ಬ್ರೇಕಿಂಗ್ ನ್ಯೂಸ್
18-01-25 10:28 am Mangalore Correspondent ಕ್ರೈಂ
ಪುತ್ತೂರು, ಜ.18: ಮಗನಿಗೆ ಗುಂಡಿಕ್ಕಲು ಹೋಗಿ ಪತ್ನಿ ಬಲಿಯಾಗಿದ್ದು ಇದರಿಂದ ನೊಂದುಕೊಂಡ ಪತಿಯೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ನೆಕ್ರಾಜೆಯಲ್ಲಿ ನಡೆದಿದೆ.
ನೆಕ್ರಾಜೆ ಗ್ರಾಮದ ರಾಮಚಂದ್ರ ಗೌಡ(53) ಆತ್ಮಹತ್ಯೆ ಮಾಡಿಕೊಂಡರೆ, ಅವರ ಪತ್ನಿ ವಿನೋದ(45) ಗುಂಡೇಟಿಗೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ರಾಮಚಂದ್ರ ಗೌಡ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದಿದ್ದು ಮಗನ ಬಗ್ಗೆ ತಂದೆ ಸಿಟ್ಟಾಗಿ ಕೋವಿ ತೆಗೆದುಕೊಂಡು ಬಂದಿದ್ದರು. ಮಗನಿಗೆ ಗುರಿಯಿಟ್ಟು ಗುಂಡು ಹಾರಿಸಲು ಯತ್ನಿಸಿದಾಗ, ಪತ್ನಿ ವಿನೋದ ತಡೆಯಲು ಬಂದಿದ್ದರು.
ಪತಿಯನ್ನು ಹಿಂದಕ್ಕೆ ದೂಡುತ್ತಲೇ ಬೆಡ್ ರೂಮಿಗೆ ತಳ್ಳಲು ಯತ್ನಿಸಿದಾಗ, ಕೋವಿ ಟ್ರಿಗ್ಗರ್ ಒತ್ತಲ್ಪಟ್ಟು ಪತ್ನಿಯ ಎದೆಗೆ ಗುಂಡು ಹೊಕ್ಕಿತ್ತು. ಇದರಿಂದ ಪತ್ನಿ ವಿನೋದ ತೀವ್ರ ಗಾಯಗೊಂಡು ನೆಲಕ್ಕುರುಳಿ ಪ್ರಾಣ ಕಳಕೊಂಡಿದ್ದಾರೆ. ಪತ್ನಿ ನೆಲಕ್ಕೆ ಬಿದ್ದಿದ್ದನ್ನು ನೋಡಿ ಭಯಗೊಂಡು ಇನ್ನು ತಾನು ಕೂಡ ಬದುಕುವುದಿಲ್ಲ ಎಂದು ಹೇಳಿ ರಬ್ಬರ್ ಗಿಡಕ್ಕೆ ಹಾಕಲು ತಂದಿದ್ದ ಕೀಟ ನಾಶಕವನ್ನು ರಾಮಚಂದ್ರ ಗೌಡ ಕುಡಿದು ಪತ್ನಿ ಬಿದ್ದ ಜಾಗದಲ್ಲೇ ಬಿದ್ದುಕೊಂಡಿದ್ದಾರೆ.
ಮಗ ಪ್ರಶಾಂತ್ ಕಣ್ಣೆದುರಲ್ಲೇ ಘಟನೆ ನಡೆದಿದ್ದು ಪತಿ- ಪತ್ನಿ ದುರಂತ ಸಾವು ಕಂಡಿದ್ದಾರೆ. ಕುಡಿತದ ಚಟ, ಮಗನ ಮೇಲಿನ ಸಿಟ್ಟು, ಕೈಗೆ ಬಂದ ಬಂದೂಕು ಮನೆಯೊಳಗೆ ಸ್ಮಶಾನ ಸೃಷ್ಟಿಸಿದೆ. ಈ ಹಿಂದೆಯೂ ರಾಮಚಂದ್ರ ಗೌಡ ಬಂದೂಕು ಹಿಡಿದು ಪತ್ನಿ, ಮಗನನ್ನು ಮನೆಯಿಂದ ಓಡಿಸಿದ್ದರು. ಆನಂತರ, ಪತ್ನಿಯ ದೂರಿನಂತೆ ಕೋವಿಯನ್ನು ಡಿಪಾಸಿಟ್ ಮಾಡಲಾಗಿತ್ತು. ಇತ್ತೀಚೆಗೆ ಆನೆ, ಇತರ ಪ್ರಾಣಿಗಳ ಉಪಟಳದಿಂದಾಗಿ ಕೋವಿಯನ್ನು ಮರಳಿ ಮನೆಗೆ ತರಿಸಿಕೊಂಡಿದ್ದರು. ಅದೇ ಕೋವಿಯನ್ನು ಕುಡಿದ ಅಮಲಿನಲ್ಲಿ ಮತ್ತೆ ಹಿಡಿದುಕೊಂಡು ಬಂದಿದ್ದರು. ಲೋಡ್ ಮಾಡಿ ಇಟ್ಟಿದ್ದರಿಂದ ಟ್ರಿಗ್ಗರ್ ಒತ್ತುತ್ತಲೇ ಪತ್ನಿಯ ಪ್ರಾಣ ಹಾರಿ ಹೋಗಿದೆ.
A man in an inebriated condition killed his wife by shooting her and later consumed acid and ended his own life, at Nellur Kemraje village in Sullia on Friday late night. The deceased are Ramachandra Gowda and his wife Vinoda Kumari.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm