ಬ್ರೇಕಿಂಗ್ ನ್ಯೂಸ್
01-01-22 10:27 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.1 : ಎರಡು ಮಕ್ಕಳ ತಾಯಿಯೊಬ್ಬಳು ಪಕ್ಕದ ಮನೆಯಾತನ ಜೊತೆ ಪ್ರೇಮ ಸಂಬಂಧ ಇರಿಸಿಕೊಂಡು ಅದೇ ಅಕ್ರಮ ಸಂಬಂಧಕ್ಕೆ ಕಟ್ಟುಬಿದ್ದು ಸಾವಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ತೊಕ್ಕೊಟ್ಟಿನ ಕುತ್ತಾರು ಬಳಿಯ ಮುನ್ನೂರು ಗ್ರಾಮದ ಸುಬಾಷ್ ನಗರ ನಿವಾಸಿ ಭಾರತಿ (36) ಮಂಗಳೂರಿನ ಬಂದರಿನ ಲಾಡ್ಜ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿ.29ರಂದು ಮಹಿಳೆ ನಾಪತ್ತೆಯಾಗಿದ್ದು, ಈ ಬಗ್ಗೆ ಆಕೆಯ ಗಂಡ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತಪಾಸಣೆ ನಡೆಸಿದಾಗ ಪಕ್ಕದ ಮನೆಯ ಸಂದೀಪ್ ಎಂಬಾತನೂ ನಾಪತ್ತೆಯಾಗಿದ್ದ.
ಮರುದಿನ ಸಂದೀಪ್ ತನ್ನ ಮನೆಗೆ ಮರಳಿದ್ದು, ಮಹಿಳೆಯ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದಾಗ ಬಂದರಿನ ಲಾಡ್ಜ್ ಹೆಸರು ಹೇಳಿದ್ದ. ಪೊಲೀಸರು ಅಲ್ಲಿಗೆ ತೆರಳಿ ನೋಡಿದಾಗ, ಮಹಿಳೆ ಕೊಠಡಿಯಲ್ಲಿ ವಿಷ ಕುಡಿದು ಮೃತಪಟ್ಟಿರುವುದು ಕಂಡುಬಂದಿತ್ತು. ಮಹಿಳೆ ಮತ್ತು ಸಂದೀಪ್ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದ್ದು, ಇದೇ ನೆಪದಲ್ಲಿ ಆಕೆ ತನ್ನನ್ನು ಮದುವೆಯಾಗಲು ಒತ್ತಾಯಿಸಿ ನಿರಾಕರಿಸಿದ್ದಕ್ಕೆ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.
ಸಂದೀಪ್ ಗೆ ಬೇರೆ ಮದುವೆಯಾಗಿದ್ದು, ತಿಂಗಳ ಹಿಂದಷ್ಟೇ ಮಗುವಾಗಿ ಇತ್ತೀಚೆಗೆ ತನ್ನ ಮನೆಯಲ್ಲಿ ತೊಟ್ಟಿಲು ಹಾಕುವ ಕಾರ್ಯವೂ ನಡೆದಿತ್ತು. ಇವರಿಬ್ಬರ ಮನೆಯೂ ಹತ್ತಿರದಲ್ಲೇ ಇದ್ದು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಹೆಸರಲ್ಲಿ ಕೇಸು ದಾಖಲಿಸಿ ಆರೋಪಿ ಸಂದೀಪ್ (39) ನನ್ನು ಬಂಧಿಸಿದ್ದಾರೆ. ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳು ಮತ್ತು ಗಂಡನನ್ನು ಬಿಟ್ಟು ಸಾವಿಗೆ ಶರಣಾಗಿದ್ದಾಳೆ.
ಮೃತ ಮಹಿಳೆಯ ಗಂಡ ಮತ್ತು ಸಂದೀಪ್ ಗೆಳೆಯರಾಗಿದ್ದು, ಒಡನಾಟ ಇರಿಸಿಕೊಂಡಿದ್ದರು. ಸಂದೀಪ್ ಕುತ್ತಾರು ಕೊರಗಜ್ಜನ ಕಟ್ಟೆಯ ಬಳಿ ಫ್ಯಾಬ್ರಿಕೇಶನ್ ಅಂಗಡಿ ನಡೆಸುತ್ತಿದ್ದ. ಗಂಡನ ಪರಿಚಯದಲ್ಲಿ ಮನೆಗೆ ಬರುತ್ತಿದ್ದ ಸಂದೀಪ್ ಮತ್ತು ಮಹಿಳೆಯ ನಡುವೆ ಹತ್ತಿರದ ಸಂಬಂಧ ಬೆಳೆದಿತ್ತು. ಇದೇ ಸಂಬಂಧ ಈಗ ಮಹಿಳೆಯ ಸಾವಿಗೆ ಕಾರಣವಾದರೆ, ಸಂದೀಪ್ ನನ್ನು ಜೈಲು ಕಂಬಿ ಎಣಿಸುವಂತೆ ಮಾಡಿದೆ.
Mangalore illicit affair 36 year old woman from Kuthar who was missing since 29th December has been found in a lodge at Bunder where she has committed suicide. The deceased is a mother of two.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm