ಬ್ರೇಕಿಂಗ್ ನ್ಯೂಸ್
13-02-25 10:14 pm Mangalore Correspondent ಕ್ರೈಂ
ಉಳ್ಳಾಲ, ಫೆ.13: ಉಳ್ಳಾಲ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕಳ್ಳತನ, ದರೋಡೆ ಕೃತ್ಯಗಳು ಹೆಚ್ಚತೊಡಗಿವೆ. ಇತ್ತೀಚೆಗೆ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಬೆನ್ನಲ್ಲೇ ಉಳ್ಳಾಲ ಠಾಣೆಯ ಪಿಎಸ್ ಐ ಒಬ್ಬರಿದ್ದ ಜೀಪಿನಿಂದಲೇ ಪೊಲೀಸ್ ವಾಕಿ ಟಾಕಿಯನ್ನೇ ಕಳವುಗೈಯಲಾಗಿತ್ತು. ಇದೀಗ ಹಾಡಹಗಲೇ ನಿಲ್ಲಿಸಿದ್ದ ವಾಹನಗಳ ಹೆಲ್ಮೆಟ್ ಗಳನ್ನೇ ಕಳ್ಳರು ಎಗರಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ.
ರಾ.ಹೆ. 66 ರ ಕೊಲ್ಯದ ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಪೋಸ್ಟ್ ಡೆಲಿವರಿ ಕಾರ್ಯ ನಿರ್ವಹಿಸುತ್ತಿರುವ ಯುವತಿಯೋರ್ವರು ಕಚೇರಿ ಹೊರಗಡೆ ಸ್ಕೂಟರಲ್ಲಿಟ್ಟಿದ್ದ ಹೆಲ್ಮೆಟನ್ನ ಬುಧವಾರ ಬೆಳಗ್ಗೆ ಕಳವುಗೈಯಲಾಗಿದೆ. ಸ್ಕೂಟರ್ ಒಂದರಲ್ಲಿ ಟಿಪ್ ಟಾಪ್ ಡ್ರೆಸ್ ಹಾಕ್ಕೊಂಡು ಬಂದ ಯುವಕನೋರ್ವ ತನ್ನ ಸ್ಕೂಟರ್ ನಿಲ್ಲಿಸಿ, ಓಡಿ ಬಂದು ಯುವತಿಯ ಸ್ಕೂಟರಿಂದ ಹೆಲ್ಮೆಟನ್ನ ಎಗರಿಸಿ ಪರಾರಿಯಾಗಿದ್ದಾನೆ. ಯುವಕನ ಹೆಲ್ಮೆಟ್ ಕಳ್ಳತನದ ಐನಾತಿ ಕೃತ್ಯ ಹೆದ್ದಾರಿ ಅಂಚಿನ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿರುವ ಅಂಚೆ ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬುಧವಾರ ಬೆಳಗ್ಗೆ 9 ಗಂಟೆ ವೇಳೆಗೆ ಹೆಲ್ಮೆಟ್ ಕಳ್ಳತನವಾಗಿದ್ದು, ಸಿಬ್ಬಂದಿ ಯುವತಿ ಪೋಸ್ಟ್ ಗಳನ್ನ ವಿತರಿಸಲು ಸ್ಕೂಟರ್ ಬಳಿ ತೆರಳಿದಾಗ ಹೆಲ್ಮೆಟ್ ಇಲ್ಲದೆ ತೀವ್ರ ಹುಡುಕಾಟ ನಡೆಸಿದ್ದಾರೆ. ಬಳಿಕ ಅಂಚೆ ಕಚೇರಿಯ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳನ ಕೃತ್ಯ ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನಗಳು ಕಳವಾದರೆ ಉಳ್ಳಾಲ ಠಾಣೆಗೆ ದೂರು ಕೊಟ್ಟರೆ ಪೊಲೀಸರು ಎಫ್ ಐಆರ್ ಬರೆಯುತ್ತಾರೆಯೇ ಹೊರತು ಕಳವಾದ ವಾಹನಗಳ ಬಗ್ಗೆ ಸುಳಿವು ನೀಡಿದರೂ ಶೋಧ ನಡೆಸುವ ಗೋಜಿಗೆ ಹೋಗೋದಿಲ್ಲವೆಂಬ ಆರೋಪಗಳಿವೆ. ಇಂತಹ ಪೊಲೀಸಿಂಗ್ ವ್ಯವಸ್ಥೆಯಿರುವಾಗ ಒಂದು, ಒಂದೂವರೆ ಸಾವಿರ ಬೆಲೆಬಾಳುವ ಹೆಲ್ಮೆಟ್ ಕಳವಿನ ಬಗ್ಗೆ ಯಾರಾದರೂ ಪೊಲೀಸ್ ದೂರು ನೀಡಲು ಸಾಧ್ಯವೇ? ಮನೆಗಳಲ್ಲಿ ನಗ, ನಗದು ಕಳವಾದರೂ ಕಡಿಮೆ ಲೆಕ್ಕ ತೋರಿಸಿ ಕದ್ದ ಮಾಲಲ್ಲೂ ಪಾಲು ಪಡೆಯುವ ಅಧಿಕಾರಿಗಳು ಉಳ್ಳಾಲ ಠಾಣೆಯಲ್ಲಿರಲು ಕಳ್ಳರಿಗೂ ಯಾರ ಭಯವೂ ಇಲ್ಲದಂತಾಗಿದೆ.
ಇನ್ನು ಉಳ್ಳಾಲದಾದ್ಯಂತ ರಾತ್ರಿಯಾಗುತ್ತಿದ್ದಂತೆ ಅಕ್ರಮ ಮರಳು ಧಂದೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಉಳ್ಳಾಲ ಮಾತ್ರವಲ್ಲದೆ ಕೊಣಾಜೆ ಠಾಣಾ ವ್ಯಾಪ್ತಿಯ ಹೂ ಹಾಕುವ ಕಲ್ಲಿನ ಕುಗ್ರಾಮಕ್ಕೂ ಮಟ್ಕಾ ಧಂದೆ ವ್ಯಾಪಿಸಿದ್ದರೂ ಅಕ್ರಮಗಳ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಯುತ್ತಿಲ್ಲ.
#Mangalore Post man helmet stolen in broad daylight near #Kolya, video goes viral. #LiveRobbery pic.twitter.com/j48UBzvl64
— Headline Karnataka (@hknewsonline) February 13, 2025
Mangalore Post man helmet stolen in broad daylight near Kolya, video goes viral.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am