ಬ್ರೇಕಿಂಗ್ ನ್ಯೂಸ್
03-02-22 07:14 pm HK Desk news ಕರಾವಳಿ
ಉಡುಪಿ, ಫೆ.3 : ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಹಾಸ್ಟೆಲ್ ಒಳಗೆ ಒಯ್ಯಲು ಯತ್ನಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಮಣಿಪಾಲ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಕುಖ್ಯಾತಿ ಇರುವ ಪ್ರದೇಶ. ಅಲ್ಲಿನ ಎಂಐಟಿ ಕ್ಯಾಂಪಸ್ ಅಂದ್ರೆ ಹುಡುಗ- ಹುಡುಗಿಯರಿಗೆ ಭೇದವೇ ಇಲ್ಲದಷ್ಟು ನಂಟು, ತಾದಾತ್ಮ್ಯ ಬೆಳೆದಿದೆ. ಅಂಥ ಕ್ಯಾಂಪಸ್ ಒಳಗಿನಿಂದ ಸಿಸಿಟಿವಿ ದೃಶ್ಯಾವಳಿಯೊಂದು ಹೊರಬಂದಿದ್ದು ಅಲ್ಲಿನ ಹುಡುಗ- ಹುಡುಗಿಯರ ಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ.
ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಹುಡುಗರ ಹಾಸ್ಟೆಲ್ ಒಳಗೆ ದೊಡ್ಡ ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಒಯ್ಯಲು ಯತ್ನಿಸಿದ್ದಾನೆ. ಗೇಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಚೆಕ್ ಮಾಡುತ್ತಿದ್ದರು. ಈ ಸಂದರ್ಭ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಮುಂದೆ ಹೋಗಲು ಯುವಕ ಪ್ರಯತ್ನಿಸಿದ್ದು ಅತಿ ಭಾರದಿಂದ ನಲುಗಿದ್ದಾನೆ. ಬ್ಯಾಗ್ ಇಷ್ಟೊಂದು ಭಾರ ಇರುವ ಬಗ್ಗೆ ಸಂಶಯ ಬಂದು ಸೆಕ್ಯುರಿಟಿ ಸಿಬಂದಿ ಸೂಟ್ ಕೇಸ್ ತೆಗೆದು ನೋಡಿದ್ದಾರೆ.
ಸೂಟ್ ಕೇಸ್ ನೋಡಿದರೆ ಸೆಕ್ಯುರಿಟಿ ಸಿಬಂದಿ ತಮ್ಮ ಕಣ್ಣುಗಳನ್ನೇ ನಂಬದಾಗಿದ್ದಾರೆ. ಅದರ ಒಳಗಿಂದ ಯುವತಿ ಎದ್ದು ಬಂದಿದ್ದು ಅಲ್ಲಿಯೇ ಎದ್ದು ನಿಂತಿದ್ದಾಳೆ. ಜೊತೆಗಿದ್ದ ಹುಡುಗ ಗಾಬರಿಯಿಂದ ನಿಂತಲ್ಲೇ ನಿಂತು ಬಿಟ್ಟಿದ್ದ.
ಈ ಬಗ್ಗೆ ಮಣಿಪಾಲ ಪೊಲೀಸರಿಗೆ ಕೇಳಿದರೆ, ನಮಗೇನು ಈ ವಿಚಾರ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಓಡಾಡುತ್ತಿದ್ದು ಅಲ್ಲಿನ ಸಿಬಂದಿಯೇ ವಿದ್ಯಾರ್ಥಿಗಳ ಚಮತ್ಕಾರವನ್ನು ಸಿಸಿಟಿವಿಯಿಂದ ತೆಗೆದು ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ಆದರೆ ಈ ವಿಡಿಯೋವನ್ನು ಮಣಿಪಾಲದ ಭದ್ರತಾ ಸಿಬಂದಿ ನಿರಾಕರಿಸಿದ್ದಾರೆ. ಇದು ಮಣಿಪಾಲದ್ದಲ್ಲ. ಬೇರೆಲ್ಲಿಯದೋ ಹಳೆಯ ವಿಡಿಯೋ ಎಂದು ಹೇಳಿದ್ದಾರೆ. ಕೆಲವರ ಪ್ರಕಾರ, ಮಣಿಪಾಲದ ಹಳೇ ವಿಡಿಯೋ ಎನ್ನುತ್ತಿದ್ದಾರೆ.
Udupi Engineering student carries his girlfriend in suitcase enters hostel gets caught by security guard. The video of this has gone viral social media.
10-11-25 12:22 pm
Bangalore Correspondent
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm