ಬ್ರೇಕಿಂಗ್ ನ್ಯೂಸ್
07-09-24 03:06 pm HK News Desk ಕ್ರೈಂ
ಹೈದರಾಬಾದ್, ಸೆ.7: ಅಪರಿಚಿತರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರಿಗೆ ಸೈನೈಡ್ ಬೆರೆಸಿದ ಪಾನೀಯ ಕೊಟ್ಟು ನೆಲಕ್ಕೆ ಉರುಳುತ್ತಲೇ ಅವರ ಬಳಿಯಿರುವ ಚಿನ್ನ, ನಗದು, ಇನ್ನಿತರ ವಸ್ತುಗಳನ್ನು ದೋಚುತ್ತಿದ್ದ ಮೂವರು ಕಂತ್ರಿ ಮಹಿಳೆಯರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ.
ತೆನಾಲಿ ಮೂಲದ "ಸರಣಿ ಹಂತಕಿಯರು" ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದಾರೆ ಎಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ. ಸೀರಿಯಲ್ ಕೊಲೆಗಳಿಗೆ ಸಂಬಂಧಿಸಿದಂತೆ ಮುನಗಪ್ಪ ರಜಿನಿ, ಮಡಿಯಾಲ ವೆಂಕಟೇಶ್ವರಿ ಮತ್ತು ಗುಲ್ರ ರಮಣಮ್ಮ ಎಂಬವರನ್ನು ಆಂಧ್ರಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇವರು ಸೈನೈಡ್ ಮಿಶ್ರಿತ ಪಾನೀಯಗಳನ್ನು ಸೇವಿಸಿದ ನಂತರ ಸಾಯುತ್ತಿದ್ದರು. ಬಳಿಕ ಹಂತಕಿಯರು ಅವರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು. ಇದೇ ಜೂನ್ನಲ್ಲಿ ನಾಗೂರ್ ಎಂಬ ಮಹಿಳೆಯನ್ನು ಹತ್ಯೆಗೈಯಲಾಗಿತ್ತು. ಈ ಘಟನೆ ಬಳಿಕ ಅವರು ಇನ್ನೂ ಇಬ್ಬರನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಅವರು ಬದುಕುಳಿದಿದ್ದರು.
ಮೂವರು ಹಂತಕಿಯರ ಬಳಿಯಿಂದ ಸೈನೈಡ್ ಹಾಗೂ ಸಾಕ್ಷಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅವರಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಎನ್ನಲಾದ ವ್ಯಕ್ತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಮೂವರೂ ಮಹಿಳೆಯರು ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತೆನಾಲಿ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ತೆನಾಲಿಯ ಈ ಕೃತ್ಯ ಕೇರಳದ ಜಾಲಿ ಜೋಸೆಫ್ ಎಂಬ ಸರಣಿ ಹಂತಕಿಯ ಕೃತ್ಯಗಳನ್ನು ನೆನಪಿಸಿದೆ. ಈಕೆ 14 ವರ್ಷಗಳಲ್ಲಿ ಆರು ಮಂದಿಯನ್ನು ಸೈನೈಡ್ ನೀಡಿ ಕೊಂದಿದ್ದಳು. ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಎಂಬ ಕುಖ್ಯಾತಿ ಕರ್ನಾಟಕದ ಸೈನೈಡ್ ಮಲ್ಲಿಕಾ ಅಲಿಯಾಸ್ ಕೆಂಪಮ್ಮ ಹೆಸರಲ್ಲಿದೆ. 2007ರಲ್ಲಿ ಬೆಂಗಳೂರಿನ ಹೊರವಲಯದಲ್ಲಿ ನಿಗೂಢ ರೀತಿಯಲ್ಲಿ ಅನೇಕ ಮಹಿಳೆಯರು ಹತ್ಯೆಯಾಗಿದ್ದರು. ಆರು ಮಂದಿಯನ್ನು ಈಕೆ ಸೈನೇಡ್ ಮಿಶ್ರಿತ ಆಹಾರ ತಿನ್ನಿಸಿ ಕೊಂದಿದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
They befriended strangers and offered them drinks which were mixed with cyanide to steal gold, cash and other valuables in Andhra Pradesh's Tenali district. Three women, the "serial killers" of Tenali, as claimed by the police, have murdered four people including three women.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
22-12-25 12:26 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am