ಬ್ರೇಕಿಂಗ್ ನ್ಯೂಸ್
10-12-24 03:59 pm HK News Desk ಕ್ರೈಂ
ನವದೆಹಲಿ, ಡಿ.9: ಒಂದು ಸ್ಮಾರ್ಟ್ ಫೋನ್ ಕೈಗೆ ಸಿಕ್ಕರೆ ಏನೂ ಮಾಡಲು ಸಾಧ್ಯ ಎಂಬುದನ್ನು ಹಲವರು ತೋರಿಸಿಕೊಟ್ಟಿದ್ದಾರೆ. ಸೈಬರ್ ವಂಚಕರು ತಮ್ಮ ಸ್ಮಾರ್ಟ್ ಬುದ್ಧಿಯನ್ನು ಬಳಸಿ ಕೇವಲ ಮೊಬೈಲ್ ಬಳಸಿಯೇ ಹಲವಾರು ಜನರನ್ನು ಯಾಮಾರಿಸಿ ಹಣ ಕಬಳಿಸಿದ್ದನ್ನೂ ನೋಡಿದ್ದೇವೆ. ಸ್ಪೈನ್ ದೇಶದಲ್ಲಿ 26 ವರ್ಷದ ಯುವತಿಯೊಬ್ಬಳು ಕೇವಲ 8 ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರನ್ನು ತನ್ನ ಬಲೆಗೆ ಬೀಳಿಸಿ ಹಣ ಪೀಕಿಸಿದ್ದು ಈಗ ಸುದ್ದಿಯಾಗಿದೆ.
ಸ್ಪೈನ್ ಪೊಲೀಸರು 26 ವರ್ಷದ ಯುವತಿಯನ್ನು ಅರೆಸ್ಟ್ ಮಾಡಿದ್ದು, 311 ವಂಚನೆ ಕೇಸುಗಳಲ್ಲಿ ಆಕೆಯೇ ಆರೋಪಿಯೆಂದು ಕೇಸು ಜಡಿದಿದ್ದಾರೆ. ಈಕೆ, ಕೇವಲ ಸಾಮಾನ್ಯ ಸ್ಮಾರ್ಟ್ ಫೋನ್ ಮತ್ತು ಕೆಲವು ಏಪ್ಸ್ ಗಳನ್ನು ಬಳಸ್ಕೊಂಡು ಯುವಕರನ್ನು ಪರಿಚಯಿಸ್ಕೊಂಡು ಅವರನ್ನೇ ಯಾಮಾರಿಸುತ್ತ ವಂಚನೆ ಮಾಡುತ್ತಿದ್ದಳು. ಕೇವಲ 8 ತಿಂಗಳಲ್ಲಿ 13,500 ಪೌಂಡ್ ಹಣವನ್ನು ಅಂದರೆ, ಅಂದಾಜು 15 ಲಕ್ಷ ರೂ. ಹಣವನ್ನು ವಂಚನೆ ಮೂಲಕ ಸಂಪಾದಿಸಿದ್ದಾಳೆ.
ಸ್ಪೇನ್ ದೇಶದ ಸ್ಯಾನ್ ಸೆಬಾಸ್ಟಿಯನ್ ನಗರದ ಅಜ್ಕೋಟಿಯಾ ಎಂಬಲ್ಲಿ ಯುವತಿಯ ಬಂಧನ ಮಾಡಲಾಗಿದೆ. ಪೊಲೀಸರು ಬಂಧನ ಮಾಡುತ್ತಲೇ ಯುವತಿ ತನ್ನ ವಂಚನೆ ಜಾಲದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇವಳಲ್ಲಿ ಸಾಮಾನ್ಯ ರೀತಿಯ ಸ್ಮಾರ್ಟ್ ಫೋನ್ ಇದ್ದು, ಯುವಕರ ಚಿತ್ರಗಳನ್ನು ಎಐ ತಂತ್ರಜ್ಞಾನದ ಮೂಲಕ ಇನ್ಯಾರದ್ದೋ ಹುಡುಗಿಯರ ಜೊತೆಗಿರುವ ರೀತಿ ಕ್ರಿಯೇಟ್ ಮಾಡುತ್ತಿದ್ದಳು. ಆನಂತರ ಆ ಚಿತ್ರವನ್ನು ಯುವಕನ ಕುಟುಂಬಸ್ಥರಿಗೆ ಕಳಿಸಿಕೊಟ್ಟು ಹಣ ಕೊಡದೇ ಇದ್ದರೆ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದಳು. ಆಮೂಲಕ ಹಣ ಗಿಟ್ಟಿಸಿಕೊಳ್ಳುತ್ತಿದ್ದಳು.
ಪೊಲೀಸರು ಆಕೆಯ ಮೊಬೈಲ್ ತಪಾಸಣೆ ನಡೆಸಿದಾಗ, ಬರೋಬ್ಬರಿ 3500 ಮಂದಿ ಜೊತೆಗೆ ಇದೇ ರೀತಿ ಮೋಸದ ಚಾಟಿಂಗ್ ಮಾಡಿರುವುದು ಕಂಡುಬಂದಿದೆ. ಅವರನ್ನೆಲ್ಲ ಬ್ಲಾಕ್ಮೇಲ್ ಮಾಡಿದ್ದಾಳೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
With the advent of the internet and smartphones, our lives have become increasingly intertwined with these technologies. While some utilise them for personal and societal benefit, others exploit them for malicious purposes.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm