ಬ್ರೇಕಿಂಗ್ ನ್ಯೂಸ್
16-03-23 06:10 pm Mangalore Correspondent ಕರಾವಳಿ
ಮಂಗಳೂರು, ಮಾ.16: ಕರಾವಳಿಯಲ್ಲಿ ಜನಮೆಚ್ಚುಗೆ ಪಡೆದಿರುವ ಶಿವದೂತೆ ಗುಳಿಗೆ ತುಳು ನಾಟಕದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅದೇನೋ ಗುಳಿಗೆಯಂತೆ, ಜಾಪಾಳ ಗುಳಿಗೆಯೋ ಏನೋ. ಅದನ್ನು ಜನರಿಗೆ ಕೊಟ್ಟರೆ ಗತಿಯೇ.. ಭಾರಿ ಅಪಾಯ ಇದೆ ಎಂದು ಅಣಕಿಸುವ ರೀತಿ ಮಾತನಾಡಿದ್ದು ಅದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾಲತಾಣದಲ್ಲಿ ಭಾರೀ ವಿರೋಧವೂ ಕೇಳಿಬಂದಿದೆ.
ತೀರ್ಥಹಳ್ಳಿಯಲ್ಲಿ ಶಿವದೂತೆ ಗುಳಿಗೆ ತುಳು ನಾಟಕವನ್ನು ಅಲ್ಲಿನ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಬೆಂಬಲಿಗರು ಆಯೋಜಿಸಿದ್ದರು. ನಾಟಕದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಪೋಸ್ಟರ್ ಹಾಕಿದ್ದರು. ನಾಟಕದ ಹಿನ್ನೆಲೆಯನ್ನು ತಿಳಿಯದ ಆರಗ ಜ್ಞಾನೇಂದ್ರ, ಕಾಂಗ್ರೆಸ್ ನಾಯಕರು ಚುನಾವಣೆ ವೇಳೆ ಮತದಾರರನ್ನು ಓಲೈಸಲು ನಾಟಕ ಮಾಡುತ್ತಿದ್ದಾರೆಂದು ತಿಳ್ಕೊಂಡು ಗುಳಿಗ ದೈವದ ಬಗ್ಗೆ ಅಪಚಾರ ಆಗುವ ರೀತಿ ಮಾತನಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಏರ್ಪಾಟು ಆಗಿದ್ದ ಕಾರ್ಯಕ್ರಮ ಒಂದರಲ್ಲಿ ಸಚಿವ ಆರಗ ಜ್ಞಾನೇಂದ್ರ ಶಿವದೂತೆ ಗುಳಿಗ ಹೆಸರಿನ ತುಳು ನಾಟಕವನ್ನು ಅಣಕಿಸಿ ಮಾತನಾಡಿದ್ದು ತುಳುವರ ಆಕ್ರೋಶಕ್ಕೆ ಗುರಿಯಾಗಿದೆ.


ಗುಳಿಗ ದೈವದ ಬಗ್ಗೆ ಸಚಿವರು ಅಪಚಾರ ಮಾಡಿದ್ದಾರೆ. ಇವರನ್ನು ತುಳುನಾಡಿನ ದೈವಗಳೇ ನೋಡಿಕೊಳ್ಳಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದಲ್ಲದೆ, ತುಳುವರು ನಂಬುವ ದೈವಗಳ ಬಗ್ಗೆ ಅಣಕ ಮಾಡಿರುವ ಸಚಿವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದು, ಕರಾವಳಿಯ ಬಹುಭಾಗದ ಜನರು ನಂಬುವ ದೈವಾರಾಧನೆ ಬಗ್ಗೆ ಗೇಲಿ ಮಾಡುವ ನೀವುಗಳು ಯಾವ ಮುಖ ಇಟ್ಟುಕೊಂಡು ತುಳುವರಲ್ಲಿ ಮತ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕರಾವಳಿ ಜನರ ಶಕ್ತಿದೈವ ಶಿವದೂತ ಗುಳಿಗರನ್ನೇ ಅವಮಾನಿಸುವಷ್ಟು ಸೊಕ್ಕು ಬಿಜೆಪಿಯವರಿಗೆ ಬಂದಿದೆ ಎಂದರೆ, ಇದರ ತೀರ್ಮಾನ ಚುನಾವಣೆಯಲ್ಲಿ ಜನರು ಮಾಡಲಿದ್ದಾರೆ ಎಂದು ಹೇಳಿದ್ದಾರೆ.


ಕೆಲವು ಗುಳಿಗ ದೈವದ ಭಕ್ತರು ಆರಗ ಜ್ಞಾನೇಂದ್ರರಿಗೆ ಗುಳಿಗನೇ ಅಹಂಕಾರ ಇಳಿಸುತ್ತಾನೆ, ದೈವದ ತಾಕತ್ತು ಪರಿಚಯ ಆಗಲಿದೆ ಎಂದು ಬರೆದಿದ್ದಾರೆ. ತನ್ನ ಮಾತು ವಿವಾದ ಆಗುತ್ತಲೇ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ತಾನೇನು ತುಳುವರ ದೈವಾರಾಧನೆಯ ವಿರೋಧಿಯಲ್ಲ. ಯಾವುದೇ ರೀತಿ ಅಣಕಿಸುವ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ತುಳು ನಾಟಕ ಮುಂದಿಟ್ಟು ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಟೀಕಿಸಿದ್ದು ಮಾತ್ರ. ಗುಳಿಗ ದೈವರ ವಿರುದ್ಧ ಹೇಳಿದ್ದಲ್ಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
#Karnataka #HomeMinister #Aragajnanendra saprks controversy by disrespecting #Guliga #Daiva#breakingnews #bjp #Mangalore pic.twitter.com/zmNViGi0sk
— Headline Karnataka (@hknewsonline) March 16, 2023
Shivamogga Home minister Araga Jnanendra controversy, criticises Guliga Daiva, social media floods with slamming minister for his remarks on Daiva. Video of this has gone viral on social media.
09-02-26 01:30 pm
HK News Desk
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
09-02-26 12:27 pm
HK News Desk
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
09-02-26 02:50 pm
Mangalore Correspondent
ಸೌಜನ್ಯಾ ಕೊಲೆ ಪ್ರಕರಣ ; ದೋಷಪೂರಿತ ತನಿಖೆ ನಡೆಸಿದ ಅ...
08-02-26 11:17 pm
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
09-02-26 02:04 pm
HK News Desk
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm