ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ; ಮೂಡುಬಿದ್ರೆಯಲ್ಲಿ ಸರ್ಕಾರಿ ಶಾಲೆ ದತ್ತು, ಸುನಿಲ್ ಶೆಟ್ಟಿ, ಜಾಕಿಶ್ರಾಫ್, ಕಿಚ್ಚ ಸುದೀಪ್ ಆಗಮನ ನಿರೀಕ್ಷೆ 

09-09-25 02:30 pm       Mangalore Correspondent   ಕರಾವಳಿ

ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನಡೆಯುತ್ತಿರುವ 'ಪಿಲಿನಲಿಕೆ' ನವರಾತ್ರಿ ಹುಲಿ ವೇಷ ಸ್ಪರ್ಧೆಗೆ ಈ ಬಾರಿ ದಶಮ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಅ.1 ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ 'ಪಿಲಿನಲಿಕೆ ಪಂಥ- 10' ಸ್ಪರ್ಧೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ನಡೆಸಲಿದ್ದೇವೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ. ಮಿಥುನ್ ರೈ ಹೇಳಿದ್ದಾರೆ. 

ಮಂಗಳೂರು, ಸೆ.9 : ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನಡೆಯುತ್ತಿರುವ 'ಪಿಲಿನಲಿಕೆ' ನವರಾತ್ರಿ ಹುಲಿ ವೇಷ ಸ್ಪರ್ಧೆಗೆ ಈ ಬಾರಿ ದಶಮ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಅ.1 ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ 'ಪಿಲಿನಲಿಕೆ ಪಂಥ- 10' ಸ್ಪರ್ಧೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ನಡೆಸಲಿದ್ದೇವೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ. ಮಿಥುನ್ ರೈ ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಶಿವಶರಣ್ ಶೆಟ್ಟಿ ನೇತೃತ್ವದ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಕಕಾಲಕ್ಕೆ 25 ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಿಸಲು ಜರ್ಮನ್ ಟೆಂಟ್ ಆಸನ ವ್ಯವಸ್ಥೆ ಮಾಡಲಾಗುವುದು. ಪಿಲಿ ನಲಿಕೆಯಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೂ 20 ನಿಮಿಷ ಕಾಲಾವಕಾಶ ನೀಡಲಾಗುವುದು. ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಸ್ಪರ್ಧೆ ರಾತ್ರಿ 10ರ ವರೆಗೆ ನಡೆಯಲಿದೆ ಎಂದರು.

ಪಿಲಿನಲಿಕೆ ಪಂಥಕ್ಕೆ ಈ ಬಾರಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ವಿಧಾನಸಭೆ ಕ್ಷೇತ್ರದ ಸರಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಪೂರ್ಣ ಮಟ್ಟದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಯಾವ ಶಾಲೆ ಎನ್ನುವ ಬಗ್ಗೆ ಒಂದೆರಡು ದಿನದಲ್ಲಿ ಅಂತಿಮಗೊಳಿಸಲಾಗುವುದು‌ ಎಂದು ಹೇಳಿದ ಅವರು, ಈ ಬಾರಿ ಕಾರ್ಯಕ್ರಮವನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಸೇರಿದಂತೆ ಸಂಸದರು, ಶಾಸಕರು ಆಗಮಿಸಲಿದ್ದಾರೆ ಎಂದರು.‌

ಕಾರ್ಯಕ್ರಮಕ್ಕೆ ಬಾಲಿವುಡ್ ನಟ, ನಟಿಯರು 

ಪಿಲಿನಲಿಕೆ ಪಂಥಕ್ಕೆ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರತಿ ವರ್ಷವೂ ಬರುತ್ತಾರೆ,ಈ ಬಾರಿಯೂ ಬರಲಿದ್ದು ಜೊತೆಗೆ ಜಾಕಿಶ್ರಾಫ್ ಅವರನ್ನು ಕರೆತರಲಿದ್ದಾರೆ. ಹಾಗೆಯೇ ನಮ್ಮ ಊರಿನ ದಿಗ್ಗಜರಾದ ರಿಷಬ್ ಶೆಟ್ಟಿ, ರಾಜ್ ಶೆಟ್ಟಿ, ಗುರುಕಿರಣ್ ಸೇರಿದಂತೆ ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಸುನಿಲ್ ಶೆಟ್ಟಿ ಅಳಿಯ ಕ್ರಿಕೆಟಿಗ ಕೆಎಲ್ ರಾಹುಲ್ ಕರೆತರಲು ಮಾತುಕತೆ ನಡೆಸಿದ್ದೆವು. ಆ ದಿನಾಂಕಕ್ಕೆ ರಾಹುಲ್ ಗೆ ದಿನ ಹೊಂದಿಕೆ ಆಗಿಲ್ಲ. ಕನ್ನಡದ ಹಿರಿಯ ನಟ ಕಿಚ್ಚ ಸುದೀಪ್ ಅವರೊಂದಿಗೂ ಮಾತುಕತೆ ಆಗಿದೆ, ದಿನ ಎಡ್ಜಸ್ಟ್ ಆದಲ್ಲಿ ಬರೋದಾಗಿ ತಿಳಿಸಿದ್ದಾರೆ ಎಂದರು. 

ಹುಲಿ ವೇಷ ಸ್ಪರ್ಧೆಗೆ ಜಿಲ್ಲೆಯ ನಾನಾ ತಂಡಗಳು ವಿನಂತಿ ಮಾಡುತ್ತಿದ್ದು, ಪ್ರತಿಷ್ಠಿತ 10 ತಂಡಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ತಂಡಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ಬಾರಿ ಒಟ್ಟು 26 ಲಕ್ಷ ರು. ಬಹುಮಾನ ನೀಡುತ್ತಿದ್ದು ಪ್ರಥಮ 10 ಲಕ್ಷ ರು., ದ್ವಿತೀಯ 5 ಲಕ್ಷ ರು., ತೃತೀಯ 3 ಲಕ್ಷ ರು. ಇರಲಿದೆ. ಪ್ರತಿ ತಂಡಕ್ಕೂ 50 ಸಾವಿರ ಗೌರವ ಧನ ಮತ್ತು ಕಪ್ಪು ಹುಲಿ, ಕುಣಿತ, ಬಣ್ಣಗಾರಿಗೆ, ಮುಡಿ ಬಿಸಾಡುವುದು ವಿಷಯದಲ್ಲಿ ಆರು ವೈಯಕ್ತಿಕ ಪ್ರಶಸ್ತಿಗಳಿದ್ದು ತಲಾ 50 ಸಾವಿರ ನೀಡಲಾಗುವುದು ಎಂದು ಮಿಥುನ್ ರೈ ತಿಳಿಸಿದ್ದಾರೆ. 

ನಮ್ಮ ಟಿವಿ ಮುಖ್ಯಸ್ಥ ಶಿವಶರಣ್ ಶೆಟ್ಟಿ, ವಿಕಾಸ್ ಶೆಟ್ಟಿ, ಅವಿನಾಶ್ ಸುವರ್ಣ, ನವೀನ್ ಶೆಟ್ಟಿ, ದುಬೈ ಉದ್ಯಮಿ ಆನಂದ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು.

This year's Pilinalike tiger dance competition, led by Congress leader Mithun Rai, promises to be grander than ever as it marks its 10th edition. Scheduled to take place on October 1 at the Karavali Utsav Grounds, the event coincides with Dasara celebrations and is expected to draw massive public attention.