ಬ್ರೇಕಿಂಗ್ ನ್ಯೂಸ್
01-04-25 10:42 pm Bangalore Correspondent ಕ್ರೈಂ
ಬೆಂಗಳೂರು, ಎ.1 : ಒಂದು ಮುತ್ತಿಗೆ 50 ಸಾವಿರ, ಜೊತೆಗೆ ಸುತ್ತಾಡಿದರೆ 15 ಲಕ್ಷ..! ಹೌದು.. ಇದು ಬೆಂಗಳೂರಿನ ಟೀಚರಮ್ಮನ ಲವ್ ಕಮ್ ಬ್ಲಾಕ್ಮೇಲ್ ಸ್ಟೋರಿ. ಮಗುವನ್ನು ಪ್ರೀಸ್ಕೂಲ್ ಒಯ್ದು ಪರಿಚಯ ಆಗಿದ್ದ ಟೀಚರಮ್ಮ ಕೊಟ್ಟ ಮುತ್ತು ಉದ್ಯಮಿಯ ಜೀವ ಬಾಯಿಗೆ ಬಂದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ಎಂಬ ಟೀಚರ್ ಇದರ ಕಥಾನಾಯಕಿಯಾಗಿದ್ದು ಉದ್ಯಮಿಯ ಬ್ಲಾಕ್ಮೇಲ್ ಮಾಡಿ ಕಂಬಿ ಎಣಿಸುತ್ತಿದ್ದಾಳೆ. 2023ರಲ್ಲಿ ತನ್ನ ಮಗುವನ್ನು ಪ್ರೀಸ್ಕೂಲ್ಗೆ ಸೇರಿಸಲು ಹೋದ ಉದ್ಯಮಿಯೊಬ್ಬರು ಶ್ರೀದೇವಿಗೆ ಪರಿಚಯ ಆಗಿದ್ದರು. ದಿನವೂ ಮಗುವನ್ನ ಪ್ಲೇ ಹೋಮ್ಗೆ ಬಿಡಲು ಹೋಗುತ್ತಿದ್ದ ಉದ್ಯಮಿ ಹಾಗೂ ಶ್ರೀದೇವಿ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿತ್ತು. ಇದೇ ವೇಳೆ, ಶ್ರೀದೇವಿ ತನ್ನ ಪ್ರೀಸ್ಕೂಲ್ ನಿರ್ವಹಣೆಗೆ ಅಂತ ಉದ್ಯಮಿಯಿಂದ 2 ಲಕ್ಷ ರೂ. ಸಾಲ ಪಡೆದಿದ್ದಾರೆ. ಸ್ನೇಹ ಬೆಳೆದಿದ್ದ ಕಾರಣ ಶ್ರೀದೇವಿಗೆ ಸುಲಭದಲ್ಲಿ ಹಣ ಕೊಟ್ಟಿದ್ದಾರೆ.






2024ರ ನವೆಂಬರ್ನಲ್ಲಿ ತನ್ನ ತಂದೆಗೆ ಹುಷಾರಿಲ್ಲ ಅಂತ ಮತ್ತೆ 2 ಲಕ್ಷ ರೂಪಾಯಿ ಕೇಳಿದ್ದಾಳೆ. ಹಣ ವಾಪಸ್ ಕೇಳಿದಾಗ ಕಷ್ಟ ಸರ್, ಶಾಲೆ ಪಾರ್ಟ್ನರ್ ಆಗಿ ಎಂದಿದ್ದರಂತೆ. ಈ ಗ್ಯಾಪಲ್ಲಿ ಉದ್ಯಮಿ ಹಾಗೂ ಶ್ರೀದೇವಿ ಮಧ್ಯೆ ಸಲುಗೆ ಬೆಳೆದು ಸುತ್ತಾಟ ಶುರುವಾಗಿತ್ತು. ಉದ್ಯಮಿ ಕೂಡ ಶ್ರೀದೇವಿ ಜೊತೆ ಮಾತಾಡಲೆಂದೇ ಹೊಸ ಸಿಮ್, ಫೋನ್ ಖರೀದಿ ಮಾಡಿದ್ದರು.
50 ಸಾವಿರಕ್ಕೊಂದು ಮುತ್ತು!
2025ರ ಜನವರಿ ಮೊದಲ ವಾರದಲ್ಲಿ ಉದ್ಯಮಿ ತನ್ನ ಹಣ ವಾಪಸ್ ಕೇಳಿದ್ದರು. ಆಗ ನೇರವಾಗಿ ಉದ್ಯಮಿ ಮನೆಗೆ ತೆರಳಿದ್ದ ಶ್ರೀದೇವಿ, ಸಲುಗೆಯಿಂದ ಮಾತನಾಡಿದ್ದಲ್ಲದೆ ತುಟಿಗೆ ಮುತ್ತಿಟ್ಟು ಮತ್ತೆ 50 ಸಾವಿರ ಕಿತ್ತುಕೊಂಡಿದ್ದಳಂತೆ. ಬಳಿಕ ನಿನ್ನ ಜೊತೆ ರಿಲೇಷನ್ ಶಿಪ್ನಲ್ಲಿ ಇರ್ತೇನೆಂದು ಹೇಳಿ ಉದ್ಯಮಿಯನ್ನು ಯಾಮಾರಿಸಿದ್ದಳು.
ಮುತ್ತು ಕೊಟ್ಟರೆ ಹಣ ಬರುತ್ತೆ ಎಂದು ತಿಳಿದ ಕೂಡಲೇ ಶ್ರೀದೇವಿಯ ಅಸಲಿ ಆಟ ಶುರುವಾಗಿತ್ತು. ಈ ವೇಳೆ ಮತ್ತೆ 15 ಲಕ್ಷ ಹಣಕ್ಕೆ ಶ್ರೀದೇವಿ ಡಿಮ್ಯಾಂಡ್ ಮಾಡಿದ್ದಾರೆ. ಪದೇ ಪದೆ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ರಿಂದ ಉದ್ಯಮಿ ತನ್ನಲ್ಲಿದ್ದ ಸಿಮ್ಮನ್ನು ಮುರಿದು ಹಾಕಿದ್ದರು. ಆನಂತರ, ಮಾರ್ಚ್ 12ರಂದು ಉದ್ಯಮಿ ಪತ್ನಿಗೆ ಕರೆ ಮಾಡಿ ಮಕ್ಕಳ ಸ್ಕೂಲ್ ಟಿ.ಸಿ ಕೊಡುತ್ತೇನೆ, ನಿಮ್ಮ ಪತಿಯನ್ನ ಸ್ಕೂಲ್ಗೆ ಕಳಿಸಿ ಎಂದಿದ್ದಾರೆ. ಇದರ ಬೆನ್ನಲ್ಲೇ ಉದ್ಯಮಿ ಪ್ರೀ ಸ್ಕೂಲ್ಗೆ ತೆರಳಿದ್ದು ಶ್ರೀದೇವಿ ಜೊತೆಗಿದ್ದ ಸಾಗರ್, ಗಣೇಶ್ ಎಂಬ ಯುವಕರು ನೇರವಾಗಿ ಆವಾಜ್ ಹಾಕಿದ್ದಾರೆ. ಸಾಗರ್ ಜೊತೆ ಎಂಗೇಜ್ಮೆಂಟ್ ಆಗಿದೆ. ನೀನು ಯಾಕೆ ಹುಡುಗಿ ತಿರುಗಾಡ್ತಿದ್ಯಾ? ಈ ವಿಚಾರ ನಿನ್ನ ಪತ್ನಿಗೆ ತಿಳಿಸ್ತೇನೆಂದು ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಆಗ ಉದ್ಯಮಿ ಶ್ರೀದೇವಿಗೆ ಬಾಯ್ ಫ್ರೆಂಡ್ ಇರೋ ವಿಚಾರ ನನಗೆ ಗೊತ್ತಿಲ್ಲ. ಶ್ರೀದೇವಿ ಜೊತೆ ಊಟ, ತಿಂಡಿ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.
ಮಾರ್ಚ್ 17ರಂದು ಮತ್ತೆ ಉದ್ಯಮಿಗೆ ಶ್ರೀದೇವಿ ಕರೆ ಮಾಡಿದ್ದು, 15 ಲಕ್ಷ ಕೊಡುವಂತೆ ಪೀಡಿಸಿದ್ದಾಳೆ. ಹಣ ಕೊಟ್ಟರೆ ಅಶ್ಲೀಲ ವಿಡಿಯೋ, ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದ್ರೆ ನಿನ್ನ ಪತ್ನಿಗೆ ತೋರಿಸಿ ಸಂಸಾರ ಹಾಳು ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾಳೆ. ನಿರಂತರ ಬ್ಲ್ಯಾಕ್ ಮೇಲ್ ಹಾಗೂ ಸುಲಿಗೆಯಿಂದ ಬೇಸತ್ತ ಉದ್ಯಮಿ ಕೊನೆಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಟೀಚರ್ ಶ್ರೀದೇವಿ ಕಳ್ಳಾಟ ಬೆಳಕಿಗೆ ಬಂದಿದ್ದು ಶ್ರೀದೇವಿ, ಗಣೇಶ್ ಮತ್ತು ಸಾಗರ್ ಅವರನ್ನು ಬಂಧಿಸಿದ್ದಾರೆ.
The Bengaluru Central Crime Branch (CCB) arrested three individuals, including a kindergarten teacher, for allegedly blackmailing and extorting money from a businessman. The accused, identified as Sridevi Rudagi, Ganesh Kale, and Sagar More, all hail from Vijayapura district.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm