ಬ್ರೇಕಿಂಗ್ ನ್ಯೂಸ್
31-01-21 12:28 pm Mangaluru Reporter ಕರಾವಳಿ
ಕಾರ್ಕಳ, ಜ.31: ಕಂಬಳದ ಅಂಗಣದಲ್ಲಿ ಕೋಣದ ಜೊತೆ ಓಡುವುದು ಸಾಮಾನ್ಯರಿಂದ ಸಾಧ್ಯವಾಗದ ಮಾತು. ಅದಕ್ಕೆ ಅಂಥದ್ದೇ ತರಬೇತಿ ಮುಖ್ಯವಾಗತ್ತೆ. ಆದರೆ, ಇಲ್ಲೊಬ್ಬ ಒಂಬತ್ತರ ಹರೆಯದ ಪೋರ ಮನೆಯ ತೋಟದಲ್ಲಿ ಕೋಣದ ಜೊತೆ ಕಂಬಳ ಓಟಗಾರನ ರೀತಿಯಲ್ಲೇ ಓಡಿದ್ದು ಹುಬ್ಬೇರುವಂತೆ ಮಾಡಿದ್ದಾನೆ.
ಸಾಧಿಸಿದರೆ ಸಬ್ಬಲ್ ನುಂಗಬಹುದು ಎನ್ನುವ ಮಾತು ತುಳುವರಲ್ಲಿದೆ. ಹಾಗೆಯೇ ಈ ಹುಡುಗ ದಿನವೂ ಕೋಣದ ಜೊತೆ ಓಡುತ್ತಲೇ ತಾನೂ ಒಬ್ಬ ಕಂಬಳ ಓಟಗಾರನಾಗಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಹುಡುಗ ಕೋಣದ ಬಾಲ ಹಿಡಿದು ಓಡುವ ವಿಡಿಯೋ ಸಖತ್ ವೈರಲ್ ಆಗಿದೆ. ಅತ್ತ ಕಂಬಳ ಶುರುವಾಗುತ್ತಿದ್ದಂತೆ ಬಾಲಕನೊಬ್ಬ ಕೋಣದ ಜೊತೆ ಓಡಿ ಜನಮನ ಸೆಳೆದಿದ್ದಾನೆ.


ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ಬೆಟ್ಟುವಿನ ಸುಹಾಸ್ ಪ್ರಭು- ಅಮೃತ ದಂಪತಿ ಪುತ್ರ ಅತಿಶ್ ಪ್ರಭು(9) ಈ ಪೋರ ಪ್ರತಿಭೆ. ಕಾರ್ಕಳದ ಎಸ್ವಿಟಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಅತಿಶ್ ಕಂಬಳ, ಕಂಬಳದಲ್ಲಿ ಸಾಧಕ ಓಟಗಾರರನ್ನು ನೋಡುತ್ತಲೇ ಕೋಣದ ಹಿಂದೆ ಓಡುವುದನ್ನು ಕಲಿತಿದ್ದಾನೆ.
ಅತಿಶ್ ಮನೆಯಲ್ಲಿ 3 ಕೋಣಗಳಿದ್ದು, ಇವನ್ನು ದಿನವೂ ಸ್ನಾನ ಮಾಡಿಸಲು ಈತನೇ ಕರೆದೊಯ್ಯುತ್ತಾನೆ. ಹಾಗೆಯೇ ಮನೆಗೆ ವಾಪಸ್ ಬರುವಾಗ ಅತಿಶ್ ಕೋಣಗಳ ಜೊತೆ ಓಡುವುದನ್ನು ರೂಢಿಸಿದ್ದಾನೆ. ಕಂಬಳ ಓಟಗಾರರ ರೀತಿಯಲ್ಲೇ ಆರ್ಭಟಿಸುತ್ತಾ ಕೋಣಕ್ಕೆ ಹಿಂದಿನಿಂದ ಬೆತ್ತದಿಂದ ಪೆಟ್ಟು ಕೊಡುತ್ತಲೇ ಬಾಲ ಹಿಡಿದು ಓಡುವ ಹುಡುಗನ ಶೈಲಿ ಬೆಳೆವ ಸಿರಿಯ ಮೊಳಕೆಯ ರೀತಿ ಕಾಣುತ್ತಾನೆ.
A nine-year-old boy has attracted the attention of many by determinedly racing behind the buffalos that are trained for participation in Kambalas.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
01-02-26 07:52 pm
Mangalore Correspondent
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
01-02-26 03:41 pm
HK News Staffer
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm