ಬ್ರೇಕಿಂಗ್ ನ್ಯೂಸ್
21-06-22 05:11 pm Mangalore Correspondent ಕರಾವಳಿ
ಬಂಟ್ವಾಳ, ಜೂನ್ 21: ಮುಸ್ಲಿಂ ಹುಡುಗನೊಬ್ಬ ತನ್ನ ಹೆಸರನ್ನು ವಿಜಯ್ ಎಂದು ಬದಲಿಸಿಕೊಂಡು ಹಿಂದುವೆಂದು ನಂಬಿಸಿ, ಹಿಂದು ಹುಡುಗಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಬಾಡಿಗೆ ಮನೆಯಲ್ಲಿ ಇಟ್ಟುಕೊಂಡಿದ್ದನ್ನು ತಿಳಿದು ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹುಡುಗ ಮತ್ತು ಹುಡುಗಿಯನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ, ಅವರಿಬ್ಬರು ಮದುವೆಯಾಗದೆ ಜೊತೆಗಿರುವುದು ತಿಳಿದುಬಂದಿದೆ.
ಹುಡುಗಿ ತೀರ್ಥಹಳ್ಳಿ ಮೂಲದವಳಾಗಿದ್ದು ಈ ಹಿಂದೆ ಉಡುಪಿಯ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದಳು. ಅದೇ ಪೆಟ್ರೋಲ್ ಪಂಪ್ ನಲ್ಲಿ ಮಂಗಳೂರಿನ ಆಕಾಶಭವನ ನಿವಾಸಿ ಹುಸೇನ್ ಸಾಹೇಬ ಎಂಬಾತನೂ ಕೆಲಸಕ್ಕಿದ್ದು ಅಲ್ಲಿ ಹುಡುಗ ಮತ್ತು ಹುಡುಗಿ ನಡುವೆ ಲವ್ ಆಗಿತ್ತು ಎನ್ನಲಾಗಿದೆ. ತನ್ನ ಹೆಸರನ್ನು ವಿಜಯ್ ಎಂದು ಹೇಳಿಕೊಂಡು ಹಿಂದುವೆಂದು ಬಿಂಬಿಸಿಕೊಂಡಿದ್ದ ಹುಸೇನ್, ವಾರದ ಹಿಂದೆ ಆಕೆಯನ್ನು ಜೊತೆಗೆ ಕರೆತಂದು ವಿಟ್ಲ ಕಸಬಾ ಗ್ರಾಮದ ಪಲಿಕೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆಬಳಿಕ ಹುಸೇನ್, ವಿಟ್ಲ ಪೆಟ್ರೋಲ್ ಪಂಪ್ ಬಳಿ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.
ವಾರ ಕಳೆಯುತ್ತಲೇ ಹುಡುಗ- ಹುಡುಗಿಯ ಬಗ್ಗೆ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೂನ್ 20ರಂದು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ವೇಳೆ, ಇವರು ವಯಸ್ಕರಾಗಿದ್ದರೂ ಮದುವೆ ಆಗಿರುವುದಕ್ಕೆ ಯಾವುದೇ ದಾಖಲೆ ಇರಲಿಲ್ಲ. ಪೊಲೀಸರು ಹುಡುಗ- ಹುಡುಗಿಗೆ ಬುದ್ಧಿ ಮಾತು ಹೇಳಿ, ಹುಡುಗಿ ಹೆತ್ತವರಿಗೆ ಮಾಹಿತಿ ನೀಡಿ ಆಕೆಯನ್ನು ಮಂಗಳೂರಿನ ಕೌನ್ಸಿಲಿಂಗ್ ಸೆಂಟರಿಗೆ ಹಾಕಿದ್ದಾರೆ. ಹುಡುಗನನ್ನು ಪೊಲೀಸರು ವಿಚಾರಿಸಿ ಬಿಟ್ಟು ಕಳುಹಿಸಿದ್ದಾರೆ.
Mangalore Muslim boy changes name to Vijay to live in a rented house with Hindu girl in Bantwal without marriage. Hussain is said to be working as a cleaner in the truck. A week ago he brought the girl to the house and neighbours who were suspicious about their behavior complained it to Vitla police. Police took them to the couselling center and later they were left to go to their homes. No case has been registered.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm