ಬ್ರೇಕಿಂಗ್ ನ್ಯೂಸ್
25-06-24 04:35 pm Mangalore Correspondent ಕ್ರೈಂ
ಮಂಗಳೂರು, ಜೂನ್ 25: ಹಾಸನ ಜಿಲ್ಲೆ ವ್ಯಾಪ್ತಿಯ ಬಿಸಿಲೆ ಘಾಟ್ ಬಳಿಯ ಪಟ್ಲ ಬೆಟ್ಟಕ್ಕೆ ಪ್ರವಾಸ ತೆರಳಿದ್ದ ಮಂಗಳೂರಿನ ಯುವಕರ ತಂಡವನ್ನು ಅಡ್ಡಗಟ್ಟಿ ಅಲ್ಲಿನ ಜೀಪು ಚಾಲಕರು ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ.
ಮಂಗಳೂರಿನ ಕೊಟ್ಟಾರ ನಿವಾಸಿ ಭವಿತ್ ಪೂಜಾರಿ ಮತ್ತು ಇನ್ನಿತರ ಎಂಟು ಮಂದಿ ಬೈಕಿನಲ್ಲಿ ಪಟ್ಲ ಬೆಟ್ಟಕ್ಕೆ ಭಾನುವಾರ ಚಾರಣ ತೆರಳಿದ್ದರು. ಕುಕ್ಕೆ ಸುಬ್ರಹ್ಮಣ್ಯದಿಂದ 30 ಕಿಮೀ ದೂರದಲ್ಲಿರುವ ಈ ಬೆಟ್ಟದ ತುದಿ ಕಡಿದಾದ ರಸ್ತೆಯಿಂದ ಕೂಡಿದ್ದು, ಎರಡು ಕಿಮೀ ದಾರಿಯನ್ನು ಅತ್ಯಂತ ಕಷ್ಟದಿಂದ ದಾಟಬೇಕಿದೆ. ಅಲ್ಲಿನ ಮಣ್ಣಿನ ರಸ್ತೆಯಲ್ಲಿ ಸಾಮಾನ್ಯ ವಾಹನಗಳು ಸಾಗದೇ ಇರುವುದರಿಂದ ಸ್ಥಳೀಯರು ಜೀಪು ಬಾಡಿಗೆ ಇಟ್ಟಿದ್ದು ಪ್ರವಾಸಿಗರು ಆ ಜೀಪುಗಳ ಮೂಲಕವೇ ತೆರಳಬೇಕೆಂದು ಫರ್ಮಾನು ಮಾಡುತ್ತಿದ್ದಾರೆ. ಅಲ್ಲದೆ, ಹೆಚ್ಚು ಮೊತ್ತವನ್ನು ಪೀಕಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳದಲ್ಲಿ ಪೊಲೀಸರಾಗಲೀ, ಅರಣ್ಯ ಇಲಾಖೆ ಸಿಬಂದಿಯಾಗಲೀ ಇಲ್ಲದೆ, ಜೀಪು ಚಾಲಕರೇ ಕಾರುಬಾರು ಮಾಡುತ್ತಿದ್ದಾರೆ.
ಮಂಗಳೂರಿನಿಂದ ಬೈಕಿನಿಂದ ತೆರಳಿದ್ದ ತಂಡ ಬೆಳಗ್ಗೆ ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲೇ ತಂಡವೊಂದು ಅಡ್ಡಗಟ್ಟಿ ಕಿರಿಕ್ ಮಾಡಿತ್ತು. ಅದನ್ನು ಲೆಕ್ಕಿಸದೆ ಯುವಕರು ಚಾರಣ ತೆರಳಿದ್ದು, ಹಿಂತಿರುಗಿ ಬರುವಾಗ ಗೂಂಡಾಗಳ ತಂಡ ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದೆ. ಬೈಕನ್ನು ನಿಲ್ಲಿಸಿ, ಇಳಿಯಿರಿ. ಮೇಲೆ ಹೋಗುವಂತಿಲ್ಲ. ಹೋಗುವುದಿದ್ದರೆ ನಮ್ಮ ಜೀಪು ಹತ್ತಿ ಹೋಗಿ, ಇಲ್ಲಾಂದ್ರೆ ನಡೆದುಕೊಂಡು ಹೋಗಿ ಎಂದು ಆವಾಜ್ ಹಾಕಿದ್ದಾರೆ. ನೀವು ಯಾರು ಕೇಳೋಕೆ, ನಾವು ಬೈಕಿನಲ್ಲಿ ಹೋಗುತ್ತೇವೆ ಎಂದು ಹೇಳಿದ್ದಕ್ಕೆ, ಪ್ರತಿಯಾಗಿ ಹಲ್ಲೆ ಮಾಡಿದ್ದಾರೆ. ಇವರು ಮಾತನಾಡುವುದು ಮತ್ತು ಜೀಪು ಚಾಲಕರು ಗೂಂಡಾಗಳ ರೀತಿ ಹಲ್ಲೆ ನಡೆಸಲು ಬಂದಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಬಗ್ಗೆ ಹಲ್ಲೆಗೀಡಾದ ಮಂಗಳೂರಿನ ಭವಿತ್ ಪೂಜಾರಿ ಇಮೇಲ್ ಮೂಲಕ ಸಕಲೇಶಪುರ ಸರ್ಕಲ್ ವಿಭಾಗದ ಎಸಳೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಗಗನ್, ಕಿರಣ್, ನಿಶಾಂತ್, ಮದನ್ ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
#BisleGhat fight, #Mangalore #bikers attacked for visiting Ghat without using their Jeeps. Jeep drivers tried to assult the youths who came from Mangalore. A video of this has gone viral on social media. #mangalorenews #BreakingNews pic.twitter.com/2fnWzr8Q1c
— Headline Karnataka (@hknewsonline) June 25, 2024
Bisle Ghat fight, Mangalore bikers attacked for visiting Ghat without using their Jeeps. Jeep drivers tried to assult the youths who came from Mangalore. A video of this has gone viral on social media.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm