ಬ್ರೇಕಿಂಗ್ ನ್ಯೂಸ್
29-03-25 10:33 pm HK News Desk ಕ್ರೈಂ
ಹೈದರಾಬಾದ್, ಮಾ.29 : ಹೈದರಾಬಾದ್, ರಾಜಾಮುಂಡ್ರಿಯಲ್ಲಿ ಫೇಮಸ್ ಪ್ಯಾಸ್ಟರ್ ಆಗಿದ್ದ ಪಡಗಾಲ ಪ್ರವೀಣ್ ಕುಮಾರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೊಂದು ಪ್ರೀ ಪ್ಲಾನ್ಡ್ ಮರ್ಡರ್ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೈದರಾಬಾದ್ ಬಳಿಯ ತಿರುಮಲಗಿರಿ ಎಂಬಲ್ಲಿ ಪ್ಯಾಸ್ಟರ್ ಆಗಿದ್ದ ಪ್ರವೀಣ್ ಕುಮಾರ್ ಹೈದರಾಬಾದ್ ನಿಂದ ತನ್ನ ಬುಲೆಟ್ ಬೈಕಿನಲ್ಲಿ ರಾಜಾಮುಂಡ್ರಿಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಮಾ.18ರ ರಾತ್ರಿ ಪ್ರವೀಣ್ ಕುಮಾರ್ ತನ್ನ ಬುಲೆಟ್ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ಸ್ಕಿಡ್ ಆಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಬೈಕ್ ಸ್ಕಿಡ್ ಆಗಿದ್ದು, ಇವರು ನೆಲಕ್ಕುರುಳಿದ ಅವರ ಮೇಲೆಯೇ ಬೈಕ್ ಬಿದ್ದಿತ್ತು. ರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದ್ದರೂ, ಯಾರೂ ಇದನ್ನು ಗಮನಿಸಿರಲಿಲ್ಲ. ಮರುದಿನ ಬೆಳಗ್ಗೆ 9 ಗಂಟೆ ವೇಳೆಗೆ ಪೊಲೀಸರ ಗಮನಕ್ಕೆ ಬಂದಿತ್ತು. ಸಿಸಿಟಿವಿ ಆಧರಿಸಿ ಪೊಲೀಸರು ಬೈಕ್ ಸ್ಕಿಡ್ ಆಗಿ ಬಿದ್ದು ಪ್ರವೀಣ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಆದರೆ ಸ್ಥಳೀಯ ಕ್ರಿಶ್ಚಿಯನ್ ಪ್ರಮುಖರು ಮತ್ತು ಪ್ರವೀಣ್ ಕುಟುಂಬಸ್ಥರು ಈ ಘಟನೆಯ ಹಿಂದೆ ಬೇರೇನೋ ಸಂಚು ಆಗಿದೆ ಎನ್ನುತ್ತಿದ್ದಾರೆ. ಅಪಘಾತ ಅನ್ನುವುದಕ್ಕಿಂತಲೂ ಇದರ ಹಿಂದೆ ಏನೋ ಸಂಚು ಆಗಿರುವುದಾಗಿ ಸಂಶಯ ಪಡುತ್ತಿದ್ದಾರೆ. ಹೀಗಾಗಿ ಓಪನ್ ಪೋಸ್ಟ್ ಮಾರ್ಟಂ ಆಗಬೇಕು ಮತ್ತು ಘಟನೆಯ ಸಮಗ್ರ ತನಿಖೆ ಆಗಬೇಕೆಂದು ಆಗ್ರಹ ಮಾಡಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಎಸ್ಪಿ ನರಸಿಂಹ ಕಿಶೋರ್ ತನಿಖೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ. ಸಿಸಿಟಿವಿ ಪ್ರಕಾರ, ಲಾರಿ ಮತ್ತು ಕಾರು ಸಂಚರಿಸಿದ ಸಂದರ್ಭದಲ್ಲಿ ದೊಡ್ಡದಾಗಿ ಧೂಳು ಎದ್ದಿತ್ತು. ಇದರಿಂದಾಗಿ ವಾತಾವರಣ ಮಸುಕಾಗಿ ಬೈಕ್ ಸ್ಕಿಡ್ ಆಗಿ ಬಿದ್ದಿರುವಂತೆ ತೋರುತ್ತಿದೆ. ಲಾರಿ ಮತ್ತು ಕಾರು ಯಾರದ್ದೆಂದು ಪತ್ತೆ ಮಾಡಬೇಕಷ್ಟೆ. ಇದರ ಹಿಂದೆ ಏನಾದರೂ ಸಂಚು ಅಡಗಿದ್ಯಾ ಎನ್ನುವುದನ್ನು ತನಿಖೆ ಮಾಡಬೇಕು ಎಂದಿದ್ದಾರೆ. ಕುಟುಂಬದ ದೂರಿನಂತೆ ಸಂಶಯಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪಡಿಗಾಲ ಪ್ರವೀಣ್ ಕುಮಾರ್ ಧಾರ್ಮಿಕ ಚಟುವಟಿಕೆಗಳಿಗಾಗಿ ಹೆಸರಾಗಿದ್ದರು. ಪಶ್ಚಿಮ ಗೋದಾವರಿ ಜಿಲ್ಲೆಯ ಚಾಗಲ್ಲು ಎಂಬಲ್ಲಿಗೆ ಕ್ರಿಶ್ಚಿಯನ್ ಸಮುದಾಯದ ಸಮ್ಮೇಳನ ಒಂದಕ್ಕೆ ಪ್ರವೀಣ್ ಕುಮಾರ್ ಬೈಕಿನಲ್ಲಿ ಹೊರಟಿದ್ದರು. ಆದರೆ ಮರುದಿನ ನಿಗೂಢ ರೀತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪ್ರವೀಣ್ ಕುಮಾರ್ ಪತ್ತೆಯಾಗಿದ್ದಾರೆ. ಪ್ಯಾಸ್ಟರ್ ಸಾವಿನ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಿದ್ದಾರೆ.
Pagadala Praveen Kumar, a Christian preacher from SBI Colony near Tirumalagiri in Hyderabad, allegedly died in a road accident early on Tuesday. Praveen, a former software engineer who later became a preacher, was traveling to Rajahmundry when the accident occurred on National Highway 16.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm