ಬ್ರೇಕಿಂಗ್ ನ್ಯೂಸ್
21-06-22 07:43 pm Mangalore Correspondent ಕ್ರೈಂ
ಮಂಗಳೂರು, ಜೂನ್ 21: ಆಡು ಸಾಕಣೆ ಫಾರ್ಮ್ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಕೇರಳದ ವ್ಯಕ್ತಿಯೊಬ್ಬ ಹಣ ಪಡೆದು ವಂಚಿಸಿದ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹಂಪನಕಟ್ಟೆಯಲ್ಲಿ ಜ್ಯೂಸ್ ಸ್ಟಾಲ್ ಹೊಂದಿರುವ ಫೆಡ್ರಿಕ್ ಫೆರಾವೋ ಮತ್ತು ವಿಜಯ ಬರ್ಬೋಜ ಎಂಬವರಿಗೆ ಕೇರಳದ ಕೊಚ್ಚಿ ಮೂಲದ ಬೆನ್ನಿಚಾನ್ ಜೋಸೆಫ್ ಎಂಬಾತ ಪರಿಚಯ ಆಗಿದ್ದ. ಜ್ಯೂಸ್ ಅಂಗಡಿಗೆ ಉಪ್ಪಿನಕಾಯಿ, ಮಸಾಲ ಪೌಡರ್ ಮಾರಾಟ ಮಾಡಿಕೊಂಡು ಬಂದಿದ್ದರಿಂದ ಪರಿಚಯ ಆಗಿತ್ತು.
ಈ ವೇಳೆ, ತಾನು ದಾವಣಗೆರೆಯಲ್ಲಿ ಆಡು ಸಾಕಣೆ ಕೇಂದ್ರ ಹೊಂದಿದ್ದು, ಒಳ್ಳೆ ಲಾಭ ಬರುತ್ತಿದೆ ಎಂದು ಹೇಳಿದ್ದಾನೆ. ದಾವಣಗೆರೆಯಲ್ಲಿ ತನ್ನದೇ ಜಮೀನು ಹೊಂದಿದ್ದು, ನಿಮಗೆ ಬೇಕಿದ್ದರೆ ತನ್ನ ಜಮೀನಿನಲ್ಲೇ ಆಡಿನ ಫಾರ್ಮ್ ಒಂದನ್ನು ಮಾಡಿ ಕೊಡುತ್ತೇನೆ ಎಂದು ನಂಬಿಸಿದ್ದ. ಅದಕ್ಕಾಗಿ ಫೆಡ್ರಿಕ್ ಮತ್ತು ವಿಜಯ್ ಸೇರಿಕೊಂಡು ಒಟ್ಟು ಮೂರು ಲಕ್ಷ ರೂಪಾಯಿ ಹಣವನ್ನು ಬೆನ್ನಿಚಾನ್ ಕೈಗೆ ನೀಡಿದ್ದರು. ಆದರೆ ಹಣ ಪಡೆದ ಬಳಿಕ ಬೆನ್ನಿಚಾನ್ ನಾಪತ್ತೆಯಾಗಿದ್ದು, ಇತ್ತ ಹಣವೂ ಇಲ್ಲ, ಆಡಿನ ಫಾರ್ಮ್ ಕೂಡ ಇಲ್ಲ ಎನ್ನುವಂತಾಗಿದೆ. ವಂಚನೆಯ ಬಗ್ಗೆ ಫೆಡ್ರಿಕ್ ಬಂದರು ಠಾಣೆಯಲ್ಲಿ ದೂರು ನೀಡಿದ್ದಾರೆ.
A complaint is filed in Bunder police station here, accusing a man of duping two people on the pretext of setting up a goat farm. According to the details of the complaint filed Fredrick Ferrao and Vijay Barboza, they have a juice stall in Hampankatta. Bennichan Joseph, a resident of Kochi, Kerala, used to supply masala powder and pickle to their shop.
03-02-26 11:53 am
Bangalore Correspondent
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm