ಬ್ರೇಕಿಂಗ್ ನ್ಯೂಸ್
31-01-21 12:28 pm Mangaluru Reporter ಕರಾವಳಿ
ಕಾರ್ಕಳ, ಜ.31: ಕಂಬಳದ ಅಂಗಣದಲ್ಲಿ ಕೋಣದ ಜೊತೆ ಓಡುವುದು ಸಾಮಾನ್ಯರಿಂದ ಸಾಧ್ಯವಾಗದ ಮಾತು. ಅದಕ್ಕೆ ಅಂಥದ್ದೇ ತರಬೇತಿ ಮುಖ್ಯವಾಗತ್ತೆ. ಆದರೆ, ಇಲ್ಲೊಬ್ಬ ಒಂಬತ್ತರ ಹರೆಯದ ಪೋರ ಮನೆಯ ತೋಟದಲ್ಲಿ ಕೋಣದ ಜೊತೆ ಕಂಬಳ ಓಟಗಾರನ ರೀತಿಯಲ್ಲೇ ಓಡಿದ್ದು ಹುಬ್ಬೇರುವಂತೆ ಮಾಡಿದ್ದಾನೆ.
ಸಾಧಿಸಿದರೆ ಸಬ್ಬಲ್ ನುಂಗಬಹುದು ಎನ್ನುವ ಮಾತು ತುಳುವರಲ್ಲಿದೆ. ಹಾಗೆಯೇ ಈ ಹುಡುಗ ದಿನವೂ ಕೋಣದ ಜೊತೆ ಓಡುತ್ತಲೇ ತಾನೂ ಒಬ್ಬ ಕಂಬಳ ಓಟಗಾರನಾಗಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಹುಡುಗ ಕೋಣದ ಬಾಲ ಹಿಡಿದು ಓಡುವ ವಿಡಿಯೋ ಸಖತ್ ವೈರಲ್ ಆಗಿದೆ. ಅತ್ತ ಕಂಬಳ ಶುರುವಾಗುತ್ತಿದ್ದಂತೆ ಬಾಲಕನೊಬ್ಬ ಕೋಣದ ಜೊತೆ ಓಡಿ ಜನಮನ ಸೆಳೆದಿದ್ದಾನೆ.


ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ಬೆಟ್ಟುವಿನ ಸುಹಾಸ್ ಪ್ರಭು- ಅಮೃತ ದಂಪತಿ ಪುತ್ರ ಅತಿಶ್ ಪ್ರಭು(9) ಈ ಪೋರ ಪ್ರತಿಭೆ. ಕಾರ್ಕಳದ ಎಸ್ವಿಟಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಅತಿಶ್ ಕಂಬಳ, ಕಂಬಳದಲ್ಲಿ ಸಾಧಕ ಓಟಗಾರರನ್ನು ನೋಡುತ್ತಲೇ ಕೋಣದ ಹಿಂದೆ ಓಡುವುದನ್ನು ಕಲಿತಿದ್ದಾನೆ.
ಅತಿಶ್ ಮನೆಯಲ್ಲಿ 3 ಕೋಣಗಳಿದ್ದು, ಇವನ್ನು ದಿನವೂ ಸ್ನಾನ ಮಾಡಿಸಲು ಈತನೇ ಕರೆದೊಯ್ಯುತ್ತಾನೆ. ಹಾಗೆಯೇ ಮನೆಗೆ ವಾಪಸ್ ಬರುವಾಗ ಅತಿಶ್ ಕೋಣಗಳ ಜೊತೆ ಓಡುವುದನ್ನು ರೂಢಿಸಿದ್ದಾನೆ. ಕಂಬಳ ಓಟಗಾರರ ರೀತಿಯಲ್ಲೇ ಆರ್ಭಟಿಸುತ್ತಾ ಕೋಣಕ್ಕೆ ಹಿಂದಿನಿಂದ ಬೆತ್ತದಿಂದ ಪೆಟ್ಟು ಕೊಡುತ್ತಲೇ ಬಾಲ ಹಿಡಿದು ಓಡುವ ಹುಡುಗನ ಶೈಲಿ ಬೆಳೆವ ಸಿರಿಯ ಮೊಳಕೆಯ ರೀತಿ ಕಾಣುತ್ತಾನೆ.
A nine-year-old boy has attracted the attention of many by determinedly racing behind the buffalos that are trained for participation in Kambalas.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm