ಬ್ರೇಕಿಂಗ್ ನ್ಯೂಸ್
11-12-25 09:53 pm HK News Desk ಕ್ರೈಂ
ಹಾಸನ, ಡಿ.11 : ಕೊಲೆ ಮಾಡಿ ಶವದೆದುರು ಸೆಲ್ಪಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಆರೋಪಿಯನ್ನು ಹಾಸನ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದು 24 ಗಂಟೆಯಲ್ಲಿ ಆರೋಪಿ ಉಲ್ಲಾಸ್ವ ಕ್ಯಾತೆ ಸೆರೆಯಾಗಿದ್ದಾನೆ.
ಆರೋಪಿಗಳ ಸೆರೆಗೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಐದು ತಂಡಗಳನ್ನು ರಚಿಸಿದ್ದರು. ಕೀರ್ತಿ ಎಂಬಾತನ ಕೊಲೆ ನಂತರ ಉಲ್ಲಾಸ್ ಶವದೆದುರು ಸೆಲ್ಫಿ ವಿಡಿಯೋ ಮಾಡಿ ಹಂಚಿಕೊಂಡಿದ್ದ. ಮರ್ಡರ್ ಆಯ್ತು.. ಹೊಡೆದಿದ್ದೀವಿ, ಹೊಡೆದಿದ್ದೀವಿ.. ಮರ್ಡರ್ ಎಂದು ಕೂಗುತ್ತಾ ಸೆಲ್ಪಿ ವಿಡಿಯೋ ಮಾಡಿದ್ದ. ಡಿ.9 ರಂದು ಬಿಟ್ಟಗೌಡನಹಳ್ಳಿಯಲ್ಲಿ ಹಾಸನ ತಾಲ್ಲೂಕಿನ ಹೂವಿನಹಳ್ಳಿ ಯುವಕ ಆಟೋ ಚಾಲಕ ಕೀರ್ತಿ ಎಂಬ ಯುವಕನ ಕೊಲೆಯಾಗಿತ್ತು.
ಉಲ್ಲಾಸ್ ಮತ್ತು ಸ್ನೇಹಿತರು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ನಂತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು ಸ್ಥಳ ಮಹಜರು ವೇಳೆ ಕೃತ್ಯಕ್ಕೆ ಬಳಸಿದ್ದ ಕಲ್ಲು, ಕೊಲೆ ಮಾಡಿದ ಜಾಗ ತೋರಿಸಿದ್ದಾನೆ.
ಕುಡಿದು ಗಲಾಟೆ ಮಾಡಿ ಉಲ್ಲಾಸ್ ಮೇಲೆ ಕೀರ್ತಿ ಹಲ್ಲೆ ಮಾಡಿದ್ದ. ಇದರ ಸೇಡು ತೀರಿಸಿಕೊಳ್ಳಲು ಎಣ್ಣೆ ಪಾರ್ಟಿ ನೆಪದಲ್ಲಿ ಉಲ್ಲಾಸ್ ಮತ್ತು ಸ್ನೇಹಿತರು ಕೀರ್ತಿಯನ್ನು ಕರೆದೊಯ್ದಿದ್ದು ಕೊಲೆ ಮಾಡಿದ್ದರು. ಡಿ.7ರಂದು ಹೊಡೆದಿದ್ದು ಮರುದಿನ ಸ್ನೇಹಿತರ ಜೊತೆ ಬಂದು ಕೀರ್ತಿಯನ್ನು ಎಣ್ಣೆ ಪಾರ್ಟಿಗೆ ಕರೆದೊಯ್ದಿದ್ದ. ಕುಡಿದ ಮತ್ತಿನಲ್ಲಿ ಕೀರ್ತಿಗೆ ಹಲ್ಲೆಗೈದು ನಂತರ ಎದೆ ಭಾಗಕ್ಕೆ ಕಲ್ಲು ಎತ್ತಿ ಹಾಕಿ ಕೀರ್ತಿಯನ್ನು ಕೊಂದಿದ್ದರು. ಪ್ರಮುಖ ಆರೋಪಿ ಸೈಕೋ ಕಿಲ್ಲರ್ ಉಲ್ಲಾಸ್ ಬಂಧನವಾಗುತ್ತಲೇ ಕೊಲೆಯ ಕಾರಣವೂ ಬಯಲಾಗಿದೆ.
In a shocking case where the killer filmed a selfie video beside the victim’s body, Hassan police have arrested the prime accused, Ullas, from Bengaluru within 24 hours of the incident coming to light.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 11:28 am
HK News Staffer
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm