ಬ್ರೇಕಿಂಗ್ ನ್ಯೂಸ್
30-08-21 05:43 pm Mangaluru Correspondent ಕರಾವಳಿ
ಉಳ್ಳಾಲ, ಆ.30: ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಸಾವಿನ ದವಡೆಗೆ ಸಿಲುಕಿದ್ದ ನವಾಝ್ ಬೆಂಗ್ರೆಯನ್ನ ರಕ್ಷಿಸಿದ್ದ ಉಳ್ಳಾಲ ಹೊಯ್ಗೆಯ ಮೀನುಗಾರರ ತಂಡವನ್ನ ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯು ಗೌರವಿಸಿ ಸನ್ಮಾನಿಸಿದೆ.
ನಿನ್ನೆ ನಡೆದ ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಉಳ್ಳಾಲ ಹೊಯ್ಗೆಯ ಐವರು ಜೀವ ರಕ್ಷಕ ಮೀನುಗಾರರನ್ನ ಸನ್ಮಾನಿಸಲಾಯಿತು.
ಉಳ್ಳಾಲದ ಅಳಿವೆ ಬಾಗಿಲಿನ ಸಮುದ್ರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡಿ ಹಿಂತಿರುಗುವಾಗ ಅಲೆಗಳ ಆರ್ಭಟಕ್ಕೆ ಸಮುದ್ರಕ್ಕೆಸೆಯಲ್ಪಟ್ಟ ನವಾಝ್ ಬೆಂಗ್ರೆಯನ್ನು ಸಾವಿನ ದವಡೆಯಿಂದ ರಕ್ಷಿಸಿದ ಉಳ್ಳಾಲ ಹೊಯ್ಗೆಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್, ರಿತೇಶ್ ಡಿಸೋಜ ಮತ್ತು ಅಜಿತ್ ಕರ್ಕೇರ ಬೆಂಗ್ರೆ ಅವರನ್ನು ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ಧಮಾಕ- ಸೀಸನ್ 15 ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಮುಖ್ಯಸ್ಥ ಲಿಯೋ ಡಿಸೋಜ ರಾಣಿಪುರ, ಲೋಬೋ ಸೌಂಡ್ಸ್ ಪೆರ್ಮನ್ನೂರಿನ ಮಾಲೀಕ ಜೈಸನ್ ಲೋಬೊ ಹಾಗೂ ಸಂಗೀತ ಕಾರ್ಯಕ್ರಮದ ಸದಸ್ಯರಾದ ರವಿರಾಜ್ ಡಿಸೋಜ, ರೋಲ್ಟನ್ ಪಿಂಟೋ, ಮೆಲ್ವಿಟಾ ಡಿಸೋಜ, ಕ್ಲಿಯೋನ್ ಡಿಸೋಜ, ಪ್ರೀತಮ್ ನೊರೊನ್ಹ ಪಜೀರು, ಕಾರ್ಯಕ್ರಮದ ಪ್ರಾಯೋಜಕ ಮ್ಯಾಕ್ಸಿಮ್ ಡಿಸೋಜ ರಾಣಿಪುರ, ಡೋಲ್ಫಿ ಡಿಸೋಜ ರಾಣಿಪುರ, ರೋನಿ ಡಿಸೋಜ ಪೆರ್ಮನ್ನೂರು, ರೇಡಿಯೋ ಸಾರಂಗ್ ಕಾರ್ಯಕ್ರಮ ನಿರೂಪಕ
ರೋಷನ್ ಕ್ರಾಸ್ತಾ ಪಾಲ್ದನೆ ಮೊದಲಾದವರು ಉಪಸ್ಥಿತರಿದ್ದರು.
ಫೇಸ್ ಬುಕ್ ನೇರಪ್ರಸಾರ ವೀಕ್ಷಿಸಿದ ಸಾವಿರಾರು ಮಂದಿ ಜೀವ ಪಣಕ್ಕಿಟ್ಟು ಸಮುದ್ರಪಾಲಾಗುತ್ತಿದ್ದ ಪ್ರಾಣ ಉಳಿಸಿದ ಉಳ್ಳಾಲ ಹೊಯ್ಗೆಯ ಐವರು ಯುವಕರ ಸಾಧನೆಯನ್ನು ಪ್ರಶಂಸಿದ್ದಾರೆ.
Ullal Fishermen rescued from drowning team felicitated for saving life
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 06:22 pm
HK News Staffer
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm