ಬ್ರೇಕಿಂಗ್ ನ್ಯೂಸ್
19-05-22 04:54 pm Mangalore Correspondent ಕರಾವಳಿ
ಉಳ್ಳಾಲ, ಮೇ 19 : ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಜೀರು ಗ್ರಾಮದ ಪಾಣೆಲ ನಾಗರಿಕರ ಬಹು ದಿನಗಳ ಸರಕಾರಿ ಬಸ್ಸಿನ ಬೇಡಿಕೆ ಈಡೇರಿದ್ದು ಮಾಜಿ ಸಚಿವ ಯು.ಟಿ.ಖಾದರ್ ನೂತನ ಬಸ್ಸಿಗೆ ಚಾಲನೆ ನೀಡುವುದರ ಜೊತೆಗೆ ಬಸ್ಸನ್ನು ಚಲಾಯಿಸಿ ಗಮನಸೆಳೆದರು.
ಪಜೀರು ಗ್ರಾಮದ ಪಾಣೆಲಕ್ಕೆ ಇಂದು ಬೆಳಗ್ಗೆ ಸರಕಾರಿ ಬಸ್ಸು ಓಡಾಟ ಪ್ರಾರಂಭಿಸಿದೆ. ಪಾಣೆಲ ಪ್ರದೇಶಕ್ಕೆ ಸರಕಾರಿ ಬಸ್ಸು ಒದಗಿಸುವಂತೆ ಸಾರಿಗೆ ಇಲಾಖೆಗೆ ಶಾಸಕ ಯು.ಟಿ.ಖಾದರ್ ಅವರು ಈ ಮೊದಲು ಸೂಚನೆ ನೀಡಿದಾಗ ರಸ್ತೆಯಲ್ಲಿ ದೊಡ್ಡ ಬಸ್ಸು ಸಂಚರಿಸುವ ಅವಕಾಶ ಇಲ್ಲದಿದ್ದರಿಂದ ಪಾಣೇಲ ಜನತೆಯ ಬಸ್ಸಿನ ಕನಸು ನನಸಾಗಿಯೇ ಉಳಿದಿತ್ತು. ಆದರೆ ಯು.ಟಿ.ಖಾದರ್ ಅಷ್ಟಕ್ಕೇ ಸುಮ್ಮನಿರದೇ ಸುಮಾರು ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮ ಚಾವಡಿ - ಪಜೀರು - ಪಾಣೇಲ - ಪಡೀಲ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಮತ್ತೆ ಸಾರಿಗೆ ಇಲಾಖೆಗೆ ಬಸ್ಸು ಒದಗಿಸಲು ಸೂಚನೆ ನೀಡಿದರು.
ಇದೀಗ ಸಾರಿಗೆ ಇಲಾಖೆಯ ನೂತನ ಬಸ್ ಇಂದು ಬೆಳಗ್ಗೆ 06.30ಕ್ಕೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಹೊರಟು 7.45ಕ್ಕೆ ಪಾಣೇಲ ತಲುಪಿದ್ದು ಶಾಸಕ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಹಿರಿಯರಾದ ವೆಂಕಪ್ಪ ಕಾಜವರವರು ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ನೂತನ ಸರಕಾರಿ ಬಸ್ ಮಂಗಳೂರು- ತೊಕ್ಕೊಟ್ಟು-ದೇರಳಕಟ್ಟೆ- ಕೊಣಾಜೆ-ಗ್ರಾಮಚಾವಡಿ- ಪಜೀರು-ಪಾಣೇಲ- ಪಡೀಲು-ಬೋಳಿಯಾರು- ಕುರ್ನಾಡು-ಮಿತ್ತಕೋಡಿ ಮಾರ್ಗವಾಗಿ ಸಂಚರಿಸಿ ಮುಡಿಪು ತಲುಪಲಿದ್ದು ನಂತರ ಮುಡಿಪು ಬಿಟ್ಟು ಅದೇ ಮಾರ್ಗವಾಗಿ ಮಂಗಳೂರು ತಲುಪಲಿದೆ. ಬಸ್ಸು ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಟ್ರಿಪ್ ಕಾರ್ಯಾಚರಿಸಲಿದೆ.
Mangalore to Pajir Govt Bus inaugurated by U T Khader, MLA drives the bus by himself and becomes a Bus Driver for a while.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
20-06-25 03:54 pm
Udupi Correspondent
ಆರೆಸ್ಸೆಸ್ ನಾಯಕರ ಮನೆಗಳಿಗೆ ಮಿಡ್ ನೈಟ್ ಪರಿಶೀಲನೆ ;...
20-06-25 02:59 pm
ಒಂದೇ ಮರ ತೆರವಿಗೆ ಸೂಚಿಸಿದ್ದ ಸೋಮೇಶ್ವರ ಪುರಸಭೆ ; ಐ...
19-06-25 10:08 pm
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm