ಬ್ರೇಕಿಂಗ್ ನ್ಯೂಸ್
30-06-22 04:49 pm HK News Desk ಕರಾವಳಿ
ಉಳ್ಳಾಲ, ಜೂ.30: ಉದ್ಯಮಿಯೋರ್ವರು ಸೇರಿ ಮನೆ ಮಂದಿಯೆಲ್ಲ ಕೇರಳದ ಚೋಟಾನಿಕೆರೆ ಭಗವತೀ ಕ್ಷೇತ್ರಕ್ಕೆ ತೆರಳಿದ್ದ ವೇಳೆ ಮನೆಗೆ ಕಳ್ಳರು ಕನ್ನ ಹಾಕಿ ಭಾರೀ ಪ್ರಮಾಣದ ನಗ, ನಗದನ್ನು ಕದ್ದೊಯ್ದ ಘಟನೆ ಉಳ್ಳಾಲ ಬೈಲಿನ ಬಂಗೇರ ಲೇನ್ ಎಂಬಲ್ಲಿ ನಡೆದಿದೆ.
ಉಳ್ಳಾಲಬೈಲು ಬಂಗೇರ ಲೇನ್ ನಿವಾಸಿ ಉದ್ಯಮಿ ಶಿವ ಕೆ. ಎಂಬವರ ಮನೆಗೆ ಕಳ್ಳರು ಕನ್ನ ಹಾಕಿರುವ ಪ್ರಕರಣ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲಿನ ಚಿಲಕ ಒಡೆದು ಒಳ ನುಗ್ಗಿದ ಕಳ್ಳರು ಮೂರು ಕೋಣೆಗಳ ಕಪಾಟು, ಹಾಸಿಗೆಗಳನ್ನ ತಡಕಾಡಿದ್ದು ಸುಮಾರು 13 ಲಕ್ಷ ಮೌಲ್ಯದ 210 ಗ್ರಾಂ ಚಿನ್ನ ಮತ್ತು 37,000 ರೂಪಾಯಿ ನಗದನ್ನ ಎಗರಿಸಿದ್ದಾರೆ.
ಶಿವ ಅವರು ಕುಟುಂಬ ಸಮೇತರಾಗಿ ಮಂಗಳವಾರ ಸಂಜೆ ಕೇರಳದ ಚೋಟನಿಕೆರೆ ಭಗವತೀ ಕ್ಷೇತ್ರಕ್ಕೆ ಹರಕೆ ತೀರಿಸಲೆಂದು ತೆರಳಿದ್ದರು. ಇಂದು ಬೆಳಗ್ಗೆ ಕುಟುಂಬ ವಾಪಸ್ಸಾಗಿ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಶಿವ ಅವರ ಕುಟುಂಬವನ್ನ ಹತ್ತಿರದಿಂದಲೇ ಬಲ್ಲವರು ಕಳ್ಳತನ ನಡೆಸಿರುವುದಾಗಿ ಶಂಕಿಸಲಾಗಿದೆ. ಶಿವ ಅವರ ಜರ್ಮನ್ ಶೇಫರ್ಡ್ ಸಾಕು ನಾಯಿ ಕಳೆದ ಕೆಲ ದಿನಗಳ ಹಿಂದಷ್ಟೆ ಕಾಯಿಲೆಯಿಂದ ಸತ್ತು ಹೋಗಿತ್ತು. ನಾಯಿ ಇರುವಿಕೆಯ ಬಗ್ಗೆ ತಿಳಿದಿದ್ದ ಕಳ್ಳರು ಅದನ್ನ ಯಾಮಾರಿಸಲು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಚಪಾತಿಯನ್ನು ತಂದಿದ್ದು ನಾಯಿ ಕಾಣಸಿಗದೆ ಅದನ್ನ ಕಂಪೌಡ್ ಹೊರಗಡೆ ಎಸೆದಿದ್ದಾರೆ. ಎಸಿಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಶ್ವಾನ ದಳ, ಬೆರಳಚ್ಟು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಜವಾಯ್ತು ಮನೆ ಮಗನ ಕನಸು !
ಶಿವ ಅವರ ಕಿರಿಯ ಮಗ ಅಶ್ವಿನ್ ಅವರಿಗೆ ನಿನ್ನೆ ಕೇರಳದಿಂದ ಹಿಂದಿರುಗುತ್ತಿದ್ದ ವೇಳೆ ಮನೆಗೆ ಕಳ್ಳರು ಕನ್ನ ಹಾಕುವ ಕನಸು ಬಿದ್ದಿತ್ತಂತೆ. ಕಾಕತಾಳೀಯವೋ ಎಂಬಂತೆ ಇಂದು ಮನೆ ತಲುಪುವಷ್ಟರಲ್ಲಿ ಆತನ ಕನಸು ನಿಜವಾಗಿದೆ.
ಕಳ್ಳತನ ನಡೆದ ಪಕ್ಕದ ಮನೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹೊರ ಜಿಲ್ಲೆಯ ಕಾರ್ಮಿಕರು ವಾಸವಿದ್ದು ಮನೆ ಮಾಲಕರು ತಾರಸಿಯಲ್ಲಿ ಇವರನ್ನ ಅಕ್ರಮವಾಗಿ ನೆಲೆಸಲು ಬಿಟ್ಟಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
Mangalore burglars enter the house of a businessman in Ullal, huge cash and gold robbed. The family had left home and had been to a temple in Kerala. Police assume that someone close to the family who knows the details of the family has committed theft. Ullal police are now in search of the accused.
21-06-25 02:48 pm
Bengaluru Staff
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
20-06-25 10:19 pm
HK News Desk
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
21-06-25 03:56 pm
Giridhar Shetty, Mangaluru
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
Mangalore Forest Guard, Someshwara Beach, U T...
20-06-25 09:54 pm
21-06-25 12:21 pm
Mangaluru Correspondent
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm