ಬ್ರೇಕಿಂಗ್ ನ್ಯೂಸ್
10-12-24 03:59 pm HK News Desk ಕ್ರೈಂ
ನವದೆಹಲಿ, ಡಿ.9: ಒಂದು ಸ್ಮಾರ್ಟ್ ಫೋನ್ ಕೈಗೆ ಸಿಕ್ಕರೆ ಏನೂ ಮಾಡಲು ಸಾಧ್ಯ ಎಂಬುದನ್ನು ಹಲವರು ತೋರಿಸಿಕೊಟ್ಟಿದ್ದಾರೆ. ಸೈಬರ್ ವಂಚಕರು ತಮ್ಮ ಸ್ಮಾರ್ಟ್ ಬುದ್ಧಿಯನ್ನು ಬಳಸಿ ಕೇವಲ ಮೊಬೈಲ್ ಬಳಸಿಯೇ ಹಲವಾರು ಜನರನ್ನು ಯಾಮಾರಿಸಿ ಹಣ ಕಬಳಿಸಿದ್ದನ್ನೂ ನೋಡಿದ್ದೇವೆ. ಸ್ಪೈನ್ ದೇಶದಲ್ಲಿ 26 ವರ್ಷದ ಯುವತಿಯೊಬ್ಬಳು ಕೇವಲ 8 ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರನ್ನು ತನ್ನ ಬಲೆಗೆ ಬೀಳಿಸಿ ಹಣ ಪೀಕಿಸಿದ್ದು ಈಗ ಸುದ್ದಿಯಾಗಿದೆ.
ಸ್ಪೈನ್ ಪೊಲೀಸರು 26 ವರ್ಷದ ಯುವತಿಯನ್ನು ಅರೆಸ್ಟ್ ಮಾಡಿದ್ದು, 311 ವಂಚನೆ ಕೇಸುಗಳಲ್ಲಿ ಆಕೆಯೇ ಆರೋಪಿಯೆಂದು ಕೇಸು ಜಡಿದಿದ್ದಾರೆ. ಈಕೆ, ಕೇವಲ ಸಾಮಾನ್ಯ ಸ್ಮಾರ್ಟ್ ಫೋನ್ ಮತ್ತು ಕೆಲವು ಏಪ್ಸ್ ಗಳನ್ನು ಬಳಸ್ಕೊಂಡು ಯುವಕರನ್ನು ಪರಿಚಯಿಸ್ಕೊಂಡು ಅವರನ್ನೇ ಯಾಮಾರಿಸುತ್ತ ವಂಚನೆ ಮಾಡುತ್ತಿದ್ದಳು. ಕೇವಲ 8 ತಿಂಗಳಲ್ಲಿ 13,500 ಪೌಂಡ್ ಹಣವನ್ನು ಅಂದರೆ, ಅಂದಾಜು 15 ಲಕ್ಷ ರೂ. ಹಣವನ್ನು ವಂಚನೆ ಮೂಲಕ ಸಂಪಾದಿಸಿದ್ದಾಳೆ.
ಸ್ಪೇನ್ ದೇಶದ ಸ್ಯಾನ್ ಸೆಬಾಸ್ಟಿಯನ್ ನಗರದ ಅಜ್ಕೋಟಿಯಾ ಎಂಬಲ್ಲಿ ಯುವತಿಯ ಬಂಧನ ಮಾಡಲಾಗಿದೆ. ಪೊಲೀಸರು ಬಂಧನ ಮಾಡುತ್ತಲೇ ಯುವತಿ ತನ್ನ ವಂಚನೆ ಜಾಲದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇವಳಲ್ಲಿ ಸಾಮಾನ್ಯ ರೀತಿಯ ಸ್ಮಾರ್ಟ್ ಫೋನ್ ಇದ್ದು, ಯುವಕರ ಚಿತ್ರಗಳನ್ನು ಎಐ ತಂತ್ರಜ್ಞಾನದ ಮೂಲಕ ಇನ್ಯಾರದ್ದೋ ಹುಡುಗಿಯರ ಜೊತೆಗಿರುವ ರೀತಿ ಕ್ರಿಯೇಟ್ ಮಾಡುತ್ತಿದ್ದಳು. ಆನಂತರ ಆ ಚಿತ್ರವನ್ನು ಯುವಕನ ಕುಟುಂಬಸ್ಥರಿಗೆ ಕಳಿಸಿಕೊಟ್ಟು ಹಣ ಕೊಡದೇ ಇದ್ದರೆ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದಳು. ಆಮೂಲಕ ಹಣ ಗಿಟ್ಟಿಸಿಕೊಳ್ಳುತ್ತಿದ್ದಳು.
ಪೊಲೀಸರು ಆಕೆಯ ಮೊಬೈಲ್ ತಪಾಸಣೆ ನಡೆಸಿದಾಗ, ಬರೋಬ್ಬರಿ 3500 ಮಂದಿ ಜೊತೆಗೆ ಇದೇ ರೀತಿ ಮೋಸದ ಚಾಟಿಂಗ್ ಮಾಡಿರುವುದು ಕಂಡುಬಂದಿದೆ. ಅವರನ್ನೆಲ್ಲ ಬ್ಲಾಕ್ಮೇಲ್ ಮಾಡಿದ್ದಾಳೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
With the advent of the internet and smartphones, our lives have become increasingly intertwined with these technologies. While some utilise them for personal and societal benefit, others exploit them for malicious purposes.
08-12-25 10:39 pm
Bangalore Correspondent
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಕೆಎಸ್ ಸಿಎ ನೂತನ...
08-12-25 11:26 am
Gangavati Accident, Koppal: ಪ್ರಿ ವೆಡ್ಡಿಂಗ್ ಶೂ...
07-12-25 10:21 pm
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
08-12-25 10:11 pm
Mangalore Correspondent
Mangalore, Puttur, Mahesh Shetty Timarodi: ಪ್...
08-12-25 04:52 pm
ಬಂಡವಾಳ ಇಲ್ಲದೆ ಆದಾಯದ ಅವಕಾಶ ; ಎಸ್ಸೆಸ್ಸೆಲ್ಸಿ, ಪಿ...
08-12-25 01:42 pm
ಮುಂದುವರಿದ ಇಂಡಿಗೋ ಬಿಕ್ಕಟ್ಟು ; ಮಂಗಳೂರಿನಲ್ಲಿ ಡಿ....
08-12-25 11:23 am
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ...
07-12-25 10:45 pm
08-12-25 09:29 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm