ ಇನ್ನೆಷ್ಟು ಅಪ್ರಾಪ್ತ ಮಕ್ಕಳನ್ನು ಹೀಗೆ ಬಳಸಿಕೊಂಡಿದ್ದಾಳೆ ಎಂದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಶೃಂಗೇರಿಯಲ್ಲಿ ನಡೆದಿರುವ ಪ್ರಖರಣ ಅತ್ಯಂತ ಖಂಡನೀಯ, ಈ ಕುರಿತು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
— Shobha Karandlaje (@ShobhaBJP) February 3, 2021
ಪ್ರಕರಣ ಅಪ್ರಾಪ್ತ ಬಾಲಕಿಯ ಭವಿಷ್ಯದ ವಿಚಾರವಾದುದರಿಂದ, ಮಾಧ್ಯಮ ಹೇಳಿಕೆಗಳನ್ನು ನೀಡದೆ, ಪ್ರತಿನಿತ್ಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. pic.twitter.com/QfrLrT7Use
In a Shocking Incident, a 15-year-old Girl has been raped for months by 17 Men in Sringeri, Chikmagalur. Police are now investigating the case.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm