ಬ್ರೇಕಿಂಗ್ ನ್ಯೂಸ್
04-02-22 05:34 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಫೆ.4 : ಸೆಕ್ಯುಲರ್ ಸೋಗಲ್ಲಿ ಗೋವಿನ ಬದಲು ಹುಲಿಯನ್ನ ರಾಷ್ಟ್ರ ಪ್ರಾಣಿಯನ್ನಾಗಿಸಿದ್ದು ಗೋವಿನ ದುಸ್ಥಿತಿಗೆ ಕಾರಣ. ಅದರ ಪರಿಣಾಮ ಇಂದು ದೇಶದಲ್ಲಿ ರಕ್ತಪಾತ, ಮತಾಂತರಗಳಂತಹ ದುಷ್ಕೃತ್ಯಗಳು ನಿರಂತರವಾಗಿವೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ , ಆರೆಸ್ಸೆಸ್ ಪ್ರಮುಖ್ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಗುರುವಾರ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಗೋಶಾಲೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹುಲಿಯನ್ನ ರಾಷ್ಟ್ರ ಪ್ರಾಣಿ ಅಂದಾಕ್ಷಣ ಅದನ್ನ ಆರತಿ ಎತ್ತಿ ಪೂಜೆ ಮಾಡಲು ಸಾಧ್ಯವೇ ? ತಾಯಿ ಸಮಾನ ಗೋವಿಗೆ ಮಾತ್ರ ಆ ಪೂಜೆ ಸಲ್ಲಲು ಸಾಧ್ಯ. ಜಾತ್ಯತೀತ ಚಿಂತನೆಯಲ್ಲಿ ಹುಲಿಯನ್ನ ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಿದ್ದಾರೆಯೇ ಹೊರತು ಅದರ ಮೇಲಿನ ಪ್ರೀತಿಯಿಂದಲ್ಲ. ಭಾರತದ ಜನ ಹೆಚ್ಚು ಪ್ರೀತಿಸಿ ಸಾಕಿದ್ದು ದನವನ್ನು. ಸಾವಿರಾರು ವರ್ಷದಿಂದಲೂ ಗೋವು ನಮ್ಮ ಪೂಜನೀಯ ರಾಷ್ಟ್ರ ಪ್ರಾಣಿಯಾಗಿದೆ ಎಂದರು.

ನಾವಿಂದು ಪುರಾಣದ ಬಕಾಸುರನ ಸಾಮ್ರಾಜ್ಯದ ಹಿಂದೂಗಳಾಗಿದ್ದೇವೆ. ಬಕಾಸುರರ ಆಹಾರಕ್ಕಾಗಿ ನಾವೇ ಖುದ್ದು ನಿತ್ಯ ನಿರಂತರ ಗೋವನ್ನ ಒದಗಿಸುತ್ತಿದ್ದೇವೆ. ನಾವೆಲ್ಲ ವಾಸ್ತವ ಅರಿತು ಎಚ್ಚೆತ್ತುಕೊಂಡು ಗೋವಿನ ರಕ್ಷಣೆಗೆ ಸದೃಢ ಹಿಂದು ಸಮಾಜ ಕಟ್ಟಬೇಕಿದೆ. ಸ್ವದೇಶಿ ಹಸುವಿನ ಹಾಲಿಗಿಂತ ಶ್ರೇಷ್ಠ ಯಾವುದೂ ಇಲ್ಲ. ಅದು ತಾಯಿಯ ಎದೆ ಹಾಲಿನ ಸಮಾನವಾಗಿದ್ದು , ಸ್ವದೇಶಿ ಹಸುಗಳ ವೃದ್ಧಿಗೆ ಶ್ರಮಿಸುತ್ತಿರುವ ಅಮೃತಧಾರ ಗೋಶಾಲೆಯ ಬಗ್ಗೆ ಪ್ರಭಾಕರ ಭಟ್ ಪ್ರಶಂಸೆ ವ್ಯಕ್ತ ಪಡಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಮುಖರಾದ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು, ಸೇವಾ ಮನೋಭಾವ ಬೆಳೆಸಿಕೊಂಡಿರುವ ರಾಜಾರಾಂ ಭಟ್ ಅವರು ಗೋ ಸೇವೆಯ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು. ಮಾತಾ ಡೆವಲಪರ್ಸ್ ನ ಮಾಲಕರಾದ ಸಂತೋಷ್ ಶೆಟ್ಟಿ, ಹವ್ಯಕ ಸಂಘದ ಅಧ್ಯಕ್ಷ ನಾಗರಾಜ ಭಟ್ , ಹಿಂದು ಸಂಘಟನೆ ಮುಖಂಡರಾದ ಗಣೇಶ್ ಕೆದಿಲ, ಮಿಥುನ್ ಕಲ್ಲಡ್ಕ, ವಿಜಿತ್ ಶೆಟ್ಟಿ ಉಪಸ್ಥಿತರಿದ್ದರು. ಗೋಶಾಲೆಯ ಸಂಚಾಲಕರಾದ ಟಿ.ಜಿ.ರಾಜಾರಾಮ್ ಭಟ್ ಸ್ವಾಗತಿಸಿ,ಪ್ರಸ್ತಾವಿಸಿದರು.
Mangalore Our cows are slaughtered every day for the meal of Gluttons says Dr Kalladka Prabhakar Bhat speaking at Amruthadara Cow Ashram.
10-11-25 01:23 pm
Bangalore Correspondent
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm