ಬ್ರೇಕಿಂಗ್ ನ್ಯೂಸ್
02-06-25 04:01 pm Mangalore Correspondent ಕ್ರೈಂ
ಉಳ್ಳಾಲ, ಜೂ 2 : ಕೇರಳದಿಂದ ಕದ್ದು ಕೂಡಿ ಹಾಕಿದ್ದ ಸುಮಾರು 24ಕ್ಕೂ ಹೆಚ್ಚು ಜಾನುವಾರುಗಳನ್ನ ಕಂಟೇನರ್ ಲಾರಿಯಲ್ಲಿ ಕೇರಳದಿಂದ ಮಂಗಳೂರಿಗೆ ಸಾಗಿಸುತ್ತಿದ್ದ ವೇಳೆ ತಲಪಾಡಿ ಟೋಲ್ ಗೇಟ್ ಬಳಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನ ರಕ್ಷಿಸಿದ್ದಾರೆ.
ನಿನ್ನೆ (ಭಾನುವಾರ) ಮುಂಜಾನೆ 1 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪಿಎಸ್ ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ, ತಲಪಾಡಿ ಟೋಲ್ ಗೇಟ್ ಬಳಿ ಜಾನುವಾರು ಸಾಗಾಟದ ಲಾರಿ ಬರುವುದನ್ನೇ ಕಾದು ಕುಳಿತಿತ್ತು. ಈ ವೇಳೆ ಕೇರಳದಿಂದ ಬಂದ ಕಂಟೇನರ್ ಲಾರಿಯ ನ್ನ ತಡೆದು ತಪಾಸಣೆ ನಡೆಸಿದಾಗ ಸುಮಾರು 24 ಜಾನುವಾರುಗಳನ್ನ ಅಮಾನುಷ, ಹಿಂಸಾತ್ಮಕ ರೀತಿಯಲ್ಲಿ,ಸಾಗಿಸುತ್ತಿರುವುದು ಪತ್ತೆಯಾಗಿದೆ. ಪೋಲೀಸರು ಕಂಟೇನರ್ ಚಾಲಕ ಉತ್ತರ ಪ್ರದೇಶ, ಮುಜಾಫರ್ ನಗರ ಜಿಲ್ಲೆಯ ಸಹಾನ್ ಪೂರ್ ನಿವಾಸಿ ಆಸಿಫ್(25) ಎಂಬಾತನನ್ನ ಬಂಧಿಸಿದ್ದು, ಆತನ ಜೊತೆಯಲ್ಲಿದ್ದ ಮತ್ತೋರ್ವ ಪರಾರಿಯಾಗಿದ್ದಾನೆ.
ಜಾನುವಾರುಗಳನ್ನ ಕೇರಳದಿಂದ ಕದ್ದು ಸಾಗಿಸುತ್ತಿರುವ ಬಗ್ಗೆ ಬಂಧಿತ ಲಾರಿ ಡ್ರೈವರ್ ಆಸಿಫ್ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಜಾನುವಾರುಗಳನ್ನ ಎಲ್ಲೋ ಕೂಡಿಟ್ಟು ಬಳಿಕ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ನಡೆಸಿದ ಆರೋಪಿ ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ಠಾಣೆಯಲ್ಲಿ ಕಳೆದ ಹತ್ತು ವರುಷಗಳಿಂದ ಖಾಕಿ ಸಮವಸ್ತ್ರದಲ್ಲೇ ಝಂಡಾ ಹೊಡಿರುವ ಸ್ಪೆಷಲ್ ಬ್ರಾಂಚ್ ಅತ್ಯನುಭವಿ ಪೊಲೀಸ್ ಇದ್ದರೂ ಈ ಭಾಗದಲ್ಲಿ ಅಕ್ರಮ ದನ ಸಾಗಣೆ, ಮರಳುಗಾರಿಕೆ, ಕೊಲೆ, ದರೋಡೆಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಖಡಕ್ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ನಗರವನ್ನ ಅಕ್ರಮ ಚಟುವಟಿಕೆಗಳಿಂದ ಮುಕ್ತವನ್ನಾಗಿಸಲು ಪೊಲೀಸರಿಗೆ ಆದೇಶಿಸಿದ ಕಾರಣ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಫ್ರೀ ಹ್ಯಾಂಡ್ ಆಗಿ ನುಗ್ಗಿ ಭೇಟೆಯಾಡುವಂತಾಗಿದೆ.
ಹತ್ತು ವರ್ಷದಿಂದ ಒಂದೇ ಠಾಣೆಯಲ್ಲೇ ಝಂಡಾ !
ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಒಂದೇ ಠಾಣೆಯಲ್ಲಿ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನ ವರ್ಗಾವಣೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಕಳೆದ ಹತ್ತು ವರ್ಷದಿಂದ ಒಂದೇ ಠಾಣೆಯಲ್ಲೇ ಝಂಡಾ ಹೂಡಿರುವ ಪೊಲೀಸರನ್ನು ಗುರುತಿಸಿ ಎತ್ತಂಗಡಿ ಮಾಡುವಂತೆ ಜನಸಾಮಾನ್ಯರು ಆಗ್ರಹಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆಗೆ ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mangalore CCB police intercepted a container truck near Talapady toll gate around 1 AM on Sunday, acting on a tip-off. The truck was transporting over 24 cattle in an inhumane and violent manner from Kerala to Mangaluru. The operation, led by PSI Sharanappa Bhandari, resulted in the arrest of driver Asif (25) from Saharanpur, Uttar Pradesh. Another accused managed to flee.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm