ಹವಾಮಾನ ವೈಪರೀತ್ಯ ; ಕ್ಯಾಲಿಕಟ್ ನಲ್ಲಿ ಇಳಿಯಲಾಗದೆ ಮಂಗಳೂರಿನಲ್ಲಿ ರಿಯಾದ್ ವಿಮಾನ ಲ್ಯಾಂಡ್

18-05-22 10:35 pm       Mangaluru Correspondent   ಕರಾವಳಿ

ಕೇರಳದಲ್ಲಿ ಮಳೆಯ ಕಾರಣ ಮಂಜು ಆವರಿಸಿದ್ದರಿಂದ ಕ್ಯಾಲಿಕಟ್ ನಲ್ಲಿ ಇಳಿಯಬೇಕಾದ ರಿಯಾದ್ ವಿಮಾನ ಅಲ್ಲಿ ಲ್ಯಾಂಡ್ ಆಗಲಾಗದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಮಂಗಳೂರು, ಮೇ 18: ಕೇರಳದಲ್ಲಿ ಮಳೆಯ ಕಾರಣ ಮಂಜು ಆವರಿಸಿದ್ದರಿಂದ ಕ್ಯಾಲಿಕಟ್ ನಲ್ಲಿ ಇಳಿಯಬೇಕಾದ ರಿಯಾದ್ ವಿಮಾನ ಅಲ್ಲಿ ಲ್ಯಾಂಡ್ ಆಗಲಾಗದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಐಎಕ್ಸ್ 1322 ರಿಯಾದ್ ನಿಂದ ಮಂಗಳವಾರ ರಾತ್ರಿ ಎರಡು ಗಂಟೆಗೆ ಹೊರಟಿದ್ದ ವಿಮಾನವು ಕೇರಳದ ಕೋಝಿಕ್ಕೋಡ್ ನಲ್ಲಿ ನಸುಕಿನಲ್ಲಿ ಇಳಿಯಬೇಕಿತ್ತು. ಆದರೆ ಅಲ್ಲಿ ಹವಾಮಾನ ವೈಪರೀತ್ಯ ಮತ್ತು ಮಂಜು ಆವರಿಸಿದ್ದರಿಂದ ವಿಮಾನಕ್ಕೆ ಇಳಿಯಲು ಅವಕಾಶ ಕೊಟ್ಟಿರಲಿಲ್ಲ. ಹಾಗಾಗಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಿಗ್ನಲ್ ಪಡೆದು ಬೆಳಗ್ಗೆ ಎಂಟು ಗಂಟೆ ವೇಳೆಗೆ ಮಂಗಳೂರಿಗೆ ಬಂದು ಲ್ಯಾಂಡ್ ಆಯ್ತು. ಸೋಮವಾರದಿಂದ ಮೂರು ವಿಮಾನಗಳು ಈ ರೀತಿ ಹವಾಮಾನ ಕಾರಣಕ್ಕೆ ಡೈವರ್ಟ್ ಆಗಿ ಮಂಗಳೂರಿಗೆ ಬಂದು ಲ್ಯಾಂಡ್ ಆಗಿದೆ. ಮಂಗಳವಾರ, ಬುಧವಾರ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಣೆ ಆಗಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

Bad weather and low visibility at Kozhikode airport in Kerala forced a flight to land at Mangaluru International Airport (MIA) on Wednesday. The Air India Express flight IX 1322 flight from Riyadh got diverted to MIA due to bad weather at Calicut International Airport.