ಬ್ರೇಕಿಂಗ್ ನ್ಯೂಸ್
26-06-22 11:02 am Mangalore Correspondent ಕ್ರೈಂ
ಉಳ್ಳಾಲ, ಜೂ.26 : ಬೆಂಗಳೂರಿನಿಂದ ಪ್ರವಾಸ ನಿಮಿತ್ತ ಉಚ್ಚಿಲ ಬಟ್ಟಂಪಾಡಿಯ ಖಾಸಗಿ ಗೆಸ್ಟ್ ಹೌಸ್ ಬಂದಿದ್ದ ತಂಡವೊಂದು ನಶೆಯೇರಿಸಿ ಪರಸ್ಪರ ದಾಂಧಲೆ ನಡೆಸಿದ್ದಲ್ಲದೆ, ಸ್ಥಳೀಯರ ಮನೆಗೆ ನುಗ್ಗಲು ಯತ್ನಿಸಿದ್ದರಿಂದ ಸ್ಥಳೀಯರು ಯುವಕರಿಗೆ ಗೂಸಾ ನೀಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನ ಓಂಕಾರ್ ಪ್ರಿಂಟಿಂಗ್ ಪ್ರೆಸ್ ಸಂಸ್ಥೆಯ 60 ಮಂದಿ ಸಿಬ್ಬಂದಿ ಎರಡು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಶನಿವಾರ ಬಟ್ಟಂಪಾಡಿಯ CAMP 21 ಮತ್ತು ಪಕ್ಕದ ಮತ್ತೊಂದು ಗೆಸ್ಟ್ ಹೌಸಲ್ಲಿ ತಂಗಿದ್ದರು. ಗೆಸ್ಟ್ ಹೌಸಲ್ಲಿ ತಂಗಿದ್ದ ಯುವಕರು ತಡರಾತ್ರಿ ಅಮಲೇರಿಸಿ ಮಜಾ ಉಡಾಯಿಸಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಈ ಪೈಕಿ ನಶೆಯಲ್ಲಿದ್ದ ಬೀದರ್ ಮೂಲದ ಶರಣ ಬಸಪ್ಪ ಎಂಬಾತ ಊಟದ ತಟ್ಟೆ ಹಿಡಿದೇ ಸಮೀಪದ ರಾಮಪ್ಪ ಎಂಬವರ ಮನೆಗೆ ತೆರಳಿ ಬಾಗಿಲು ಬಡಿದಿದ್ದಾನೆ. ಬಾಗಿಲು ತೆರೆದ ಯುವತಿ ಆತನನ್ನು ನೋಡಿ ಕಿರುಚಿದ್ದು ಸ್ಥಳೀಯರು ಸೇರಿ ಗೂಸಾ ಕೊಟ್ಟಿದ್ದಾರೆ.
ಮತ್ತೊಂದೆಡೆ ರಸ್ತೆಯಲ್ಲಿ ಮೂವರು ಪ್ರವಾಸಿಗರು ನಶೆಯಲ್ಲಿ ಹೊಡೆದಾಟ ನಡೆಸಿದ್ದು ಅವರನ್ನ ಸ್ಥಳೀಯರು ತಡೆದು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಆನಂತರ ಉಳ್ಳಾಲ ಪೊಲೀಸರ ಗಮನಕ್ಕೂ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಹಿಂದಿರುಗಿದ್ದರು. ಪ್ರವಾಸಿಗರು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದರಿಂದ ಸ್ಥಳೀಯರ ಮೇಲೆ ದೂರು ದಾಖಲಾಗಿದೆ.
ಸ್ಥಳೀಯರಾದ ನಾಗೇಶ್ ಉಚ್ಚಿಲ್ ಮಾಹಿತಿ ನೀಡಿ, ಉಚ್ಚಿಲ ಪ್ರದೇಶದಲ್ಲಿ ನಾಯಿಕೊಡೆಗಳಂತೆ ಅಕ್ರಮ ಗೆಸ್ಟ್ ಹೌಸ್ಗಳು ತಲೆಯೆತ್ತಿದ್ದು ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸಿವೆ. ಇಲ್ಲಿನ ಗೆಸ್ಟ್ ಹೌಸ್ಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ಸೂಕ್ತ ನೋಂದಣಿ ಮಾಡಿಕೊಂಡಿಲ್ಲ. ಗೆಸ್ಟ್ ಹೌಸ್ಗಳಲ್ಲಿ ಮದ್ಯ ಪೂರೈಕೆ ಇಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿಗೆ ಬಂದ ಪ್ರವಾಸಿಗರು ಈ ರೀತಿ ನಶೆಯಲ್ಲಿ ತೇಲಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
Two gangs of Bengaluru origin fought with each other at a private guest house at Ucchila Battappady in Ullal, Mangalore. The locals alleged that the gang members also created ruckus by entering their houses and held a protest. A party was in progress at the private guest house. People had arrived in two buses. Friction began between the two gangs after midnight. The members got down to the road and started a brawl.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 09:19 pm
Mangalore Correspondent
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm