ಬ್ರೇಕಿಂಗ್ ನ್ಯೂಸ್
21-03-21 03:03 pm Mangaluru correspondent ಕರಾವಳಿ
ಉಳ್ಳಾಲ, ಮಾ.21: ದೈವಗಳಿಗೆ ಸಲ್ಲುವ ಕೋಲ, ನೇಮಗಳಿಂದು ಉತ್ಸವಗಳಾಗಿ ಪರಿವರ್ತನೆಯಾಗಿದ್ದು ಫ್ಲೆಕ್ಸ್ ಮತ್ತು ಜಾಲತಾಣಗಳಲ್ಲಿ ದೈವ ಕಟ್ಟುವವರ ಭಾವಚಿತ್ರಗಳನ್ನು ವಿಕೃತವಾಗಿ ಪ್ರದರ್ಶಿಸುತ್ತಿರುವ ಹಿಂದು ಯುವ ಪೀಳಿಗೆಯ ಮನಸ್ಥಿತಿ ಮೊದಲು ಬದಲಾದರೆ ನಮ್ಮ ಸಂಸ್ಕೃತಿಯ ಉಳಿವು ಸಾಧ್ಯವೆಂದು ತುಳು ಜನಪದ ವಿಧ್ವಾಂಸ ಕೆ.ಕೆ. ಪೇಜಾವರ ಹೇಳಿದರು.


ಹಿಂದುಗಳ ಶ್ರದ್ಧಾ ಕ್ಷೇತ್ರಗಳಲ್ಲಿ ಕೆಲವು ಸಮಯಗಳಿಂದ ನಡೆಯುತ್ತಿರುವ ವಿಧ್ವಂಸಕ, ವಿಕೃತ ಕೃತ್ಯಗಳನ್ನು ವಿರೋಧಿಸಿ ಮಂಗಳೂರು ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರದ ವರೆಗೆ "ಕೊರಗಜ್ಜನ ಆದಿ ಕ್ಷೇತ್ರಗು ನಮ್ಮ ನಡೆ" ಹೆಸರಲ್ಲಿ ನಡೆದ ಬೃಹತ್ ಪಾದಯಾತ್ರೆಯ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.


ದೈವಗಳು ಲೌಕಿಕ ಮತ್ತು ಅಲೌಕಿಕವಾಗಿ ಹುಟ್ಟಿಕೊಂಡ ಶಕ್ತಿಗಳಾಗಿವೆ. ಮನುಷ್ಯರಾಗಿ ಹುಟ್ಟಿ ಇಲ್ಲಿನ ದೌರ್ಜನ್ಯ, ಅನ್ಯಾಯ ವಿರೋಧಿಸಿ ಶಕ್ತಿಗಳಾದವರೇ ಲೌಕಿಕ ಶಕ್ತಿಗಳು. ಇಂತಹ ಶಕ್ತಿಗಳನ್ನ ಸಮಾಜದ ಕೆಳ ವರ್ಗದವರೇ ಹೆಚ್ಚಾಗಿ ಆರಾಧನೆ ಮಾಡುತ್ತಾರೆ. ಅದರಲ್ಲಿ ಕೊರಗಜ್ಜ ಮತ್ತು ಬಬ್ಬು ಸ್ವಾಮಿ ದೈವಗಳು ಭೂಮಿಯಲ್ಲಿ ಬೆಂಕಿಯಂತೆ ಬೆಳಗುತ್ತಿರುವ ಮಹಾನ್ ದೈವ ಶಕ್ತಿಗಳು. ನಮ್ಮ ಆರಾಧನಾ ಕ್ಷೇತ್ರಗಳಲ್ಲಿ ಕುಕೃತ್ಯ ಮೆರೆದವರಿಗೆ ಕೊರಗಜ್ಜ ಶಿಕ್ಷೆ ನೀಡದೆ ಇರಲಾರ. ಅದು ನಮಗೆ ಕಂಡಿಲ್ಲ ಅಷ್ಟೆ. ಆದರೆ ಇಂದಿನ ಯುವಪೀಳಿಗೆ ಮಾತ್ರ ನಮ್ಮ ದೈವದ ಸಂಸ್ಕೃತಿಗಳನ್ನು ಹೊಸಕಿ ಹಾಕುತ್ತಿರುವುದು ಮಾತ್ರ ದುರ್ದೈವ. ಜಾಲ ತಾಣಗಳಲ್ಲಿ ಫ್ಲೆಕ್ಸ್ ಗಳಲ್ಲಿ ಕೋಲ ಕಟ್ಟುವವರ ಫೋಟೊ ಹಾಕಿ ಅಪಹಾಸ್ಯ ಮಾಡುವುದಲ್ಲದೆ, ಕೋಲೋತ್ಸವ, ನೇಮೋತ್ಸವ ಎಂಬ ತಲೆಬರಹಗಳನ್ನು ನೀಡಲಾರಂಭಿಸಿದ್ದು ಎಷ್ಟು ಸರಿ. ಉತ್ಸವಗಳು ದೇವಸ್ಥಾನಗಳಿಗೆ ಹೊರತು ದೈವಗಳು ನೇಮ, ಕೋಲಕ್ಕಷ್ಟೇ ಸೀಮಿತ ಎಂದು ಹೇಳಿದರು.


ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ ಮೊಘಲರು, ಕಮಿನಿಸ್ಟರು ಹೀಗೆ ಅನೇಕರ ದಾಳಿಗೆ ಹಿಂದು ಧರ್ಮವು ನಲುಗಿ ಹೋಗಿತ್ತು. ಈಗಲೂ ಹಿಂದೂ ಧರ್ಮ ಸಂಸ್ಕೃತಿಯ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿದೆ. ಸರಕಾರ ಗೋಹತ್ಯೆ ವಿರುದ್ಧ ಮಸೂದೆ ತಂದರೂ ಗೋಹತ್ಯೆ, ಗೋಮಾಂಸ ಸಾಗಾಟದ ಕೃತ್ಯಗಳು ನಿತ್ಯ, ನಿರಂತರ ನಡೆಯುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ ನಾವು ಗೋವಿನ ಮೇಲಿಟ್ಟ ಶ್ರದ್ಧೆ ಇಂದು ನಶಿಸಿ ಹೋಗಿದೆ. ನಾವು ಹಣದ ಆಸೆಗೆ ಗೋವುಗಳನ್ನ ಕಟುಕರ ಕೈಗೆ ಒಪ್ಪಿಸುತ್ತಿದ್ದೇವೆ. ಕೇವಲ ಬಾಯಿಂದ ಹೇಳಿದರೆ ಸಾಲದು, ಗೋರಕ್ಷಣೆಗೆ ನಾವೆಲ್ಲ ಮುಂದಾಗಬೇಕು ಎಂದರು.


ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿ, ಎಷ್ಟೋ ದೇಶದ ಸಂಸ್ಕೃತಿ ನಾಶವಾದರೂ ನಮ್ಮ ದೇಶದ ಸಂಸ್ಕೃತಿ ಯಾರಿಂದಲೂ ನಾಶ ಮಾಡಲು ಸಾಧ್ಯವಾಗಿಲ್ಲ. ಹಿರಿಯರು ನಮ್ಮ ಸಂಸ್ಕೃತಿಗೆ ಅಷ್ಟೊಂದು ಗಟ್ಟಿ ಅಡಿಪಾಯ ಹಾಕಿ ಕೊಟ್ಟಿದ್ದಾರೆಂದರು.
ಎಳೆಯ ಪ್ರಾಯದಲ್ಲೇ ಕೊರಗಜ್ಜನ ಭಕ್ತಿಗೀತೆಯನ್ನು ಹಾಡಿ ಕರಾವಳಿಯಲ್ಲಿ ಮನೆ ಮಾತಾಗಿರುವ ಕಾರ್ಕಳದ ಮಾ.ಕಾರ್ತಿಕ್ ರಾಜ್ ವೇದಿಕೆಯಲ್ಲಿ ಕೊರಗಜ್ಜನ ಹಾಡು ಹೇಳಿ ಜನರನ್ನ ರಂಜಿಸಿದರು. ಪೇಜಾವರ ಶ್ರೀಗಳು ಕಾರ್ತಿಕ್ ರಾಜ್ ನನ್ನು ಸನ್ಮಾನಿಸಿದರು.


ವಿಶ್ವ ಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ,ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರು, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಕುತ್ತಾರು ಪಂಜಂದಾಂಯ, ಬಂಟ, ವೈದ್ಯನಾಥ, ಕೊರಗ ತನಿಯ ಆದಿಸ್ಥಳಗಳ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜ ಮೊದಲಾದವರು ಉಪಸ್ಥಿತರಿದ್ದರು.


ವಿಶ್ಚ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿದರು. ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಹ ಕಾರ್ಯದರ್ಶಿ ಸುರೇಖ ರಾಜ್ ವಂದಿಸಿದರು. ಪ್ರಮುಖರಾದ ರವಿ ಅಸೈಗೋಳಿ ನಿರೂಪಿಸಿದರು.
Vhp along with Bajarang leaders and members joined in thousands and Marched to kuttar Koragajja temple from kadri temple in Mangalore.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm