ಬ್ರೇಕಿಂಗ್ ನ್ಯೂಸ್
17-05-24 09:52 pm HK News Desk ಕ್ರೈಂ
ಕಾಸರಗೋಡು, ಮೇ 17: ತನ್ನ ಮನೆಯಲ್ಲಿ ಮಲಗಿದ್ದ ಹತ್ತು ವರ್ಷದ ಬಾಲಕಿಯನ್ನು ದುರುಳನೊಬ್ಬ ನಸುಕಿನಲ್ಲಿ ಹೊತ್ತೊಯ್ದು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.
ಮೇ 15ರಂದು ನಸುಕಿನ ಮೂರು ಗಂಟೆ ವೇಳೆಗೆ ಘಟನೆ ನಡೆದಿದ್ದು ಪೊಲೀಸರು ಆರೋಪಿಗೆ ತಲಾಶ್ ನಡೆಸಿದ್ದಾರೆ. ಬಾಲಕಿ ಪ್ರತಿ ದಿನ ತನ್ನ ಅಜ್ಜಿಯ ಜೊತೆಗೆ ಮಲಗುತ್ತಿದ್ದಳು. ಅಂದು ಅಜ್ಜಿ ಸಂಬಂಧಿಕರ ಮನೆಗೆ ತೆರಳಿದ್ದರಿಂದ ಅಜ್ಜನ ಜೊತೆಗೆ ಮಲಗಿದ್ದಳು. ನಸುಕಿನಲ್ಲಿ ಮೂರು ಗಂಟೆಗೆ ಎಂದಿನಂತೆ ಅಜ್ಜ ದನಗಳನ್ನು ಹಾಲು ಕರೆಯಲೆಂದು ತೆರಳಿದ್ದರು. ಕೋಣೆಯ ಬಾಗಿಲನ್ನು ಎಳೆದುಕೊಂಡು ಹೋಗಿದ್ದರು. ಇದೇ ಹೊತ್ತಿನಲ್ಲಿ ಬಾಲಕಿಯನ್ನು ಹೊತ್ತೊಯ್ಯಲಾಗಿತ್ತು. 3.30ಕ್ಕೆ ಅಜ್ಜ ಮರಳಿ ಬಂದು ನೋಡಿದಾಗ, ಬೆಡ್ ನಲ್ಲಿ ಬಾಲಕಿ ಇರಲಿಲ್ಲ.
ಬಾಲಕಿಯನ್ನು ದುರುಳ ಒಂದು ಕಿಮೀ ದೂರಕ್ಕೆ ಹೊತ್ತೊಯ್ದಿದ್ದು, ಬೊಬ್ಬೆ ಹಾಕದಂತೆ ಬಾಯಿಗೆ ಕೈಯನ್ನು ಗಟ್ಟಿ ಹಿಡಿದುಕೊಂಡಿದ್ದ. ಬೊಬ್ಬೆ ಹಾಕಿದರೆ ಕೊಂದು ಹಾಕುತ್ತೇನೆಂದು ಹೆದರಿಸಿ ರಸ್ತೆಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಬಾಲಕಿಯನ್ನು ಬಿಟ್ಟು ಹೋಗಿದ್ದ. ಬೆಳಗ್ಗೆ 5 ಗಂಟೆ ವೇಳೆಗೆ ಬಾಲಕಿ ಅಲ್ಲಿನ ಪರಿಸರದ ಮನೆಯೊಂದಕ್ಕೆ ಹೋಗಿ ಬೆಲ್ ಹಾಕಿದ್ದಾಳೆ. ಬಾಗಿಲು ಬಡಿದರೂ ಎಚ್ಚರಗೊಳ್ಳದ ಕಾರಣ ಪಕ್ಕದ ಮನೆಗೂ ಹೋಗಿ ಬಾಗಿಲು ಬಡಿದಿದ್ದಾಳೆ. ಆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ತನ್ನ ಮನೆಯವರನ್ನು ಕರೆಯುವಂತೆ ತಿಳಿಸಿ, ತಂದೆಯ ಮೊಬೈಲ್ ನಂಬರ್ ಹೇಳಿ ಬರಹೇಳಿದ್ದಾಳೆ.
ತಂದೆ, ತಾಯಿ ಮತ್ತು ಇನ್ನೊಬ್ಬಳು ಸಣ್ಣ ತಂಗಿ ಪಕ್ಕದ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಮನೆಯ ಹಿಂದಿನ ಬಾಗಿಲು ತೆರೆದುಕೊಂಡಿದ್ದರಿಂದ ಅಲ್ಲಿಂದಲೇ ಬಾಲಕಿಯನ್ನು ಹೊತ್ತೊಯ್ದಿದ್ದಾರೆ ಎನ್ನುವ ಸಂಶಯ ಉಂಟಾಗಿತ್ತು. ಪೊಲೀಸರು ಮೊದಲು ರಾಬರಿ ಕೇಸು ದಾಖಲಿಸಿದ್ದರು. ಬಾಲಕಿಯ ಮೆಡಿಕಲ್ ಚೆಕಪ್ ನಲ್ಲಿ ರೇಪ್ ಆಗಿರುವುದು ಕಂಡುಬಂದಿದ್ದರಿಂದ ಪೋಕ್ಸೋ ಕಾಯ್ದೆ ದಾಖಲು ಮಾಡಿದ್ದು ಆರೋಪಿಗೆ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ಮುಖ, ಕುತ್ತಿಗೆಯಲ್ಲಿ ಪರಚಿದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ. (ಮನೋರಮಾ ವರದಿ)
A10-year-old girl sleeping in her house at Padannakkad near Kanhangad in Kerala’s Kasargod district was abducted, sexually assaulted and abandoned one kilometre away in the early hours of Wednesday. The incident occurred when her grandfather briefly stepped out to milk the cow. The rest of the members of the family were asleep. It is suspected that the assailant entered the house when the grandfather went out after opening the front door.
27-03-26 04:49 pm
HK News Staffer
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ...
26-03-26 10:27 pm
ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ...
26-03-26 09:21 pm
27-03-26 04:07 pm
HK News Staffer
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
ಹೊರ್ಮುಜ್ ಜಲಸಂಧಿ ನಿರ್ಬಂಧಿಸಿದ್ದ ಇರಾನ್ ನೌಕಾಪಡೆ ಮ...
26-03-26 09:00 pm
ಮಂಗಳೂರಿಗೆ ಮತ್ತೆರಡು ಬೃಹತ್ ತೈಲ ಟ್ಯಾಂಕರ್ ಹಡಗು ;...
26-03-26 09:31 am
27-03-26 03:38 pm
HK News Staffer
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
27-03-26 10:02 pm
HK News Staffer
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ ; ಮೂವತ್ತು ಅ...
27-03-26 09:32 pm
Puttenahalli, Inspector Ravi, Case: ಪುಟ್ಟೇನಹಳ...
27-03-26 08:37 pm
Rowdy Sheeter Arif Hussain Murder, Mangalore:...
27-03-26 06:51 am