ಬ್ರೇಕಿಂಗ್ ನ್ಯೂಸ್
12-06-25 10:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 12 : ಅಹ್ಮದಾಬಾದ್ ಏರ್ಪೋರ್ಟ್ ಬಳಿಯಲ್ಲೇ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದ ಕ್ಲೈವ್ ಕುಂದರ್ ಮಂಗಳೂರು ಮೂಲದವರು ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಮಂಗಳೂರಿನಲ್ಲಿ ಸರ್ಚ್ ಮಾಡಿದಾಗ, ಕ್ಲೈವ್ ಕುಂದರ್ ಹೆತ್ತವರು, ಕುಟುಂಬಸ್ಥರು ಮುಂಬೈನಲ್ಲಿಯೇ ನೆಲೆಸಿದ್ದಾರೆ ಎಂಬುದು ಖಚಿತವಾಗಿದೆ.
ಮಂಗಳೂರು ಮೂಲದ ಕ್ಲಿಫರ್ಡ್ ಕುಂದರ್ ಮುಂಬೈನ ಕಾಲಿನಾದಲ್ಲಿ ನಿವಾಸಿಯಾಗಿದ್ದು, ಇವರ ಪುತ್ರ ಕ್ಲೈವ್ ಕುಂದರ್ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದರು. ಕುಂದರ್ ಎನ್ನುವ ಸರ್ನೇಮ್ ಇರುವುದರಿಂದ ಇವರು ಮಂಗಳೂರು ಮೂಲದ ಸಿಎಸ್ಐ ಪ್ರೊಟೆಸ್ಟಂಟ್ ಕ್ರೈಸ್ತರು. ಮಂಗಳೂರಿನಲ್ಲಿ ಜಪ್ಪಿನಮೊಗರು, ಬಲ್ಮಠ, ಕಿನ್ನಿಗೋಳಿ ಆಸುಪಾಸಿನಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ. ಕ್ಲೈವ್ ಕುಂದರ್ ಬಗ್ಗೆ ಜೆಪ್ಪುವಿನ ಕಾಂತಿ ಚರ್ಚ್ ಫಾದರ್ ಗೇಬ್ರಿಯಲ್ ಸ್ಯಾಮುವೆಲ್ ಅವರಲ್ಲಿ ಕೇಳಿದಾಗ, ಹೆಚ್ಚಿನವರು ನಮ್ಮ ಕಾಂತಿ ಚರ್ಚ್ ನವರು ಎಂದು ಫೋನ್ ಮಾಡುತ್ತಿದ್ದಾರೆ. ಆದರೆ ಕ್ಲೈವ್ ಕುಂದರ್ ಕುಟುಂಬ ಇಲ್ಲಿ ನೆಲೆಸಿಲ್ಲ. ಅವರ ಫ್ಯಾಮಿಲಿ ಮುಂಬೈನ ಕುರ್ಲಾದಲ್ಲಿದ್ದಾರೆ. ಕುರ್ಲಾದಲ್ಲಿ ಯುಬಿಎಮ್ ಕಾಂತಿ ಚರ್ಚ್ ಸದಸ್ಯರು ಎಂದು ಹೇಳಿದ್ದಾರೆ.
ಬಲ್ಮಠ ಥಿಯೋಲಾಜಿಕಲ್ ಸೊಸೈಟಿಯವರು ಹೇಳುವ ಪ್ರಕಾರ, ಮಂಗಳೂರು ಮೂಲ ಆಗಿದ್ದರೂ ಬಹಳಷ್ಟು ಸಿಎಸ್ಐ ಕುಟುಂಬಗಳು ಮುಂಬೈನಲ್ಲಿ ನೆಲೆಸಿದ್ದು ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಕ್ಲೈವ್ ಕುಂದರ್ ಅವರ ಹೆತ್ತವರು ಕೂಡ ಮುಂಬೈನಲ್ಲಿಯೇ ಇದ್ದಾರೆ. ಕ್ಲೈವ್ ಕುಂದರ್ ಅಮೆರಿಕದ ಫ್ಲೋರಿಡಾದಲ್ಲಿ ಪೈಲಟ್ ತರಬೇತಿ ಪಡೆದಿದ್ದು, ಆನಂತರ ಕೋ ಪೈಲಟ್ ಆಗಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದರು. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿದ್ದ ಮುಖ್ಯ ಪೈಲಟ್ ಕಮಾಂಡರ್ ಸುಮಿತ್ ಸಬರ್ವಾಲ್ 8200 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದು, ಇತರರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಕ್ಲೈವ್ ಕುಂದರ್ ಅವರಿಂದಲೂ ತರಬೇತಿ ಪಡೆಯುತ್ತಿದ್ದರು. ಆದರೂ 1100 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದರು.
Following the tragic crash of the Air India flight near Ahmedabad, it was initially believed that co-pilot Clive Kundar hailed from Mangaluru. However, fresh clarification from local church authorities confirms that his family resides in Mumbai and not in Mangaluru.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm