ಬ್ರೇಕಿಂಗ್ ನ್ಯೂಸ್
24-02-22 10:38 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಫೆ.24 : ಹಿಜಾಬ್ ಕಿಚ್ಚು ಉಳ್ಳಾಲಕ್ಕೂ ಹಬ್ಬಿದ್ದು ಇಂದು ಭಾರತ್ ಪಿಯು ಕಾಲೇಜಿನ ತರಗತಿಯೊಳಗೆ ಆಡಳಿತವು ಹಿಜಾಬ್ ನಿರಾಕರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಕಾಲೇಜಿನ ಆಡಳಿತ ಇರುವ ಮೊಗವೀರ ಸಂಘವು ಸರಕಾರದ ಆದೇಶವನ್ನೇ ಯಥಾವತ್ತಾಗಿ ಪಾಲಿಸಲು ನಿರ್ಧರಿಸಿದೆ.
ಹಿಜಾಬ್ ಕಿಚ್ಚು ಉಳ್ಳಾಲಕ್ಕೂ ವ್ಯಾಪಿಸಿದ್ದು ಮಾಸ್ತಿಕಟ್ಟೆಯ ಭಾರತ್ ಪಿಯು ಕಾಲೇಜಲ್ಲೂ ಹಿಜಾಬ್ ವಿವಾದ ಪೀಕಲಾಟ ಆರಂಭವಾಗಿದೆ. ನಿನ್ನೆ ಜಿಲ್ಲಾ ಶಿಕ್ಷಣ ಇಲಾಖೆಯಿಂದ ತರಗತಿ ಒಳಗಡೆ ಹಿಜಾಬ್ ಧರಿಸಬಾರದು ಎಂಬ ಆದೇಶ ಬಂದ ಹಿನ್ನಲೆಯಲ್ಲಿ ಉಳ್ಳಾಲದ ಭಾರತ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ನಿನ್ನೆಯೇ ತರಗತಿ ಒಳಗಡೆ ಹಿಜಾಬ್ ಧರಿಸುವಂತಿಲ್ಲ ಎಂದು ತಿಳಿಸಿದ್ದರು.
ಇಂದು ಬೆಳಗ್ಗೆಯೇ ಮುಸ್ಲಿಂ ವಿದ್ಯಾರ್ಥಿನಿಯರೆಲ್ಲ ಕಾಲೇಜಿಗೆ ಪೋಷಕರ ಜೊತೆಗೆ ಎಂಟ್ರಿ ನೀಡಿದ್ದರಲ್ಲದೆ ತರಗತಿಯನ್ನ ಬಹಿಷ್ಕರಿಸಿದ್ದರು. ಕಾಲೇಜಿನಲ್ಲಿ ಇಂದು ನಡೆದ ಶಾಲಾಡಳಿತ ಮತ್ತು ಪೋಷಕರ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಒಳಗಡೆ ಹಿಜಾಬ್ ಗೆ ಅವಕಾಶ ನೀಡಲು ಒತ್ತಾಯಿಸಿದ್ದು, ತಮಗೆ ಟಿ.ಸಿ ನೀಡಿ ಅಥವಾ ಕೋರ್ಟ್ ಆದೇಶ ಬರುವವರೆಗೂ ರಜೆ ನೀಡಿ ಎಂದು ಅಳವತ್ತು ತೋಡಿದ್ದರು.
ಸಂಸ್ಥೆಯ ಮೇಲುಸ್ತುವಾರಿ ಹೊಂದಿರುವ ಉಳ್ಳಾಲ ಮೊಗವೀರ ಸಂಘ ಮತ್ತು ಪೋಷಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾದ ಮನೋಜ್ ಸಾಲ್ಯಾನ್ ಮತ್ತು ಪದಾಧಿಕಾರಿಗಳು ಇಂದು ಮಾತ್ರ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ಸಂಜೆ ನಡೆಯುವ ಶಾಲಾಡಳಿತ ಕಮಿಟಿಯ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದೆಂದು ಹೇಳಿದ್ದರು.
ಇಂದು ಸಂಜೆ ಉಳ್ಳಾಲ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಸರಕಾರದ ಆದೇಶವನ್ನೇ ಯಥಾವತ್ತಾಗಿ ಪಾಲಿಸೋ ನಿರ್ಧಾರ ಕೈಗೊಳ್ಳಲಾಗಿದೆ. ಸರಕಾರದ ಆದೇಶದಂತೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ತರಗತಿ ಪ್ರವೇಶಿಸಿಸಬೇಕು. ಬುರ್ಖಾ , ಹಿಜಾಬ್ ಕಳಚಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆಯೆಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲ್ಯಾನ್ ಹೇಳಿದ್ದಾರೆ.
Hijab row in Ullal PU college in Mangalore, college authorities which is run by Mogaveera committee has decided to follow government order. Today high drama was created by Muslim students as they threatened the college authorities to issue TC if they aren't allowed inside college with Hijab.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
18-06-25 06:38 pm
Mangalore Correspondent
NHRC, Dakshina Kannada, MLA Bharath Shetty: ಹ...
18-06-25 02:10 pm
Mangalore Accident, Jeppinamogaru, Aman Rao,...
18-06-25 10:24 am
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm