ಬ್ರೇಕಿಂಗ್ ನ್ಯೂಸ್
09-02-22 09:51 pm HK Desk news ಕರಾವಳಿ
ಉಡುಪಿ, ಫೆ.9 : ಹಿಜಾಬ್ ವಿಚಾರದಲ್ಲಿ ಕ್ಯಾಂಪಸ್ ಫ್ರಂಟ್ ಮೇಲೆ ಶಿಕ್ಷಣ ಸಚಿವರು ಆರೋಪ ಮಾಡಿದ್ದಾರೆ. ಆದರೆ ಶಾಸಕ ರಘುಪತಿ ಭಟ್ ಮತ್ತು ಯಶಪಾಲ್ ಸುವರ್ಣ ಕುಮ್ಮಕ್ಕಿನಿಂದ ಹೀಗಾಗಿದೆ ಎಂದು ನಾವು ಹೇಳುತ್ತೇವೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಘಟಕದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಯಶ್ ಪಾಲ್ ಸುವರ್ಣ ಒಬ್ಬ ಗೂಂಡಾ. ಆ ವ್ಯಕ್ತಿಯ ಹೇಳಿಕೆಯಿಂದಲೇ ಇದರ ಹಿಂದೆ ಹಿಂದು ಸಂಘಟನೆ ಇರುವುದು ಕಂಡುಬರುತ್ತದೆ. ಎಬಿವಿಪಿ ಮತ್ತು ಹಿಂದು ಸಂಘಟನೆ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಈ ಸ್ಥಿತಿಯಾಗಿದೆ. ರಾಜ್ಯಾದ್ಯಂತ ಅಹಿತಕರ ಉದ್ವಿಗ್ನ ಘಟನೆ ನಡೆದಿದೆ. ಮುಸಲ್ಮಾನ ವಿದ್ಯಾರ್ಥಿಗಳ ಮೇಲೆ ದಾಳಿಗೆ ಯತ್ನ ಆಗಿದೆ. ಎಲ್ಲದಕ್ಕೂ ಸಂಘ ಪರಿವಾರ ಎಬಿವಿಪಿ ಇದಕ್ಕೆ ಕಾರಣ. ಆದರೆ ಸಚಿವ ಬಿಸಿ ನಾಗೇಶ್ ಮಾತ್ರ ಕ್ಯಾಂಪಸ್ ಫ್ರಂಟ್ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಿಜಬ್ ಧರಿಸುವುದು ಸಂವಿಧಾನಾತ್ಮಕ ಹಕ್ಕು. ಸಿಎಫ್ ಐ ರಾಜ್ಯಾದ್ಯಂತ ಹೋರಾಟದಲ್ಲಿ ನಿಂತಿದ್ದೇವೆ. ನಾವು ಹಿಂಬದಿ ನಿಂತು ಕುಮ್ಮಕ್ಕು ನೀಡಲ್ಲ. ಮುಂದೆ ನಿಂತು ಹೋರಾಡುತ್ತೇವೆ ಎಂದು ಹೇಳಿದರು. ಹಿಜಬ್ ಹಾಕುವುದು ಅವರವರ ಇಷ್ಟ. ಯಾರಿಗೂ ಯಾರೂ ಯಾವುದನ್ನೂ ಬಲವಂತ ಮಾಡಬಾರದು. ನಮ್ಮ ಸಹಾಯ ಕೇಳಿ ಮಕ್ಕಳು ಬಂದಿದ್ದಾರೆ. ಕ್ಯಾಂಪಸ್ ಫ್ರಂಟ್ ಅವರಿಗೆ ಸಹಾಯ ಮಾಡಿದೆ. ಎನ್ ಎಸ್ ಯುಐ, ಮುಸ್ಲಿಂ ಒಕ್ಕೂಟ ಬಳಿಯೂ ಸಲಹೆ ಪಡೆದಿದ್ದಾರೆ. ನಮಗೂ ಸಾವಿರಾರು ಜನ ಸೇರಿಸಬಹುದು. ನಾವು ಕೋರ್ಟ್ ಮೂಲಕ ಹೋರಾಟ ಮಾಡುತ್ತೇವೆ ಎಂದರು.
ಶಾಸಕ ರಘುಪತಿ ಭಟ್ ಹಠಮಾರಿತನದಿಂದ ವಿವಾದವಾಗಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ವಿವಾದ ಮಾಡಿದ್ದಾರೆ. ಹಿಂದು - ಮುಸ್ಲಿಂ ಸಂಘರ್ಷ ಆಗಬೇಕೆಂದು ಹೀಗೆ ಮಾಡಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
“The minister of education is trying to cover the misdeeds of the Sangh Parivar and ABVP,” the Campus Front of India (CFI) has alleged. “The Hijab controversy that began in a pre-university college in Udupi could have been resolved locally but they have spread it to other districts in the state with the encouragement of local MLA.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 01:29 pm
HK News Desk
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
18-06-25 02:10 pm
Mangalore Correspondent
Mangalore Accident, Jeppinamogaru, Aman Rao,...
18-06-25 10:24 am
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm