ಬ್ರೇಕಿಂಗ್ ನ್ಯೂಸ್
12-06-21 04:04 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ಅಕ್ರಮವಾಗಿ ಒಳನುಸುಳಿ ಬಂದು ಮಂಗಳೂರಿನಲ್ಲಿ ನೆಲೆಸಿದ್ದ 38 ಮಂದಿ ಲಂಕಾ ಪ್ರಜೆಗಳನ್ನು ವಿಚಾರಣೆ ನಡೆಸಲು ತಮಿಳುನಾಡಿನ ಪೊಲೀಸರು ಮಂಗಳೂರಿಗೆ ಆಗಮಿಸಿದ್ದಾರೆ. ಡಿವೈಎಸ್ಪಿ ನೇತೃತ್ವದ 9 ಮಂದಿ ಪೊಲೀಸರ ತಂಡ ಮಂಗಳೂರಿಗೆ ಆಗಮಿಸಿದ್ದು, ಕೂಲಂಕಷ ತನಿಖೆಗೆ ಮುಂದಾಗಿದೆ.
ಕೆನಡಾಕ್ಕೆ ತೆರಳುವ ಉದ್ದೇಶದಿಂದ ಭಾರತಕ್ಕೆ ನುಸುಳಿ ಬಂದಿದ್ದರು ಅನ್ನೋದು ಮಂಗಳೂರು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಅಲ್ಲದೆ, ಅದಕ್ಕಾಗಿ ಏಜನ್ಸಿ ಮೂಲಕ ಹತ್ತು ಲಕ್ಷ ರೂ. ವರೆಗೆ ಹಣ ನೀಡಿದ್ದರು ಎನ್ನಲಾಗಿತ್ತು. ಆದರೆ, ಏಜನ್ಸಿ ಮೂಲಕ ತೆರಳುವುದಾದರೆ ಭಾರತಕ್ಕೆ ಏಕೆ ಬರಬೇಕಿತ್ತು. ಮಂಗಳೂರಿಗೆ ಬರುವ ಅಗತ್ಯ ಏನಿದೆ ? ನೇರವಾಗಿ ಶ್ರೀಲಂಕಾದಿಂದಲೇ ತೆರಳಬಹುದಿತ್ತಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಮಂಗಳೂರು ಕಮಿಷನರ್ ಬಳಿ ಕೇಳಿದರೆ, ಆ ಬಗ್ಗೆ ಇನ್ನೂ ಗೊತ್ತಾಗಿಲ್ಲ. ವಿಚಾರಣೆ ನಡೆಸಲಿದ್ದೇವೆ ಎಂದಿದ್ದರು.
ತಮಿಳುನಾಡು ಪೊಲೀಸರು ಹೇಳುವ ಪ್ರಕಾರ, ಲಂಕನ್ನರು ಈ ರೀತಿ ಭಾರತಕ್ಕೆ ಬರುವುದು, ಇಲ್ಲಿಂದ ಎಲ್ಲೆಲ್ಲೋ ಹೋಗುವುದು ಮೊದಲೇನಲ್ಲ. ಹೆಚ್ಚಾಗಿ ಕೇರಳ, ತಮಿಳುನಾಡಿಗೆ ಬರುತ್ತಾರೆ. ತಮಿಳು ಮಾತನಾಡುವುದರಿಂದ ಮೀನು ಕಾರ್ಮಿಕರ ಸೋಗಿನಲ್ಲಿ ಭಾರತ ಪ್ರವೇಶಿಸಿ, ಇದ್ದುಬಿಡುತ್ತಾರೆ. ಇದೇ ರೀತಿ, ಬಂದವರು ಕೆಲವರು ತಾವಾಗೇ ಬೋಟ್ ಮಾಡಿಕೊಂಡು ಆಸ್ಟ್ರೇಲಿಯಾ, ಕೆನಡಾಕ್ಕೆ ತೆರಳುತ್ತಾರಂತೆ.
ಇದಲ್ಲದೆ, ಶ್ರೀಲಂಕಾದಲ್ಲಿ ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಬರುತ್ತಾರೆ. ತಮ್ಮ ಹೆಸರಲ್ಲಿ ಜಾಗ ಏನಾದ್ರೂ ಇದ್ದರೆ ಅದನ್ನೂ ಮಾರಿಕೊಂಡು ಬರುತ್ತಾರೆ. ಕೆಲವು ದಲ್ಲಾಳಿ ಏಜನ್ಸಿಗಳು ಕೆನಡಾ, ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವ ಭರವಸೆ ನೀಡಿ, ಹಣವನ್ನು ದೋಚುತ್ತಾರೆ. ಆದರೆ, ಈ ರೀತಿ ವ್ಯವಸ್ಥಿತವಾಗಿ ಬಂದು ಸೇರುವುದಕ್ಕೆ ಯಾವುದೋ ಏಜನ್ಸಿಯವರು ಕೆಲಸ ಮಾಡಿರುತ್ತಾರೆ. ತಮಿಳುನಾಡಿನಲ್ಲಿ ಈ ಬಾರಿ 28 ಮಂದಿ ಲಂಕನ್ನರನ್ನು ಪತ್ತೆ ಮಾಡಿದ್ದೇವೆ. ಅವರ ಜೊತೆಗಾರರು ಮಂಗಳೂರಿನಲ್ಲಿ ಇರುವುದನ್ನು ತಿಳಿದು, ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ತನಿಖೆಗೆ ಬಂದಿರುವ ತಮಿಳುನಾಡು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅತಿ ಹೆಚ್ಚು ತಮಿಳುನಾಡು ಮೂಲದ ಕಾರ್ಮಿಕರಿದ್ದಾರೆ. ಈ ತಮಿಳಿಯರ ಜೊತೆ ಸೇರಿ, ಲಂಕನ್ನರೂ ಮೀನುಗಾರಿಕೆ ಕೆಲಸಕ್ಕೆ ಮುಂದಾಗುತ್ತಾರೆ. ನೋಡುವುದಕ್ಕೆ ಒಂದೇ ರೀತಿ ಇದ್ದರೂ, ಲಂಕನ್ನರು ಮಾತನಾಡುವ ಭಾಷೆ ಆಧರಿಸಿ, ಅವರನ್ನು ಪತ್ತೆ ಮಾಡಲಾಗುತ್ತದೆ. ಸಾಧಾರಣವಾಗಿ ತಮಿಳುನಾಡಿನ ಮಂದಿ, ಲಂಕನ್ನರನ್ನು ಅವರು ಆಡುವ ಭಾಷೆಯಿಂದಲೇ ಗುರುತು ಹಿಡಿಯುತ್ತಾರೆ. ಆದರೆ, ಇತರರಿಗೆ ಹೀಗೆ ಪತ್ತೆ ಮಾಡುವುದು ಸಾಧ್ಯವಾಗಲ್ಲ. ಹೀಗಾಗಿ ಕೇರಳದ ಕೊಚ್ಚಿ, ಮಂಗಳೂರು ಹೀಗೆ ಬಂದರು ಪ್ರದೇಶಗಳಲ್ಲಿ ಬಂದು ಉಳಿದುಕೊಳ್ಳುತ್ತಾರೆ.
ಮೊನ್ನೆ ಬಂದಿದ್ದ 38 ಮಂದಿ ಲಂಕನ್ನರ ಪೈಕಿ, ಇಬ್ಬರು ಮಂಗಳೂರಿನ ಸ್ಥಳೀಯ ಬೋಟ್ ಒಂದರಲ್ಲಿ ಸಮುದ್ರಕ್ಕೆ ತೆರಳಿದ್ದರು. ಯಾರಿಗೂ ಗೊತ್ತೇ ಆಗದ ರೀತಿ, ಸ್ಥಳೀಯ ಕಾರ್ಮಿಕರ ಜೊತೆ ಬೆರೆತಿದ್ದರು ಅನ್ನೋ ವಿಚಾರ ಪೊಲೀಸರ ಕಾರ್ಯಾಚರಣೆ ಸಂದರ್ಭ ಪತ್ತೆಯಾಗಿದೆ. ಮಂಗಳೂರಿನಲ್ಲಿ ಪತ್ತೆಯಾದವರನ್ನು ತಮಿಳುನಾಡಿಗೆ ಒಯ್ದು ಸಮಗ್ರ ವಿಚಾರಣೆ ನಡೆಸುತ್ತೇವೆ. ಇವರ ಹಿಂದೆ ಯಾರಿದ್ದಾರೆ ಅನ್ನುವುದನ್ನು ಪತ್ತೆ ಮಾಡುತ್ತೇವೆ. ಆಬಳಿಕ ಅವರನ್ನು ಗೃಹ ಇಲಾಖೆಯ ಅನುಮತಿ ಪಡೆದು ಶ್ರೀಲಂಕಾಕ್ಕೆ ಗಡೀಪಾರು ಮಾಡಲಾಗುವುದು ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಾರ್ಚ್ 17ರಂದು ತೂತುಕುಡಿ ಬಂದರಿಗೆ ಆಗಮಿಸಿದ್ದ ಲಂಕನ್ನರನ್ನು ಬಳಿಕ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಎದುರಾಗಿದ್ದರಿಂದ ಬೆಂಗಳೂರಿಗೆ ಒಯ್ಯಲಾತ್ತು. ಆನಂತರ ಮಂಗಳೂರಿಗೆ ತಂದು ಇರಿಸಲಾಗಿತ್ತು ಅನ್ನುವ ಮಾಹಿತಿಯಿದೆ. ಹಾಗಾದ್ರೆ, ಇವರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯಲು ವ್ಯವಸ್ಥಿತವಾದ ಏಜನ್ಸಿ ಇರುವುದು ದೃಢಪಟ್ಟಿದೆ. ಮಂಗಳೂರು ಮತ್ತು ತಮಿಳುನಾಡು ಪೊಲೀಸರು ಜಂಟಿಯಾಗಿ ತನಿಖೆಗೆ ಮುಂದಾದರೆ, ಇದರ ಹಿಂದಿರುವ ಏಜಂಟರನ್ನು ಪತ್ತೆ ಮಾಡುವುದು ಕಷ್ಟವಾಗಲಿಕ್ಕಿಲ್ಲ.
Read: ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲ ಪತ್ತೆ ; ಕೆನಡಾಕ್ಕೆ ತೆರಳಲು ಪ್ಲಾನ್ ಹಾಕಿದ್ದ 38 ಲಂಕನ್ನರ ಸೆರೆ !
A team of 9 Police officers with DYSP of Q Crime Branch Police from Coimbatore, Tamilnadu have come to Mangaluru for enquiry over 38 Sri Lankans being detained by Mangaluru Police.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm