ಬ್ರೇಕಿಂಗ್ ನ್ಯೂಸ್
26-03-22 02:09 pm Mangalore Correspondent ಕರಾವಳಿ
ಮಂಗಳೂರು, ಮಾ.26 : ಖಾವಿ ಅನ್ನೋದೇ ಬೆಂಕಿ ಇದ್ದಹಾಗೆ, ಸಿದ್ದರಾಮಯ್ಯ ಬೆಂಕಿಗೆ ಕೈ ಹಾಕಿದ್ದಾರೆ. ಈ ಬೆಂಕಿಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಭಸ್ಮವಾಗಲಿದೆ. ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್, ಹಿಂದಿನಿಂದಲೂ ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಗೌರವವಿಲ್ಲ. ನಾನು ನಾಸ್ತಿಕವಾದಿ ಎಂದೇ ಹೇಳಿಕೊಂಡು ಬಂದಿದ್ದಾರೆ. ಆದರೆ ಕದ್ದುಮುಚ್ಚಿ ದೇವಾಲಯಗಳಿಗೆ ಹೊಗುತ್ತಾರೆ.
ಪಂಚರಾಜ್ಯಗಳ ಚುನಾವಣೆ, ಹಿಜಾಬ್ ವಿವಾದದ ಬಳಿಕ ಸಿದ್ದರಾಮಯ್ಯ ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ಒಬ್ಬ ಹಿರಿಯ ನಾಯಕನಾಗಿ ದೇಶದ ಸಂಸ್ಕೃತಿ, ಪರಂಪರೆ ಹಾಗೂ ಗುರುಪೀಠಗಳ ಬಗ್ಗೆ ಅತಿ ಹೆಚ್ಚು ತಿಳಿದುಕೊಂಡವರು. ಆದರೆ ರಾಜಕೀಯ ಪೀಠಕ್ಕಿಂತ ಗುರುಪೀಠವೇ ಶ್ರೇಷ್ಠ ಅಂತ ನಂಬಿರುವ ಸಂಸ್ಕೃತಿ ನಮ್ಮದು. ಅಂಥ ಗುರುಪೀಠಗಳಿಗೆ ಗುರು ಸಂಸ್ಕೃತಿ ಗೆ ಸಿದ್ದರಾಮಯ್ಯ ಅವಹೇಳನ, ಅವಮಾನ ಮಾಡಿದ್ದಾರೆ. ಇದರ ಪರಿಣಾಮ ಗೊತ್ತಾಗಲಿದೆ.
ಈ ಹಿಂದೆ ಧರ್ಮಸ್ಥಳಕ್ಕೆ ಮಾಂಸಾಹಾರ ಸೇವಿಸಿ ಹೋದ್ರೆ ಏನು? ಅಂತ ಸಿದ್ದರಾಮಯ್ಯ ಸವಾಲು ಹಾಕಿದ್ದರು. ಆನಂತರ ತಮ್ಮ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಬೇಕಾಗಿ ಬಂದಿತ್ತು ಎಂದು ನೆನಪಿಸಿದ ನಳಿನ್ ಕುಮಾರ್, ಹಿಂದೊಮ್ಮೆ ವೀರಶೈವ, ಲಿಂಗಾಯತರನ್ನು ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದರು. ಅದರ ಪರಿಣಾಮ ಏನಾಯಿತು ಅನ್ನೋದು ಗೊತ್ತಿದೆ. ಸಿದ್ದರಾಮಯ್ಯ ಅವರ ಈ ರೀತಿಯ ಹೇಳಿಕೆಗೆ ಕಾಂಗ್ರೆಸ್ ನಲ್ಲಿರುವ ಆಂತರಿಕ ಕಚ್ಚಾಟವೇ ಕಾರಣ. ಡಿಕೆ ಶಿವಕುಮಾರ್ ಮೇಲೆ ಮೇಲುಗೈ ಸಾಧಿಸಲು ಸಿದ್ದರಾಮಯ್ಯ ಹೊರಟಿದ್ದಾರೆ.
ಅದರ ನೆಪದಲ್ಲಿ ಏನೋ ಮಾತನಾಡಲು ಹೋಗಿ ಭಾರತದ ಸಂಸ್ಕೃತಿಗೆ ಮತ್ತು ಹಿಂದೂ ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ. ಈ ಹಿಂದೆ ಹಿಂದುತ್ವದಲ್ಲಿ ನಂಬಿಕೆ ಇಟ್ಟವನು, ಭಗವದ್ಗೀತೆ ರಾಮಾಯಣ ಮಹಾಭಾರತ ಓದಿದ್ದೇನೆ ಎಂದು ಇವರೇ ಹೇಳಿಕೊಂಡಿದ್ದರು. 'ರಾವಣ' ಕೂಡ ಶ್ರೇಷ್ಠ ಪಂಡಿತ , ಅತಿ ಜ್ಞಾನಿಯಾಗಿದ್ದ. ಹಾಗೆಂದು ಓದಿದ್ದ ಜ್ಞಾನವೆಲ್ಲ ಸಹಾಯಕ್ಕೆ ಬಂದಿದೆ ಅಂತ ಅರ್ಥ ಅಲ್ಲ. ಆದರೆ ಶ್ರೀರಾಮ ತಾನು ನಂಬಿದ್ದ ನಂಬಿಕೆಗಳಿಂದ, ಪಾಲಿಸಿದ ಆದರ್ಶದಿಂದಾಗಿ ದೊಡ್ಡವನಾದ ಎಂದು ಹೇಳಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.
Siddaramaiah speaks against sanyasis, this spark will set congress on fire slams Nalin Kumar Kateel in Mangalore. Leader of Opposition in the State Legislative Assembly and former Congress chief minister S. Siddaramiah finds himself isolated in his own party for his statement comparing hijab with sarees worn by Hindu women. He further went on to compare hijab with the customary attire of swami jis of various mutts in the State.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
19-06-25 01:05 pm
Mangalore Correspondent
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm