ಬ್ರೇಕಿಂಗ್ ನ್ಯೂಸ್
21-06-22 05:11 pm Mangalore Correspondent ಕರಾವಳಿ
ಬಂಟ್ವಾಳ, ಜೂನ್ 21: ಮುಸ್ಲಿಂ ಹುಡುಗನೊಬ್ಬ ತನ್ನ ಹೆಸರನ್ನು ವಿಜಯ್ ಎಂದು ಬದಲಿಸಿಕೊಂಡು ಹಿಂದುವೆಂದು ನಂಬಿಸಿ, ಹಿಂದು ಹುಡುಗಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಬಾಡಿಗೆ ಮನೆಯಲ್ಲಿ ಇಟ್ಟುಕೊಂಡಿದ್ದನ್ನು ತಿಳಿದು ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹುಡುಗ ಮತ್ತು ಹುಡುಗಿಯನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ, ಅವರಿಬ್ಬರು ಮದುವೆಯಾಗದೆ ಜೊತೆಗಿರುವುದು ತಿಳಿದುಬಂದಿದೆ.
ಹುಡುಗಿ ತೀರ್ಥಹಳ್ಳಿ ಮೂಲದವಳಾಗಿದ್ದು ಈ ಹಿಂದೆ ಉಡುಪಿಯ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದಳು. ಅದೇ ಪೆಟ್ರೋಲ್ ಪಂಪ್ ನಲ್ಲಿ ಮಂಗಳೂರಿನ ಆಕಾಶಭವನ ನಿವಾಸಿ ಹುಸೇನ್ ಸಾಹೇಬ ಎಂಬಾತನೂ ಕೆಲಸಕ್ಕಿದ್ದು ಅಲ್ಲಿ ಹುಡುಗ ಮತ್ತು ಹುಡುಗಿ ನಡುವೆ ಲವ್ ಆಗಿತ್ತು ಎನ್ನಲಾಗಿದೆ. ತನ್ನ ಹೆಸರನ್ನು ವಿಜಯ್ ಎಂದು ಹೇಳಿಕೊಂಡು ಹಿಂದುವೆಂದು ಬಿಂಬಿಸಿಕೊಂಡಿದ್ದ ಹುಸೇನ್, ವಾರದ ಹಿಂದೆ ಆಕೆಯನ್ನು ಜೊತೆಗೆ ಕರೆತಂದು ವಿಟ್ಲ ಕಸಬಾ ಗ್ರಾಮದ ಪಲಿಕೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆಬಳಿಕ ಹುಸೇನ್, ವಿಟ್ಲ ಪೆಟ್ರೋಲ್ ಪಂಪ್ ಬಳಿ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.
ವಾರ ಕಳೆಯುತ್ತಲೇ ಹುಡುಗ- ಹುಡುಗಿಯ ಬಗ್ಗೆ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೂನ್ 20ರಂದು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ವೇಳೆ, ಇವರು ವಯಸ್ಕರಾಗಿದ್ದರೂ ಮದುವೆ ಆಗಿರುವುದಕ್ಕೆ ಯಾವುದೇ ದಾಖಲೆ ಇರಲಿಲ್ಲ. ಪೊಲೀಸರು ಹುಡುಗ- ಹುಡುಗಿಗೆ ಬುದ್ಧಿ ಮಾತು ಹೇಳಿ, ಹುಡುಗಿ ಹೆತ್ತವರಿಗೆ ಮಾಹಿತಿ ನೀಡಿ ಆಕೆಯನ್ನು ಮಂಗಳೂರಿನ ಕೌನ್ಸಿಲಿಂಗ್ ಸೆಂಟರಿಗೆ ಹಾಕಿದ್ದಾರೆ. ಹುಡುಗನನ್ನು ಪೊಲೀಸರು ವಿಚಾರಿಸಿ ಬಿಟ್ಟು ಕಳುಹಿಸಿದ್ದಾರೆ.
Mangalore Muslim boy changes name to Vijay to live in a rented house with Hindu girl in Bantwal without marriage. Hussain is said to be working as a cleaner in the truck. A week ago he brought the girl to the house and neighbours who were suspicious about their behavior complained it to Vitla police. Police took them to the couselling center and later they were left to go to their homes. No case has been registered.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm