ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ್ತಿದ್ದಾರೆ, ಕಾಂಗ್ರೆಸ್ ಮಹಿಳಾ ವಿರೋಧಿಯೆಂದು ಬಿಂಬಿಸಲು ಮೋದಿ ಇನ್ನೆಷ್ಟು ಜನ್ಮ ಎತ್ತಿದರೂ ಸಾಧ್ಯ ಇಲ್ಲ !

20-04-26 09:40 pm       HK News Staffer   ಕರಾವಳಿ

ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸಿ ಲಾಭ ಮಾಡಬಹುದೆಂದು ಮಹಿಳಾ ಮೀಸಲು ಕಾಯ್ದೆಯನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿಯಲ್ಲ. ಮಹಿಳೆಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಡಿದ್ದೇ ಕಾಂಗ್ರೆಸ್. ಮಹಿಳಾ ವಿರೋಧಿ ಎಂದು ಬಿಂಬಿಸಲು ಮೋದಿ ಇನ್ನೆಷ್ಟು ಜ‌ನ್ಮ ಎತ್ತಿ ಬಂದರೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರು, ಎಪ್ರಿಲ್ 20: ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸಿ ಲಾಭ ಮಾಡಬಹುದೆಂದು ಮಹಿಳಾ ಮೀಸಲು ಕಾಯ್ದೆಯನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿಯಲ್ಲ. ಮಹಿಳೆಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಡಿದ್ದೇ ಕಾಂಗ್ರೆಸ್. ಮಹಿಳಾ ವಿರೋಧಿ ಎಂದು ಬಿಂಬಿಸಲು ಮೋದಿ ಇನ್ನೆಷ್ಟು ಜ‌ನ್ಮ ಎತ್ತಿ ಬಂದರೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಎನ್ ಡಿಎ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಇಲ್ಲ, ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಮಂಡಿಸಿದರೂ ಬಿದ್ದು ಹೋಗುತ್ತದೆ ಎಂದು ಬಿಜೆಪಿಗೆ ಮೊದಲೇ ಗೊತ್ತಿತ್ತು. ಆದರೆ ಚುನಾವಣೆ ಸಂದರ್ಭದಲ್ಲಿ ಲಾಭ ಮಾಡುವುದಕ್ಕಾಗಿ ಇಂತಹ ಗಿಮಿಕ್ ಮಾಡಿದ್ದಾರೆ. ಐದು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ವಿಶೇಷ ಸಂಸತ್ ಅಧಿವೇಶನ ಕರೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. 

ದೇಶಕ್ಕೆ ಮಹಿಳಾ ಪ್ರಧಾನಿ, ಪ್ರಥಮ ಮುಖ್ಯಮಂತ್ರಿ ಕೊಟ್ಡಿದ್ದು ಕಾಂಗ್ರೆಸ್. ಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷೆ ಮಾಡಿದ್ದು ಕಾಂಗ್ರೆಸ್. ಹೆಣ್ಮಕ್ಕಳ ಸಬಲೀಕರಣಕ್ಕಾಗಿ ಹಲವಾರು ಯೋಜನೆ ತಂದಿದ್ದು ಕಾಂಗ್ರೆಸ್. 20 ಅಂಶಗಳ ಆರ್ಥಿಕ ನೀತಿಯಲ್ಲಿ ಹೆಣ್ಮಕ್ಕಳಿಗೆ ವಿಶೇಷ ಅವಕಾಶ ನೀಡಿದ್ದು ಇಂದಿರಾ ಗಾಂಧಿ, ಸ್ತ್ರೀಶಕ್ತಿ ಕಾರ್ಯಕ್ರಮ, ಸ್ವಸಹಾಯ ಸಂಘಗಳನ್ನು ಸ್ಥಾಪಿಸಲು ಅವಕಾಶ ಮಾಡಿದ್ದು ಕಾಂಗ್ರೆಸ್. ಈಗ ಕಾಂಗ್ರೆಸನ್ನು ಮಹಿಳಾ ವಿರೋಧಿ ಎಂದು ಬಿಂಬಿಸಲು ಮೋದಿ ಹೊರಟಿದ್ದಾರೆ. ಅದು ಇನ್ನೆಷ್ಟು ಜನ್ಮ ಪಡೆದರೂ ಸಾಧ್ಯವಿಲ್ಲ. 

ಜನಗಣತಿ, ಕ್ಷೇತ್ರ ವಿಂಗಡಣೆ ಮತ್ತು ಮಹಿಳಾ ಮೀಸಲನ್ನು ಜೊತೆಗಿಟ್ಟು ಸಂಸತ್ತಿನಲ್ಲಿ ಮಂಡಿಸಿ ಜನರನ್ನು ಮೋಸ ಮಾಡಲು ನೋಡಿದ್ದಾರೆ, ಎಲ್ಲ ಕಾಲದಲ್ಲೂ ಮೋಸ ಸಾಧ್ಯವಿಲ್ಲ. ರಾಹುಲ್ ಗಾಂಧಿ ಈ ಮಾತನ್ನು ಬಹಳ ವರ್ಷಗಳಿಂದ ಹೇಳುತ್ತ ಬಂದಿದ್ದಾರೆ. ಅವರ ಮಾತುಗಳೆಲ್ಲ ನಿಜವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಹತ್ತು ವರ್ಷಗಳ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವುದಾಗಿ ಅಮಿತ್ ಷಾ ಹೇಳಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಹತ್ತನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಅಲ್ಲಿ ಯಾಕೆ ಇಂತಹ ತನಿಖೆ ಮಾಡಲ್ಲ ಎಂದು ಬಿಜೆಪಿ ಸರ್ಕಾರದ ಇಬ್ಬಗೆ ನೀತಿಯನ್ನು ಪ್ರಶ್ನಿಸಿದರು. ವಿದೇಶಿಗರ ನುಸುಳುವಿಕೆ ಅಸ್ಸಾಮಿನಲ್ಲಾದರೆ ಬೇರೆ, ಪಶ್ಚಿಮ ಬಂಗಾಳದಲ್ಲಾದರೆ ಮಾತ್ತ ಅಕ್ರಮ. ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಹೇಳುತ್ತಿದ್ದರು. ಈಗ ಅವರದ್ದೇ ಸರ್ಕಾರ ಇರುವಾಗ ಯಾಕೆ ನುಸುಳುಕೋರರನ್ನು ನಿಲ್ಲಿಸಲು, ದೇಶಕ್ಕೆ ಬಂದವರನ್ನು ಹೊರದಬ್ಬಲು ಆಗುತ್ತಿಲ್ಲ ಅಂತ ಪ್ರಶ್ನಿಸಿದರು. 

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಪ್ಪಿ, ಹರಿನಾಥ್, ಶುಭೋದಯ ಆಳ್ವ ಮತ್ತಿತರರಿದ್ದರು.