ಬ್ರೇಕಿಂಗ್ ನ್ಯೂಸ್
16-05-24 09:31 pm HK News Desk ಕ್ರೈಂ
ಹೈದರಬಾದ್, ಮೇ.16: ಸಾಕು ನಾಯಿಯನ್ನು ರಸ್ತೆಯಲ್ಲಿ ವಾಕಿಂಗ್ ಒಯ್ಯುತ್ತಿದ್ದಾಗ, ನಾಯಿ ಹತ್ತಿರ ಬಂತೆಂದು ನಾಲ್ವರು ಯುವಕರು ನಾಯಿ ಮತ್ತು ಅದರ ಮಾಲೀಕನಿಗೆ ದೊಣ್ಣೆ ಮತ್ತು ಕಬ್ಬಿಣದ ರಾಡ್ ನಲ್ಲಿ ಯದ್ವಾತದ್ವಾ ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ನಗರದ ಮಧುರಾ ನಗರ್ ಎಂಬಲ್ಲಿ ನಡೆದಿದೆ.
ಮಮೇ 14ರಂದು ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಲ್ವರು ಯುವಕರು ಹಲ್ಲೆ ತಡೆಯಲು ಬಂದ ಮಹಿಳೆಯರಿಗೂ ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಮಧುರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೆಹಮಾನ್ ನಗರ ಎಂಬಲ್ಲಿ ಘಟನೆ ನಡೆದಿದೆ. ಶ್ರೀನಾಥ್ ಮತ್ತು ಅವರ ಪತ್ನಿ ಸ್ವಪ್ನಾ, ತಾಯಿ ರಾಜೇಶ್ವರಿ ಗಂಭೀರ ಹಲ್ಲೆಗೀಡಾದವರು. ನಾಯಿ ತಲೆಗೆ ಗಂಭೀರ ಏಟಾಗಿದ್ದು, ಕೋಮಾ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಾಥ್ ನೆಲಕ್ಕೆ ಬಿದ್ದರೂ ದೊಣ್ಣೆಯಲ್ಲಿ ಎಗ್ಗಿಲ್ಲದೆ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಶ್ರೀನಾಥ್ ತಾಯಿ ಮತ್ತು ಪತ್ನಿ ಮನೆಯಿಂದ ಓಡಿ ಬಂದು ಹಲ್ಲೆಯನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಯುವಕರು ಮಹಿಳೆಯರ ಮೇಲೂ ದೊಣ್ಣೆ ಬೀಸಿದ್ದಾರೆ. ಅಷ್ಟರಲ್ಲಿ ಪರಿಸರದ ಇನ್ನಷ್ಟು ಮಹಿಳೆಯರು ಬಂದಿದ್ದು, ಹಲ್ಲೆಯನ್ನು ತಡೆದಿದ್ದಾರೆ. ಶ್ರೀನಾಥ್ ತಾಯಿ ಕೈಮುಗಿದು ಬಿಟ್ಟು ಬಿಡಿ ಎಂದು ಕೇಳಿಕೊಂಡರೂ, ಯುವಕರು ಮನ ಬಂದಂತೆ ಹಲ್ಲೆ ನಡೆಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧಿಸಿ ಪೊಲೀಸರು ಧನಂಜಯ, ಸೂರ್ಯನಾರಾಯಣ, ಪ್ರವೀಣ್ ಕುಮಾರ್, ಗೌರಿ ಶಂಕರ್, ಶ್ರೀರೆಡ್ಡಿ ರಾಮಬಾಬು ಎಂಬವರ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಿದ್ದಾರೆ.
ಶ್ರೀನಾಥ್ ಸೋದರ ಮಧು ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಮೇ 8ರಂದು ಶ್ರೀನಾಥ್ ಮನೆಯಲ್ಲಿದ್ದ ನಾಯಿ ಹೊರಗೆ ಹೋಗಿದ್ದು, ಆರೋಪಿ ಧನಂಜಯ ಹೊಸತಾಗಿ ಕಟ್ಟಿಸುತ್ತಿರುವ ಮನೆಯತ್ತ ಹೋಗಿತ್ತು. ಆನಂತರ ಶ್ರೀನಾಥ್ ಹೋಗಿ ನಾಯಿಯನ್ನು ಕರೆದುಕೊಂಡು ಬಂದಿದ್ದ. ಈ ವೇಳೆ, ನಾಯಿ ಮೇಲೆ ಆರೋಪಿಗಳು ದಾಳಿಗೆ ಯತ್ನಿಸಿದ್ದರು. ಮೇ 14ರಂದು ನಾಯಿಯನ್ನು ವಾಕಿಂಗ್ ಒಯ್ಯಲು ತೆರಳುತ್ತಿದ್ದಾಗ, ಧನಂಜಯ ಮತ್ತು ಆತನ ಗೆಳೆಯರು ಗುಂಪು ಕಟ್ಟಿಕೊಂಡು ಬಂದು ನಾಯಿ ಮೇಲಿನ ದ್ವೇಷದಲ್ಲಿ ಇಡೀ ಕುಟುಂಬದ ಮೇಲೆ ದೊಣ್ಣೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
⚠️: Viewers Discretion
— Ghar Ke Kalesh (@gharkekalesh) May 16, 2024
Horrible Scenes from Maduranagar HYD, The dog, the owner and his wife were attacked, Dhanunjay along with his two friends attacked and beat Srinath, Srinath's wife and pet dog with sticks.
pic.twitter.com/ZPrA8D6mVw
Five persons were booked by the Madhura Nagar police in Hyderabad on May 14, for brutally assaulting a family using iron rods and wooden logs. The accused also attacked their pet dog, which has suffered critical injuries. The entire incident was caught on camera. The premeditated attack was in response to a recent feud involving Srinath’s pet dog, police said. The accused have been charged for attempted murder.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 11:19 am
Mangalore Correspondent
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm