ಬ್ರೇಕಿಂಗ್ ನ್ಯೂಸ್
20-06-25 07:10 pm Mangalore Correspondent ಕರಾವಳಿ
ಮಂಗಳೂರು, ಜೂನ್ 20 : ಕೆಲವೊಂದು ಐಷಾರಾಮಿ ಕಾರುಗಳು ಎಷ್ಟು ವೇಗದಲ್ಲಿ ಹೋದರೂ, ವ್ಯತ್ಯಾಸ ಗೊತ್ತಾಗಲ್ಲ. ಹಾಗಂತ, ಕುಡಿದ ಮತ್ತಿನಲ್ಲಿ 200 ಕಿಮೀ ವೇಗದಲ್ಲಿ ಕಾರು ಓಡಿಸಿದರೆ ಹೇಗಾಗಬೇಡ. ಮಂಗಳೂರಿನಲ್ಲಿ ನಡುರಾತ್ರಿ ಇಂಥದ್ದೇ ಅತಿ ವೇಗದ ಹುಚ್ಚಾಟ ಇಬ್ಬರು ಹದಿಹರೆಯದ ಯುವಕರನ್ನು ದುರಂತ ಸಾವಿನ ಕೂಪಕ್ಕೆ ನೂಕಿದೆ.
ಮಂಗಳೂರು ಹೊರವಲಯದ ಜಪ್ಪಿನಮೊಗರು ಹೆದ್ದಾರಿಯಲ್ಲಿ ತಡರಾತ್ರಿ ನಡೆದ ಅಪಘಾತಕ್ಕೆ ಅತಿ ವೇಗ ಮತ್ತು ಕುಡಿತದ ನಶೆಯೇ ಕಾರಣ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಈ ವೇಳೆ, ಫೋಕ್ಸ್ ವೇಗನ್ ವರ್ಟಸ್ ಕಾರು ಎಷ್ಟು ವೇಗದಲ್ಲಿ ಓಡಿಸಿದ್ರೂ ಏನೂ ಆಗಲ್ಲ ಎಂದು ಎರ್ರಾಬಿರ್ರಿ ಓಡಿಸಿದ್ದಾರೆ. ಕೇರಳ ಗಡಿಭಾಗ ತಲಪಾಡಿಯಲ್ಲಿ ನಡುರಾತ್ರಿ ಪಾರ್ಟಿ ಮುಗಿಸಿ, ಯುವಕರು ಮಂಗಳೂರಿನತ್ತ ಧಾವಿಸಿ ಬರುತ್ತಿದ್ದಾಗ ಭೀಕರ ಅಪಘಾತ ನಡೆದಿದೆ. ಅಪಘಾತಕ್ಕೂ ಮುನ್ನ ಕಾರಿನಲ್ಲಿ ಬರುತ್ತಿದ್ದಾಗ ಗಂಟೆಗೆ 192ರ ವೇಗದಲ್ಲಿ ಕಾರು ಚಲಾಯಿಸುತ್ತಿರುವುದನ್ನು ಯುವಕರು ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಕುಡಿತದ ನಶೆಯಲ್ಲಿ ತೇಲಾಡುತ್ತ ಬಂದಿದ್ದರು. ಇವರ ಅತಿ ವೇಗವೇ ಅನಾಹುತಕ್ಕೆ ಕಾರಣವಾಗಿದ್ದು, ಜಪ್ಪಿನಮೊಗರಿನಲ್ಲಿ ಹೆದ್ದಾರಿ ಪಕ್ಕದ ಕಿರುಸೇತುವೆಯ ತುದಿಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಅಮನ್ ರಾವ್ ಮತ್ತು ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ ಎಂಬಿಬ್ಬರು ಯುವಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡಿಕ್ಕಿಯ ತೀವ್ರತೆ ಎಷ್ಟಿತ್ತು ಎಂದರೆ, ಪಕ್ಕದ ಕಟ್ಟಡದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದರೂ ಕಣ್ಣು ಮಿಟುಕಿಸುವಷ್ಟರಲ್ಲಿ ಢಮಾರ್ ಎನ್ನುತ್ತ ಕಾರು ಹಾದು ಹೋಗಿತ್ತು. ಅತಿ ರಭಸದಿಂದ ಡಿಕ್ಕಿಯಾಗಿದ್ದರಿಂದ ಕಾರಿನ ಮುಂಭಾಗದ ಇಂಜಿನ್ ಹೊರಗೆ ಬಂದಿದ್ದು, ಒಳಗಿನ ಏರ್ ಬ್ಯಾಗ್ ಕೂಡ ಕಿತ್ತುಹೋಗಿದೆ.
ಘಟನೆಗೆ ಅತಿ ವೇಗ ಮತ್ತು ಕುಡಿತದ ನಶೆಯೇ ಕಾರಣವೆಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಕೇಸು ದಾಖಲಿಸಿದ್ದಾರೆ. ಇದಲ್ಲದೆ, ಅತಿ ವೇಗದ ಚಾಲನೆ ಮತ್ತು ಕುಡಿದು ವಾಹನ ಚಲಾಯಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದ್ದು, ಸಾರ್ವಜನಿಕರು ಎಚ್ಚರದಲ್ಲಿ ವಾಹನ ಚಲಾಯಿಸುವಂತೆ ಸಲಹೆ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಂಗಳೂರಿನಲ್ಲಿ 75 ರಸ್ತೆ ಅಪಘಾತಗಳಾಗಿದ್ದು, 70 ಪ್ರಕರಣ ಅತಿ ವೇಗದ ವಾಹನ ಚಾಲನೆಯ ಕಾರಣದಿಂದಲೇ ಆಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಇದಲ್ಲದೆ, ಕುಡಿದು ವಾಹನ ಚಲಾಯಿಸಿದರೆ ಹತ್ತು ಸಾವಿರದ ವರೆಗೆ ದಂಡ ವಿಧಿಸಲು ಅವಕಾಶ ಇದೆ, ರ್ಯಾಶ್ ಡ್ರೈವಿಂಗ್ ಮಾಡಿದ್ರೂ ದುಬಾರಿ ದಂಡ ವಿಧಿಸಬಹುದು. ಇದಕ್ಕೆ ಅವಕಾಶ ಕೊಡದೆ ಸೇಫ್ ಆಗಿ ಕಾರು, ಬೈಕ್ ಚಲಾಯಿಸಿ, ನಿಮ್ಮ ಜೀವ ಕಾಪಾಡಿಕೊಳ್ಳಿ, ವಾಹನ ಚಲಾಯಿಸುವಾಗ ನಿಮ್ಮನ್ನು ಹೊಂದಿದವರು ಮನೆಯಲ್ಲಿ ಇರುತ್ತಾರೆಂಬ ಗಮನ ಇಟ್ಟುಕೊಳ್ಳಿ ಎಂದು ಸಾರ್ವಜನಿಕರಿಗೆ ಪೊಲೀಸರು ಸಲಹೆ ಮಾಡಿದ್ದಾರೆ.
A tragic road accident claimed the lives of two young men in the early hours of Thursday near Jappinamogaru on the outskirts of Mangaluru. The accident was reportedly caused by drunk driving and overspeeding, with the vehicle clocking a staggering 192 km/h at the time of the crash.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm