ಬ್ರೇಕಿಂಗ್ ನ್ಯೂಸ್
04-07-22 10:53 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಕುಳೂರು ಬಿಜೆಪಿ ಶಕ್ತಿಕೇಂದ್ರದ ಸಕ್ರಿಯ ಕಾರ್ಯಕರ್ತ, ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಚೇತನ್ ಕುಮಾರ್ (27) ಎಂಬ ಯುವಕನ ಶವ ಕುಳೂರು ಸೇತುವೆಯ ಬಳಿ ನದಿಯಲ್ಲಿ ಪತ್ತೆಯಾಗಿದೆ.
ಕುಳೂರು ನಿವಾಸಿಯಾಗಿದ್ದ ಚೇತನ್ ಕುಮಾರ್ ಮೆಕ್ಯಾನಿಕಲ್ ಡಿಪ್ಲೊಮಾ ಪೂರೈಸಿ ಬೈಕಂಪಾಡಿಯ ಸಿಗ್ನೆಟ್ ಕೆಂಟ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಏಳು ವರ್ಷಗಳಿಂದಲೂ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಚೇತನ್ ಗೆ ಹಣಕಾಸು ತೊಂದರೆ ಇರಲಿಲ್ಲ. ಬೇರಾವುದೇ ಚಟ, ಹವ್ಯಾಸವೂ ಇರಲಿಲ್ಲ. ಆದರೆ ಜುಲೈ 2ರಂದು ಸಂಜೆ ಯುವಕ ದಿಢೀರ್ ನಾಪತ್ತೆಯಾಗಿದ್ದು ಮನೆಯವರನ್ನಲ್ಲದೆ, ಅಲ್ಲಿನ ಯುವಕರನ್ನೂ ದಂಗುಬಡಿಸಿತ್ತು. ಹೀಗಾಗಿ ಚೇತನ್ ನಾಪತ್ತೆಯಾದ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಇದೀಗ ಮೃತದೇಹ ನದಿಯಲ್ಲಿ ಸಿಗುತ್ತಲೇ ಮನೆಯವರು ಅದನ್ನು ದೃಢಪಡಿಸಿದ್ದಾರೆ. ಅಲ್ಲದೆ, ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲವೆಂದು ಹೇಳಿದ್ದಾರೆ. ಆತನ ಗೆಳೆಯರ ಮಾಹಿತಿ ಪ್ರಕಾರ, ಇತ್ತೀಚೆಗೆ ಸ್ವಲ್ಪ ಹಣಕಾಸಿನ ತೊಂದರೆಗೆ ಈಡಾಗಿದ್ದ. ಹಣ ಪಡೆದಿದ್ದವರು ಹಿಂತಿರುಗಿಸದೆ ಕೈಕೊಟ್ಟಿದ್ದರು. ಕೈಸಾಲ ಪಡೆದು ತೀರಿಸಲಾಗದೆ ಚಿಂತೆಗೆ ಒಳಗಾಗಿದ್ದ. ಇತ್ತೀಚೆಗೆ ಕಂಪನಿಯಲ್ಲಿದ್ದ ಉದ್ಯೋಗವನ್ನೂ ಕಳಕೊಂಡಿದ್ದ. ಇದರ ಚಿಂತೆಯಿಂದ ಮನೆಯಲ್ಲಿ ಖಿನ್ನನಾಗಿರುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ.
ಹೆತ್ತವರ ನಾಲ್ಕು ಗಂಡು ಮಕ್ಕಳಲ್ಲಿ ಮೂರನೇಯನಾಗಿರುವ ಚೇತನ್ ಕುಮಾರ್, ಸಾವಿನ ಬಗ್ಗೆ ಜೊತೆಗಿದ್ದ ಯುವಕರಲ್ಲೇ ಅನುಮಾನ ಮೂಡಿಸಿತ್ತು. ಅಂಥಹದ್ದೇನೂ ಆಪತ್ತು, ತೊಂದರೆ ಇಲ್ಲದ ಯುವಕ ಯಾಕಾಗಿ ಸಾವು ಕಂಡ ಅನ್ನುವ ಪ್ರಶ್ನೆ ಮಾಡುತ್ತಿದ್ದರು. ಹಿಂದು ಸಂಘಟನೆ, ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾತ ಹಠಾತ್ತಾಗಿ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ಕಾವೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಲವ್ ಅಫೇರ್ ಇತ್ತೇ, ಕೈಸಾಲ ಇತ್ತೇ ಅಥವಾ ಬೇರೆ ಯಾವುದಾದ್ರೂ ಚಟಕ್ಕೆ ಅಂಟಿಕೊಂಡಿದ್ದನೇ ಅನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.
A youth from Kavoor, who went missing two days ago, was found dead on Monday, July 4. The deceased is identified as Chethan Kumar (27), a resident of Kavoor. Chethan was active in betting and had lost too much of money which has lead to for suicide. He went missing two days ago and a complaint was filed in Kavoor police station by the family members.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 01:46 pm
HK News Staffer
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
ಹೊರ್ಮುಜ್ ಜಲಸಂಧಿಯನ್ನು ನಾವೇ ತಡೆಯುತ್ತೇವೆ, ಅಣ್ವಸ್...
12-04-26 10:59 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:52 am
HK News Staffer
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm