ಬ್ರೇಕಿಂಗ್ ನ್ಯೂಸ್
04-07-22 10:53 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಕುಳೂರು ಬಿಜೆಪಿ ಶಕ್ತಿಕೇಂದ್ರದ ಸಕ್ರಿಯ ಕಾರ್ಯಕರ್ತ, ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಚೇತನ್ ಕುಮಾರ್ (27) ಎಂಬ ಯುವಕನ ಶವ ಕುಳೂರು ಸೇತುವೆಯ ಬಳಿ ನದಿಯಲ್ಲಿ ಪತ್ತೆಯಾಗಿದೆ.
ಕುಳೂರು ನಿವಾಸಿಯಾಗಿದ್ದ ಚೇತನ್ ಕುಮಾರ್ ಮೆಕ್ಯಾನಿಕಲ್ ಡಿಪ್ಲೊಮಾ ಪೂರೈಸಿ ಬೈಕಂಪಾಡಿಯ ಸಿಗ್ನೆಟ್ ಕೆಂಟ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಏಳು ವರ್ಷಗಳಿಂದಲೂ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಚೇತನ್ ಗೆ ಹಣಕಾಸು ತೊಂದರೆ ಇರಲಿಲ್ಲ. ಬೇರಾವುದೇ ಚಟ, ಹವ್ಯಾಸವೂ ಇರಲಿಲ್ಲ. ಆದರೆ ಜುಲೈ 2ರಂದು ಸಂಜೆ ಯುವಕ ದಿಢೀರ್ ನಾಪತ್ತೆಯಾಗಿದ್ದು ಮನೆಯವರನ್ನಲ್ಲದೆ, ಅಲ್ಲಿನ ಯುವಕರನ್ನೂ ದಂಗುಬಡಿಸಿತ್ತು. ಹೀಗಾಗಿ ಚೇತನ್ ನಾಪತ್ತೆಯಾದ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಇದೀಗ ಮೃತದೇಹ ನದಿಯಲ್ಲಿ ಸಿಗುತ್ತಲೇ ಮನೆಯವರು ಅದನ್ನು ದೃಢಪಡಿಸಿದ್ದಾರೆ. ಅಲ್ಲದೆ, ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲವೆಂದು ಹೇಳಿದ್ದಾರೆ. ಆತನ ಗೆಳೆಯರ ಮಾಹಿತಿ ಪ್ರಕಾರ, ಇತ್ತೀಚೆಗೆ ಸ್ವಲ್ಪ ಹಣಕಾಸಿನ ತೊಂದರೆಗೆ ಈಡಾಗಿದ್ದ. ಹಣ ಪಡೆದಿದ್ದವರು ಹಿಂತಿರುಗಿಸದೆ ಕೈಕೊಟ್ಟಿದ್ದರು. ಕೈಸಾಲ ಪಡೆದು ತೀರಿಸಲಾಗದೆ ಚಿಂತೆಗೆ ಒಳಗಾಗಿದ್ದ. ಇತ್ತೀಚೆಗೆ ಕಂಪನಿಯಲ್ಲಿದ್ದ ಉದ್ಯೋಗವನ್ನೂ ಕಳಕೊಂಡಿದ್ದ. ಇದರ ಚಿಂತೆಯಿಂದ ಮನೆಯಲ್ಲಿ ಖಿನ್ನನಾಗಿರುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ.
ಹೆತ್ತವರ ನಾಲ್ಕು ಗಂಡು ಮಕ್ಕಳಲ್ಲಿ ಮೂರನೇಯನಾಗಿರುವ ಚೇತನ್ ಕುಮಾರ್, ಸಾವಿನ ಬಗ್ಗೆ ಜೊತೆಗಿದ್ದ ಯುವಕರಲ್ಲೇ ಅನುಮಾನ ಮೂಡಿಸಿತ್ತು. ಅಂಥಹದ್ದೇನೂ ಆಪತ್ತು, ತೊಂದರೆ ಇಲ್ಲದ ಯುವಕ ಯಾಕಾಗಿ ಸಾವು ಕಂಡ ಅನ್ನುವ ಪ್ರಶ್ನೆ ಮಾಡುತ್ತಿದ್ದರು. ಹಿಂದು ಸಂಘಟನೆ, ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾತ ಹಠಾತ್ತಾಗಿ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ಕಾವೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಲವ್ ಅಫೇರ್ ಇತ್ತೇ, ಕೈಸಾಲ ಇತ್ತೇ ಅಥವಾ ಬೇರೆ ಯಾವುದಾದ್ರೂ ಚಟಕ್ಕೆ ಅಂಟಿಕೊಂಡಿದ್ದನೇ ಅನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.
A youth from Kavoor, who went missing two days ago, was found dead on Monday, July 4. The deceased is identified as Chethan Kumar (27), a resident of Kavoor. Chethan was active in betting and had lost too much of money which has lead to for suicide. He went missing two days ago and a complaint was filed in Kavoor police station by the family members.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm