ಬ್ರೇಕಿಂಗ್ ನ್ಯೂಸ್
07-01-21 06:04 pm Mangalore Correspondent ಕರಾವಳಿ
ಉಳ್ಳಾಲ, ಜ.7:ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾ.ಹೆ. 66 ರ ತಲಪಾಡಿ- ಉಚ್ಚಿಲದ ಅಂಡರ್ ಪಾಸ್ ಸಂಪೂರ್ಣ ಜಲಾವೃತಗೊಂಡಿದ್ದು ಆಕ್ರೋಶಿತ ಉಚ್ಚಿಲ ಪ್ರದೇಶದ ನಾಗರಿಕರು ಅಂಡರ್ ಪಾಸ್ ಬಳಿಯ ಸರ್ವಿಸ್ ರಸ್ತೆಯನ್ನು ತಡೆದು ಪ್ರತಿಭಟಿಸಿದ್ದಾರೆ. ಈ ವೇಳೆ, ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಮಸ್ಯೆ ಪರಿಹರಿಸಲು ತನಗೆ ಇಬ್ಬರು ಸ್ಥಳೀಯ ತಾಂತ್ರಿಕ ತಜ್ಞರನ್ನು ನೀಡುವಂತೆ ಪ್ರತಿಭಟನಕಾರರಲ್ಲೇ ಕೇಳಿಕೊಂಡಿದ್ದು ನಗೆಪಾಟಲಿಗೀಡಾಗಿದೆ.
ಇಂದು ಬೆಳಗ್ಗಿನಿಂದಲೇ ಉಚ್ಚಿಲ ಹೈವೇ ಸರ್ವಿಸ್ ರಸ್ತೆಯನ್ನು ತಡೆದು ಸ್ಥಳೀಯ ನಾಗರಿಕರು ಪ್ರತಿಭಟಿಸಿದ್ದಾರೆ. ಉಚ್ಚಿಲ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಿಸಿದ್ದು ಕಳೆದ ನಾಲ್ಕೈದು ವರುಷಗಳಿಂದ ಇಲ್ಲಿ ಪ್ರತಿ ಮಳೆಗಾಲದಲ್ಲೂ ಕೃತಕ ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ಸ್ಥಳೀಯ ಮದರಸ ಮತ್ತು ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸ್ಥಳೀಯರು ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡಿದ್ದರೂ ಯಾವುದೇ ಫಲ ದೊರಕಿಲ್ಲ.

ನಂತೂರಿನಿಂದ ಕೇರಳದ ಗಡಿಭಾಗ ತಲಪಾಡಿಯ ವರೆಗೂ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದರೂ ತಲಪಾಡಿ ಟೋಲ್ ಗೇಟಲ್ಲಿ ಟೋಲ್ ಸಂಗ್ರಹ ಮಾತ್ರ ನಡೆಯತ್ತಲೇ ಇದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬರಲೇಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಪರಿಣಾಮ ಸಂಜೆ ಹೊತ್ತಿಗೆ ಹೆದ್ದಾರಿ ಪ್ರಾಧಿಕಾರ ಯೋಜನಾಧಿಕಾರಿ ಶಿಶು ಮೋಹನ್ ಸ್ಥಳಕ್ಕೆ ಆಗಮಿಸಿದ್ದು ಹೆಸರಿಗೆ ತಕ್ಕಂತೆ ಶಿಶು ತರನೇ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರತಿಭಟನಾಕಾರರಲ್ಲಿ ಮಾತನಾಡಿ ತಕ್ಷಣ ಅಂಡರ್ ಪಾಸ್ ನಲ್ಲಿ ಶೇಖರಣೆಯಾದ ನೀರನ್ನು ಖಾಲಿ ಮಾಡುತ್ತೇವೆ. ಅಂಡರ್ ಪಾಸ್ ನಲ್ಲಿ ನೀರು ಶೇಖರಣೆಯಾಗದ ಹಾಗೆ ತಡೆಯಲು ಶಾಶ್ವತ ಕಾಮಗಾರಿ ಕೈಗೊಳ್ಳುತ್ತೇವೆ. ಇದಕ್ಕೆ ಸಲಹೆ ನೀಡಲು ಸ್ಥಳೀಯ ಇಬ್ಬರು ಪರಿಣತ ತಂತ್ರಜ್ಞಾನ ತಿಳಿದಿರುವ ಅಥವಾ ಇಂಜಿನಿಯರ್ ಗಳನ್ನು ನಮಗೆ ನೀಡಿ ಎಂದು ಪ್ರತಿಭಟನಾಕಾರರಲ್ಲೇ ಕೇಳಿಕೊಂಡು ತಮ್ಮ ಇಲಾಖೆಯ ದೌರ್ಬಲ್ಯವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದಾರೆ.

ಯೋಜನಾಧಿಕಾರಿ ಮಾತಿಗೆ ಮಣಿಯದ ಪ್ರತಿಭಟನಾಕಾರರು ಶಾಶ್ವತ ಪರಿಹಾರ ನೀಡುವುದಾಗಿ ಲಿಖಿತ ಹಿಂಬರಹ ನೀಡದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾಕಾರರಿಗೆ ತಕ್ಷಣ ಹಿಂಬರಹ ನೀಡುವುದಾಗಿ ಯೋಜನಾಧಿಕಾರಿ ಶಿಶು ಮೋಹನ್ ಅವರು ಕಚೇರಿಗೆ ವಾಪಸ್ ತೆರಳಿದ್ದು, ಹಿಂಬರಹ ಕೈಗೆ ತಲುಪುವ ತನಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಸ್ಥಳೀಯ ಮುಖಂಡರಾದ ಅಬ್ದುಲ್ ಸಲಾಂ ಯು, ಅಬ್ದುಲ್ ನಾಸಿರ್, ಅಬ್ದುಲ್ ಸಲಾಂ ಜಿ, ಯು.ಬಿ. ಎಂ.ರಹೀಂ,ಸಾಮಾಜಿಕ ಕಾರ್ಯಕರ್ತ ಸಲಾಂ ಉಚ್ಚಿಲ್ ,ಮೌಸಿನ್ ರಹಿಮಾನ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಮೇಶ್ ಬಾಬು, ನವಯುಗದ ಶಿವಪ್ರಸಾದ್ ,ರಾಮಕೃಷ್ಣ , ಆನಂದ , ಸಾರ್ವಜನಿಕ ಸಂಪರ್ಕಾಧಿಕಾರಿ ಭಾಸ್ಕರ್ ಶೆಟ್ಟಿ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದರು.
ಹೆದ್ದಾರಿ ಯೋಜನಾಧಿಕಾರಿ ಶಿಶುಮೋಹನ್ ಅವರಿಂದ ಹಿಂಬರಹ ಬಂದ ಹಿನ್ನಲೆಯಲ್ಲಿ, ಉಚ್ಚಿಲದ ನಾಗರಿಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm