ಬ್ರೇಕಿಂಗ್ ನ್ಯೂಸ್
06-01-21 03:37 pm Headline Karnataka News Network ಸಿನಿಮಾ
ಬೆಂಗಳೂರು, ಜ.6: ಕಪಟ ಸ್ವಾಮಿ ಯುವರಾಜ್ ಜೊತೆಗಿನ ಸಂಪರ್ಕದ ಬಗ್ಗೆ ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ತಂದೆಯವರ ಜೊತೆಗೆ ನಿಕಟ ಸಂಪರ್ಕ ಇದ್ದುದು ನಿಜ. 17 ವರ್ಷಗಳಿಂದ ತಂದೆಯವರ ಜೊತೆ ತುಂಬ ಆಪ್ತರಾಗಿದ್ದರು. ತಂದೆ ನಿಧನರಾದ ಬಳಿಕವೂ ಜ್ಯೋತಿಷ್ಯ ಹೇಳುವ ವಿಚಾರದಲ್ಲಿ ಸಂಪರ್ಕ ಇತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ಡಾಲರ್ಸ್ ಕಾಲನಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ರಾಧಿಕಾ, ಯುವರಾಜ್ ಒಂದು ಐತಿಹಾಸಿಕ ಸಿನಿಮಾ ಮಾಡಬೇಕೆಂದು ಹೇಳ್ತಾ ಇದ್ದರು. ತಂದೆ ನಿಧನರಾದ ಬಳಿಕ ಈ ಸಿನಿಮಾದ ಮಾತುಕತೆ ನಡೆದಿತ್ತು. ಅದಕ್ಕಾಗಿ 15 ಲಕ್ಷ ರೂ. ನನ್ನ ಖಾತೆಗೆ ಹಾಕಿದ್ದಾರೆ. ಆನಂತರ ಬೇರೊಬ್ಬ ನಿರ್ಮಾಪಕರ ಮೂಲಕ 60 ಲಕ್ಷ ಹಣ ಹಾಕಿದ್ದಾರೆ. ಅದು ಬಿಟ್ಟರೆ ಒಂದೂವರೆ ಕೋಟಿ ಹಣ ಬಂದಿದೆ ಅನ್ನುವುದೆಲ್ಲ ಸುಳ್ಳು ಎಂದು ಹೇಳಿದರು.

2019ರಲ್ಲಿ ತಂದೆ ನಿಧನರಾಗಿದ್ದರು. ತಂದೆಗೆ ಕಂಟಕ ಇರುವುದು, ಸಾಯುತ್ತಾರೆಂದು ಒಂದು ವರ್ಷದ ಮೊದಲೇ ಸ್ವಾಮಿ ಹೇಳಿದ್ದರು. ಏನೋ ಪೂಜೆ ಮಾಡುವಂತೆ ಸೂಚಿಸಿದ್ದರು. ಆದರೆ, ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು ಹೇಳಿದಂತೇ ಆಗಿದ್ದರಿಂದ ನಮಗೆ ತುಂಬ ನಂಬಿಕೆ ಇತ್ತು. ನಮ್ಮ ತಾಯಿ ತುಂಬ ಗೌರವಿಸುತ್ತಿದ್ದರು. ನನಗೂ ಒಳ್ಳೇದಾಗುತ್ತದೆ, ಹೆಣ್ಣು ಮಗುವಾಗುತ್ತದೆ ಎಂದಿದ್ದರು. ಅವರು ಹೇಳಿದ್ದು ನಿಜವಾಗಿದೆ. ಜ್ಯೋತಿಷ್ಯ ವಿಚಾರದಲ್ಲಿ ಸಂಪರ್ಕ ಇತ್ತೇ ವಿನಾ ಬೇರಾವುದೇ ಸಂಬಂಧ ಇರಲಿಲ್ಲ ಎಂದು ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

ನಾಟ್ಯರಾಣಿ ಶಾಂತಲಾ ಹೆಸರಲ್ಲಿ ಸಿನಿಮಾ
ಅಲ್ಲದೆ, ಸ್ವಾಮಿಯವರು ತಮ್ಮ ಪತ್ನಿ ಹೆಸರಲ್ಲಿ ಚಿತ್ರ ನಿರ್ಮಾಣದ ಬ್ಯಾನರ್ ಮಾಡಿಕೊಂಡಿದ್ದರು. ನನ್ನ ಮಗಳ ಹೆಸರಲ್ಲೂ ಪ್ರೊಡಕ್ಷನ್ ಹೌಸ್ ಬ್ಯಾನರ್ ಇದ್ದುದರಿಂದ ಜೊತೆಯಾಗಿ ಮಾಡೋಣ ಎಂದಿದ್ದರು. ನಾಟ್ಯ ರಾಣಿ ಶಾಂತಲಾ ಹೆಸರಲ್ಲಿ ಚಿತ್ರ ಮಾಡಬೇಕೆಂದು ಇದ್ದರು. ಈ ಬಗ್ಗೆ ನನಗೂ ಆಸಕ್ತಿ ಇದ್ದುದರಿಂದ ಒಪ್ಪಿಕೊಂಡಿದ್ದೆ. ಕಳೆದ 2020ರ ಫೆಬ್ರವರಿ ಮಾರ್ಚ್ ವೇಳೆಗೆ ಮಾತುಕತೆ ನಡೆದಿದ್ದು, ನನ್ನ ಖಾತೆಗೆ 75 ಲಕ್ಷ ಹಣ ಹಾಕಿದ್ದು ಸತ್ಯ. ನಂಬಿಕೆ ಇದ್ದುದರಿಂದ ಈ ಬಗ್ಗೆ ಯಾವುದೇ ಅಗ್ರಿಮೆಂಟ್ ಮಾಡಿರಲಿಲ್ಲ. ಈ ಬಗ್ಗೆ ಎಲ್ಲ ದಾಖಲೆ ನೀಡಲು ಸಿದ್ಧಳಿದ್ದೇನೆ. ಸಿಸಿಬಿಯವರು ನನ್ನನ್ನು ವಿಚಾರಣೆಗೆ ಕರೆದಿಲ್ಲ. ಕರೆದರೆ ಈ ಬಗ್ಗೆ ದಾಖಲೆ ನೀಡುವುದಕ್ಕೆ ಸಿದ್ಧ ಎಂದು ಹೇಳಿದರು.

ಹಾಗೆಂದು ಸ್ವಾಮಿಯವರ ಖಾಸಗಿ ವಿಚಾರಗಳ ಬಗ್ಗೆ ನನಗೇನು ತಿಳಿದಿಲ್ಲ. ತಿಂಗಳ ಹಿಂದೆ ಅರೆಸ್ಟ್ ಆದಾಗ ನಿಜಕ್ಕೂ ಶಾಕ್ ಆಗಿತ್ತು. ಹೀಗೆಲ್ಲಾ ಮಾಡಿದ್ದಾರೆ ಎನ್ನುವುದು ಗೊತ್ತಿರಲಿಲ್ಲ ಎಂದು ಹೇಳಿದ ರಾಧಿಕಾ, ಕಳೆದ ಡಿಸೆಂಬರ್ ತಿಂಗಳಲ್ಲಿ ನನಗೆ ಟೈಮ್ ಸರಿ ಇಲ್ಲ ಎಂದಿದ್ದರು. ಆನಂತರ ಫೆಬ್ರವರಿ ಬಳಿಕ ಶುಕ್ರದೆಸೆ ಬರುತ್ತದೆ ಎಂದಿದ್ದರು. ಕುಟುಂಬ ಜ್ಯೋತಿಷ್ಯರಾಗಿದ್ದರಿಂದ ಎಲ್ಲವನ್ನೂ ನಂಬುತ್ತಿದ್ದೆವು ಎಂದಿದ್ದಾರೆ. ಇನ್ನು ನನ್ನ ಸೋದರನಿಗೆ ಯಾವುದೇ ಹಣದ ವ್ಯವಹಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆರೆಸ್ಸೆಸ್ ಮುಖಂಡನ ಸೋಗಿನಲ್ಲಿ ಕೋಟಿಗಟ್ಟಲೆ ವಂಚಿಸಿದ ಯುವರಾಜನಿಗೆ ಖ್ಯಾತ ನಟಿ ಜೊತೆ ಲಿಂಕ್ ?!
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm