ಬ್ರೇಕಿಂಗ್ ನ್ಯೂಸ್
07-06-25 05:37 pm Mangalore Correspondent ಕರಾವಳಿ
ಮಂಗಳೂರು, ಜೂನ್ 7 : ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಘಟನೆಗೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಅದೇ ಕಾಲೇಜಿನ ಪಿಜಿ ವಿದ್ಯಾರ್ಥಿನಿಯೊಬ್ಬಳನ್ನು ವಶಕ್ಕೆ ಪಡೆದಿದ್ದಾರೆ. ಬಾಂಬ್ ಬೆದರಿಕೆ ಬಗ್ಗೆ ದೂರು ನೀಡಿದವಳೇ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಭಾರತ ಮೂಲದ ಚಲಸಾನಿ ಮೋನಿಕಾ ಚೌಧರಿ ವಶಕ್ಕೆ ಪಡೆದ ವಿದ್ಯಾರ್ಥಿನಿಯಾಗಿದ್ದು ಈಕೆ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದಳು. ಮೇ 4ರಂದು ಪಿಜಿ ವಿಷಯದಲ್ಲಿ ಸೆಮಿನಾರ್ ಮಂಡನೆ ಮಾಡುವುದಕ್ಕೆ ಟಾಸ್ಕ್ ಕೊಡಲಾಗಿತ್ತು. ಸೆಮಿನಾರ್ ತಪ್ಪಿಸುವುದಕ್ಕಾಗಿ ಮೋನಿಕಾ ಚೌಧರಿ ಅದೇ ದಿನ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಕಾಲೇಜು ಸಿಬಂದಿಗೆ ಸುಳ್ಳು ಹೇಳಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ತನ್ನ ಮೊಬೈಲಿಗೆ ನಾಲ್ಕೈದು ಬಾರಿ ಕರೆ ಮಾಡಿ ಯಾರೋ ಬೆದರಿಕೆ ಒಡ್ಡಿದ್ದಾರೆಂದು ಹೇಳಿದ್ದಳು. ಆನಂತರ, ಕಾಲೇಜು ಆಡಳಿತದ ಸೂಚನೆಯಂತೆ ಉಳ್ಳಾಲ ಠಾಣೆಗೆ ದೂರು ನೀಡಲಾಗಿತ್ತು. ಈಕೆಗೆ ಫೋನ್ ಕರೆ ಬಂದಿದ್ದರಿಂದ ವಿದ್ಯಾರ್ಥಿನಿಯನ್ನೇ ದೂರುದಾರಳೆಂದು ಗುರುತಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಘಟನೆ ಬಗ್ಗೆ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.
ಪೊಲೀಸರು ವಿದ್ಯಾರ್ಥಿನಿಯನ್ನು ತನಿಖೆ ನಡೆಸಿದಾಗ ಪೂರಕ ಲಭಿಸದ್ದರಿಂದ ಆಕೆಯ ಬಗ್ಗೆಯೇ ತನಿಖೆ ನಡೆಸಲಾಗಿತ್ತು. ಆಕೆ ಅಲ್ಲಿಯೇ ಪಿಜಿ ವ್ಯಾಸಂಗ ನಡೆಸುತ್ತಿರುವುದು ಮತ್ತು ಅದೇ ದಿನ ಸೆಮಿನಾರ್ ಇದ್ದ ಮಾಹಿತಿಯೂ ಲಭಿಸಿತ್ತು.
ಸೆಮಿನಾರ್ ಹಿಂದೆ ಹಾಕಲಿಕ್ಕಾಗಿ ಹೈದರಾಬಾದಿನ ಸ್ನೇಹಿತನ ಮೊಬೈಲ್ ಗೆ ಆಸ್ಪತ್ರೆಯ ಸ್ಥಿರ ದೂರವಾಣಿಗೆ ಕರೆ ಮಾಡುವಂತೆ ಮೆಸೇಜ್ ಹಾಕಿದ್ದಳು. ಮೆಸೇಜ್ ನೋಡಿ ಸ್ನೇಹಿತ ಕರೆ ಮಾಡಿದ್ದಾನೆ. ಆಸ್ಪತ್ರೆಯ ಸಿಬ್ಬಂದಿಗಳು ಯಾರ ಕರೆ ಎಂದು ಕೇಳಿದಾಗ ಬಾಂಬ್ ಬೆದರಿಕೆ ಎಂದು ಗುಳ್ಳೆಬ್ಬಿಸಿದ್ದಾಳೆ. ಆಕೆಯೇ ಉಳ್ಳಾಲ ಠಾಣೆಗೆ ದೂರು ನೀಡಿದ್ದಾಳೆ. ಕರೆ ಮಾಡಿದ ಸ್ನೇಹಿತ ಹೈದರಾಬಾದಿನಲ್ಲಿ ಐಟಿ ಕಂಪನಿ ಉದ್ಯೋಗಿಯಾಗಿದ್ದು ಆತನಿಗೆ ಯಾವುದೇ ವಿಚಾರ ತಿಳಿದಿಲ್ಲ ಎಂದು ಪೊಲೀಸರ ಕಡೆಯಿಂದ ತಿಳಿದುಬಂದಿದೆ.
ಸುಳ್ಳು ಮಾಹಿತಿ ನೀಡಿದ್ದಾಗಿ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಕಣಚೂರು ಆಸ್ಪತ್ರೆಯಲ್ಲಿ ಶೋಧ ನಡೆಸಿದ್ದರು. ಶೋಧ ಬಳಿಕ ಯಾವುದೇ ಸುಳಿವು ಸಿಗದ ಕಾರಣ ಹುಸಿ ಬಾಂಬ್ ಎಂದು ಸಾಬೀತಾಗಿತ್ತು.
Mangalore PG Student Arrested for Fake Bomb Threat at Kanachur Medical College, Police Say She Made the Call to Avoid Seminar.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm