ಬ್ರೇಕಿಂಗ್ ನ್ಯೂಸ್
26-02-24 02:15 pm Mangalore Correspondent ಕರಾವಳಿ
ಮಂಗಳೂರು, ಫೆ.26: ಕನ್ನಡಿಗ ಮೀನುಗಾರರ ಮೇಲೆ ತಮಿಳುನಾಡು ಮತ್ತು ಕೇರಳದ ಮೀನುಗಾರರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕಳೆದ ಎರಡು ತಿಂಗಳಲ್ಲಿ ಮಂಗಳೂರಿನಿಂದ ಮೀನುಗಾರಿಕೆ ತೆರಳಿದ್ದ 50ರಷ್ಟು ಬೋಟುಗಳಿಗೆ ಹಾನಿ ಮಾಡಿದ್ದಲ್ಲದೆ, ಮೀನು ಕಾರ್ಮಿಕರ ಮೇಲೆಯೂ ಹಲ್ಲೆ ನಡೆಸಿದ್ದಾರೆಂದು ಮಂಗಳೂರಿನ ಮೀನುಗಾರರು ಹೇಳಿದ್ದಾರೆ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಬಳಿಕ ಆಳ ಸಮುದ್ರ ಮೀನುಗಾರಿಕೆ ತೆರಳುತ್ತಾರೆ. ಬೆಲೆಬಾಳುವ ರಿಬ್ಬನ್ ಫಿಶ್ ಹಿಡಿಯುವ ಉದ್ದೇಶದಿಂದ ದಕ್ಷಿಣದತ್ತ ತೆರಳಿ, ಆಳ ಸಮುದ್ರದಲ್ಲಿ ಬಲೆ ಹಾಕುತ್ತಾರೆ. ತಮಿಳುನಾಡಿನ ರಾಮೇಶ್ವರಂ ವರೆಗೂ ಮೀನುಗಾರಿಕೆಗೆ ತೆರಳಿ, ಹಿಂತಿರುಗುವುದು ವಾಡಿಕೆ. ಈ ಬಾರಿ ಆಳ ಸಮುದ್ರಕ್ಕೆ ಹೋಗಿದ್ದಾಗ ಕನ್ನಡಿಗರನ್ನು ಟಾರ್ಗೆಟ್ ಮಾಡಿ, ತಮಿಳು ಮತ್ತು ಕೇರಳದ ಮೀನುಗಾರರು ಹಲ್ಲೆ ನಡೆಸಿದ್ದಾರೆ.
ಕರ್ನಾಟಕದ ಬೋಟುಗಳನ್ನು ಸುತ್ತುವರೆದು ಹಲ್ಲೆ ಮತ್ತು ಬೋಟಿಗೆ ಹಾನಿ ಎಸಗಿರುವ ಘಟನೆಯ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಮಂಗಳೂರಿನ ಮೀನುಗಾರರು ಇದನ್ನು ಮೊಬೈಲಿನಲ್ಲಿ ಸೆರೆಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ಅಲ್ಲದೆ, ಮೀನುಗಾರಿಕಾ ಇಲಾಖೆಯ ಗಮನಕ್ಕೂ ತಂದಿದ್ದಾರೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಈ ರೀತಿ ಆಳ ಸಮುದ್ರ ಮೀನುಗಾರಿಕೆ ತೆರಳುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಇಂತಹ ಘಟನೆಗಳಾಗುತ್ತವೆ. ಕಳೆದ ಬಾರಿ ಮಂಗಳೂರಿನ ಮೀನುಗಾರರು ಪ್ರತಿ ಹಲ್ಲೆ ನಡೆಸಿದ ಬಗ್ಗೆ ಕೇರಳದ ಕಣ್ಣೂರಿನಲ್ಲಿ ಕೇಸು ದಾಖಲಾಗಿತ್ತಲ್ಲದೆ, ಇಬ್ಬರನ್ನು ಅರೆಸ್ಟ್ ಮಾಡಿದ್ದ ಘಟನೆಯೂ ನಡೆದಿತ್ತು.
ಸಮುದ್ರ ಮೀನುಗಾರಿಕೆಗೆ ಗಡಿಯ ಭೇದ ಇರುವುದಿಲ್ಲ. ತಮಿಳುನಾಡು ಮೀನುಗಾರರು ಉತ್ತರದತ್ತ ಬಂದು ಕರ್ನಾಟಕದ ಕರಾವಳಿಯಲ್ಲೂ ಮೀನುಗಾರಿಕೆ ನಡೆಸುತ್ತಾರೆ. ಹಾಗೆಂದು ಅವರ ಮೇಲೆ ನಾವೆಂದೂ ಹಲ್ಲೆ ನಡೆಸಿದ್ದಿಲ್ಲ. ನಾವು ಬ್ಯಾಂಕ್ ಸಾಲ ಮಾಡಿ, ಕಾರ್ಮಿಕರನ್ನು ಗುತ್ತಿಗೆ ಪಡೆದು ಆಳಸಮುದ್ರಕ್ಕೆ ಬೋಟ್ ಕಳಿಸುತ್ತೇವೆ. ಅಂಥದ್ದರಲ್ಲಿ ಈ ರೀತಿ ಹಲ್ಲೆಗಳಾದರೆ ನಾವೇನು ಮಾಡೋದು ಎಂದು ಬೋಟ್ ಮಾಲೀಕ ಅರುಣ್ ಪ್ರಶ್ನಿಸುತ್ತಾರೆ. ಈ ಬಾರಿಯೂ ಕರಾವಳಿಯಲ್ಲಿ ಮೀನು ಸಿಗುತ್ತಾ ಇಲ್ಲ. ಮೀನು ಕಡಿಮೆ ಇರುವುದರಿಂದ ಮಂಗಳೂರಿನ ಸಾವಿರ ಬೋಟುಗಳ ಪೈಕಿ 50-60 ಬೋಟುಗಳಷ್ಟೇ ತಮಿಳುನಾಡು ಕಡೆಗೆ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ಇವರು ಗುಂಪು ಕಟ್ಟಿ ಕಲ್ಲು ಬಿಸಾಕಿ ಹಲ್ಲೆ ನಡೆಸಿದರೆ ನಾವು ಬದುಕೋದು ಹೇಗೆ ಎಂದು ಪ್ರಶ್ನಿಸುತ್ತಾರೆ.
ವಿಡಿಯೋದಲ್ಲಿ ಕನ್ನಡಿಗರ ಮೀನುಗಾರಿಕಾ ಬೋಟನ್ನು ವಶಕ್ಕೆ ಪಡೆದು ಅದರಲ್ಲಿದ್ದ ಬಲೆ ಇನ್ನಿತರ ಪರಿಕರಗಳನ್ನು ಸಮುದ್ರಕ್ಕೆ ಎಸೆಯುವ ಚಿತ್ರಣ ಇದೆ. ಆಮೂಲಕ ಸಮುದ್ರದಲ್ಲಿಯೂ ಮೀನುಗಾರರು ರಾಜ್ಯ, ಭಾಷೆಯ ಆಧಾರದಲ್ಲಿ ಹಕ್ಕು ಸ್ಥಾಪನೆ ಮಾಡುವುದಕ್ಕೆ ಹೊರಟಂತಿದೆ. ಭಾರತೀಯ ಜಲರೇಖೆ ಎಂದ ಮೇಲೆ ಅಲ್ಲಿ ದೇಶದ ಯಾವ ರಾಜ್ಯದವರೂ ಕೂಡ ಮೀನುಗಾರಿಕೆ ನಡೆಸಬಹುದು. ಈ ರೀತಿ ಗಡಿ, ಭಾಷೆ ಮುಂದಿಟ್ಟು ಹಲ್ಲೆ ನಡೆಸಿದರೆ, ಮೀನುಗಾರರು ಮುಯ್ಯಿಗೆ ಮುಯ್ಯಿ ಮಾಡೋಕೆ ಹೋದರೆ ಮುಂದೆ ಎಲ್ಲರಿಗೂ ತೊಂದರೆಯಾದೀತು. ಮೀನುಗಾರಿಕೆ ಸಂದರ್ಭದಲ್ಲಿ ಸಮುದ್ರವನ್ನು ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸಬೇಕಾದ ಕರ್ತವ್ಯ ಮೀನುಗಾರರಿಗೆ ಇರಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಸಮುದ್ರಕ್ಕೆ ಎಸೆಯುವುದು ಮೀನುಗಳಿಗೆ ಅಪಾಯಕಾರಿಯಾಗಿದ್ದರಿಂದ ಮೀನಿನ ಕ್ಷಾಮಕ್ಕೆ ಇವರೇ ಕೊಡುಗೆ ಕೊಟ್ಟಂತಾಗುತ್ತದೆ.
Mangalore Fishermen and boats attacked by Tamil Fishermen in deep see fishing, more than 50 boats damaged in the last two months.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm