ಬ್ರೇಕಿಂಗ್ ನ್ಯೂಸ್
31-01-21 12:28 pm Mangaluru Reporter ಕರಾವಳಿ
ಕಾರ್ಕಳ, ಜ.31: ಕಂಬಳದ ಅಂಗಣದಲ್ಲಿ ಕೋಣದ ಜೊತೆ ಓಡುವುದು ಸಾಮಾನ್ಯರಿಂದ ಸಾಧ್ಯವಾಗದ ಮಾತು. ಅದಕ್ಕೆ ಅಂಥದ್ದೇ ತರಬೇತಿ ಮುಖ್ಯವಾಗತ್ತೆ. ಆದರೆ, ಇಲ್ಲೊಬ್ಬ ಒಂಬತ್ತರ ಹರೆಯದ ಪೋರ ಮನೆಯ ತೋಟದಲ್ಲಿ ಕೋಣದ ಜೊತೆ ಕಂಬಳ ಓಟಗಾರನ ರೀತಿಯಲ್ಲೇ ಓಡಿದ್ದು ಹುಬ್ಬೇರುವಂತೆ ಮಾಡಿದ್ದಾನೆ.
ಸಾಧಿಸಿದರೆ ಸಬ್ಬಲ್ ನುಂಗಬಹುದು ಎನ್ನುವ ಮಾತು ತುಳುವರಲ್ಲಿದೆ. ಹಾಗೆಯೇ ಈ ಹುಡುಗ ದಿನವೂ ಕೋಣದ ಜೊತೆ ಓಡುತ್ತಲೇ ತಾನೂ ಒಬ್ಬ ಕಂಬಳ ಓಟಗಾರನಾಗಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಹುಡುಗ ಕೋಣದ ಬಾಲ ಹಿಡಿದು ಓಡುವ ವಿಡಿಯೋ ಸಖತ್ ವೈರಲ್ ಆಗಿದೆ. ಅತ್ತ ಕಂಬಳ ಶುರುವಾಗುತ್ತಿದ್ದಂತೆ ಬಾಲಕನೊಬ್ಬ ಕೋಣದ ಜೊತೆ ಓಡಿ ಜನಮನ ಸೆಳೆದಿದ್ದಾನೆ.


ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ಬೆಟ್ಟುವಿನ ಸುಹಾಸ್ ಪ್ರಭು- ಅಮೃತ ದಂಪತಿ ಪುತ್ರ ಅತಿಶ್ ಪ್ರಭು(9) ಈ ಪೋರ ಪ್ರತಿಭೆ. ಕಾರ್ಕಳದ ಎಸ್ವಿಟಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಅತಿಶ್ ಕಂಬಳ, ಕಂಬಳದಲ್ಲಿ ಸಾಧಕ ಓಟಗಾರರನ್ನು ನೋಡುತ್ತಲೇ ಕೋಣದ ಹಿಂದೆ ಓಡುವುದನ್ನು ಕಲಿತಿದ್ದಾನೆ.
ಅತಿಶ್ ಮನೆಯಲ್ಲಿ 3 ಕೋಣಗಳಿದ್ದು, ಇವನ್ನು ದಿನವೂ ಸ್ನಾನ ಮಾಡಿಸಲು ಈತನೇ ಕರೆದೊಯ್ಯುತ್ತಾನೆ. ಹಾಗೆಯೇ ಮನೆಗೆ ವಾಪಸ್ ಬರುವಾಗ ಅತಿಶ್ ಕೋಣಗಳ ಜೊತೆ ಓಡುವುದನ್ನು ರೂಢಿಸಿದ್ದಾನೆ. ಕಂಬಳ ಓಟಗಾರರ ರೀತಿಯಲ್ಲೇ ಆರ್ಭಟಿಸುತ್ತಾ ಕೋಣಕ್ಕೆ ಹಿಂದಿನಿಂದ ಬೆತ್ತದಿಂದ ಪೆಟ್ಟು ಕೊಡುತ್ತಲೇ ಬಾಲ ಹಿಡಿದು ಓಡುವ ಹುಡುಗನ ಶೈಲಿ ಬೆಳೆವ ಸಿರಿಯ ಮೊಳಕೆಯ ರೀತಿ ಕಾಣುತ್ತಾನೆ.
A nine-year-old boy has attracted the attention of many by determinedly racing behind the buffalos that are trained for participation in Kambalas.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
26-05-26 11:56 am
HK News Staffer
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm