ಬ್ರೇಕಿಂಗ್ ನ್ಯೂಸ್
29-08-24 07:25 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 29: ಇಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿ ಆಟೋ ಚಾಲಕರು ಮಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜ್ಯೋತಿ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಮೆರವಣಿಗೆಯಲ್ಲಿ ಸಾಗಿದ ಆಟೋ ಚಾಲಕರು ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದಾರೆ.
ಖಾಕಿ ಅಂಗಿ ಧರಿಸಿದ್ದ ನೂರಾರು ಚಾಲಕರು ತಮ್ಮ ಆಟೋಗಳನ್ನು ಬದಿಗಿಟ್ಟು ಮೆರವಣಿಗೆಯಲ್ಲಿ ಸಾಗಿದ್ದು, ಮಿನಿ ವಿಧಾನಸೌಧ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನಾ ಸಭೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಆಟೋ ಚಾಲಕರು, ಜಿಲ್ಲಾಧಿಕಾರಿ ತಾರತಮ್ಯ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಇಲ್ಲದ ಕಾನೂನು ಇಲ್ಲಿ ಮಾತ್ರ ಯಾಕೆ ಜಾರಿಗೆ ತರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಆಟೋ ಚಾಲಕ ಮಾತನಾಡಿ, ಅಷ್ಟಕ್ಕೂ ನೀವು ಇಡೀ ಜಿಲ್ಲೆಯಲ್ಲಿ ಅವರಿಗೆ ಸಂಚರಿಸಲು ಅನುಮತಿ ನೀಡುವುದಕ್ಕೂ ಮುನ್ನ ನೀವು ಆರ್ ಟಿಓ ಸಭೆ ಕರೆಯಬಹುದಿತ್ತು. ನಮಗೂ ಮಾಹಿತಿ ಕೊಟ್ಟು ಈ ರೀತಿಯ ನಿರ್ಧಾರಕ್ಕೆ ಬರಬಹುದಿತ್ತು. ನಮ್ಮ ಅಹವಾಲನ್ನೂ ಕೇಳಬೇಕಿತ್ತಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಆಟೋ ಚಾಲಕರ ಪ್ರತಿಭಟನೆಗೆ ಸಿಐಟಿಯು ಬೆಂಬಲಿಸಿದ್ದು, ಪಕ್ಷದ ನಾಯಕ ಸುನಿಲ್ ಕುಮಾರ್ ಬಜಾಲ್ ಆಟೋ ಚಾಲಕರ ಪರವಾಗಿ ಮಾತನಾಡಿದರು. ಮಂಗಳೂರು ನಗರದಲ್ಲಿ 9 ಸಾವಿರ ಆಟೋ ಚಾಲಕರಿದ್ದು, ಏಕಾಏಕಿ ಇಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಇಡೀ ಜಿಲ್ಲೆಯಲ್ಲಿ ಸಂಚರಿಸಲು ಪರವಾನಗಿ ಕೊಟ್ಟಿದ್ದೀರಿ. ಇದರಿಂದ ಬಡ ಪೆಟ್ರೋಲ್, ಸಿಎನ್ ಜಿ ಚಾಲಿತ ಆಟೋಗಳವರಿಗೆ ನಷ್ಟವಾಗಿದೆ. ಇಲೆಕ್ಟ್ರಿಕ್ ಹೊರತಾದ ಆಟೋಗಳಿಗೆ ಬಾಡಿಗೆ ಸಿಗುತ್ತಿಲ್ಲ. ಇವರು ಆಟೋ ಚಾಲನೆ ಬಿಟ್ಟು ಬೇರೆ ಉದ್ಯೋಗ ಮಾಡಬೇಕೇ.. ಎಂದು ಪ್ರಶ್ನಿಸಿದರು.
ಕೇಳಿದರೆ ಕೇಂದ್ರ ಸರಕಾರದ ನಿರ್ಧಾರ ಎಂದು ಹೇಳುತ್ತೀರಿ. ಬೇರೆಲ್ಲೂ ಇಲ್ಲದ ನೀತಿಯನ್ನು ಮಂಗಳೂರಿಗೆ ಮಾತ್ರ ಯಾಕೆ ಜಾರಿಗೆ ತರುತ್ತೀರಿ. ಉಡುಪಿ ಸೇರಿದಂತೆ ಆಸುಪಾಸಿನ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ಮಂಗಳೂರು ಸ್ಮಾರ್ಟ್ ಸಿಟಿ ಅನ್ನುತ್ತೀರಿ. 350 ರಿಕ್ಷಾ ಪಾರ್ಕ್ ಇದ್ದುದನ್ನು 115ಕ್ಕೆ ಇಳಿಸಿದ್ದೀರಿ. ಏಕಾಏಕಿ ಪಾರ್ಕ್ ಗಳನ್ನು ಕಡಿತ ಮಾಡಿದರೆ ಆಟೋ ಚಾಲಕರು ಎಲ್ಲಿ ಹೋಗಬೇಕು. ಬಡಪಾಯಿ ಆಟೋ ಚಾಲಕರಿಗೆ ಮಾತ್ರ ನಿಮ್ಮ ನೀತಿಯೇ.. ಮಾಲಿನ್ಯ ನಿಯಂತ್ರಣ ಆಗುತ್ತೆ ಎಂದು ಇಲೆಕ್ಟ್ರಿಕ್ ರಿಕ್ಷಾ ತಂದಿದ್ದು ಅಂತಾದರೆ, ಇಲೆಕ್ಟ್ರಿಕ್ ಬಸ್ಗಳನ್ನೂ ಹಾಕಿ. ಅದನ್ನು ಯಾಕೆ ಮಾಡಲ್ಲ. ಬಸ್ಸಿಲ್ಲದ ರೂಟಿಗೆ ಕೆಎಸ್ಸಾರ್ಟಿಸಿ ಬಸ್ ಹಾಕಿ ಅಂದ್ರೆ ಹಾಕಲು ನಿಮಗೆ ಆಗಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಆಟೋ ಚಾಲಕರೊಬ್ಬರು ಮಾತನಾಡಿ, ಈ ತಾರತಮ್ಯ ನೀತಿಯನ್ನು ಹಿಂಪಡೆಯಲೇಬೇಕು. ಇಲ್ಲಾಂದ್ರೆ ನಾವು ಮಹಾನಗರ ಪಾಲಿಕೆ ಕಚೇರಿಗೆ ನುಗ್ಗುತ್ತೇವೆ. ಈ ನೀತಿ ತಂದಿರುವುದರ ಹಿಂದೆ ನಿಮಗೆ ಸೂಟ್ ಕೇಸ್ ಬಂದಿರುವ ಶಂಕೆ ಇದೆ. ಅದೇ ಕಾರಣಕ್ಕೆ ಏಕಾಏಕಿ ಇಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೀರಿ ಎಂದು ಹೇಳಿದರು. ಹೆಚ್ಚಿನ ಆಟೋಗಳು ಸ್ಥಗಿತವಾಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು.
Auto-rickshaw drivers held a protest under the leadership of their unions on Thursday August 29, objecting to the district administration’s decision to grant permission for electric auto-rickshaws to operate throughout Dakshina Kannada district.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm