ಬ್ರೇಕಿಂಗ್ ನ್ಯೂಸ್
26-04-22 10:05 pm HK News Desk ದೇಶ - ವಿದೇಶ
ಕರಾಚಿ, ಎ.26: ಪಾಕಿಸ್ಥಾನದ ಕರಾಚಿ ಯೂನಿವರ್ಸಿಟಿ ಕ್ಯಾಂಪಸ್ ಸಮೀಪದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಮೂವರು ಚೀನಾ ಪ್ರಜೆಗಳು ಸೇರಿ ನಾಲ್ವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮಹಿಳೆಯೊಬ್ಬಳು ತನ್ನನ್ನು ಆತ್ಮಹತ್ಯಾ ಬಾಂಬರ್ ಆಗಿ ಸ್ಫೋಟಿಸಿಕೊಂಡಿದ್ದಾಳೆ ಎನ್ನಲಾಗುತ್ತಿದ್ದು ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಕರಾಚಿ ಯೂನಿವರ್ಸಿಟಿ ಸಮೀಪದ ಕನ್ಫ್ಯೂಶಿಯಸ್ ಇನ್ಸಿಟ್ಯೂಟ್ ಕಟ್ಟಡದ ಬಳಿ ವ್ಯಾನ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಪ್ರತ್ಯೇಕವಾದಿ ಸಂಘಟನೆ ಕೃತ್ಯ ನಡೆಸಿರುವುದಾಗಿ ಪಾಕಿಸ್ಥಾನದ ಡಾನ್ ನ್ಯೂಸ್ ಟಿವಿ ವರದಿ ಮಾಡಿದೆ. ವ್ಯಾನ್ ನಲ್ಲಿ ಚೀನಾ ಮೂಲದ ಮೂವರು ಉಪನ್ಯಾಸಕರನ್ನು ಕರಾಚಿ ಯೂನಿವರ್ಸಿಟಿಯಿಂದ ಕರೆತರಲಾಗುತ್ತಿತ್ತು. ಚೀನಾದ ಉಪನ್ಯಾಸಕರು ಯೂನಿವರ್ಸಿಟಿಯಲ್ಲಿ ಚೀನೀ ಭಾಷೆಯನ್ನು ಬೋಧಿಸುತ್ತಿದ್ದರು. ಕೆಲಸ ಮುಗಿಸಿ ವ್ಯಾನಿನಲ್ಲಿ ಮರಳುತ್ತಿದ್ದಾಗ ಬಾಂಬ್ ಸ್ಫೋಟ ನಡೆದಿದೆ. ವ್ಯಾನ್ ನಲ್ಲಿ ಏಳರಿಂದ ಎಂಟು ಮಂದಿ ಇದ್ದರೆಂದು ಸ್ಥಳೀಯ ಪೊಲೀಸರು ತಿಳಿಸಿದ್ದು, ಮೃತರ ಸಂಖ್ಯೆ ಖಚಿತಗೊಂಡಿಲ್ಲ. ಜಂಗ್ ಎನ್ನುವ ಉರ್ದು ಪತ್ರಿಕೆಯೊಂದು ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟಿಸಲಾಗಿದೆ ಎಂದು ಹೇಳಿದೆ.
ಕಳೆದ ಜುಲೈ ತಿಂಗಳಲ್ಲಿ ಚೀನೀಯರಿದ್ದ ಬಸ್ಸಿನಲ್ಲಿ ಬಾಂಬ್ ಸ್ಫೋಟಗೊಂಡು 9 ಮಂದಿ ಚೀನೀಯರು ಮೃತಪಟ್ಟಿದ್ದರು. ಬಸ್ಸಿನಲ್ಲಿ ಚೀನಾದ ಇಂಜಿನಿಯರ್ ಗಳನ್ನು ಖೈಬರ್ ಪಂಕ್ತುಕ್ವಾ ಪ್ರಾಂತದ ಡ್ಯಾಮ್ ಪ್ರದೇಶಕ್ಕೆ ಒಯ್ಯುತ್ತಿದ್ದಾಗ ಬಾಂಬ್ ದಾಳಿ ಆಗಿತ್ತು. ಘಟನೆಯಲ್ಲಿ 9 ಚೀನೀಯರು ಸೇರಿ 13 ಜನ ಸತ್ತಿದ್ದರು. ಆನಂತರ, ಕೆಲವು ದಿನಗಳ ಬಳಿಕ ಮೋಟರ್ ಸೈಕಲ್ ನಲ್ಲಿ ತೆರಳುತ್ತಿದ್ದ ಇಬ್ಬರು ಚೀನೀಯರ ಮೇಲೆ ಬೆಂಕಿ ಹಾಕಿ, ಸುಡಲಾಗಿತ್ತು. ಇಬ್ಬರು ಕೂಡ ಜೀವಂತ ಸಾವು ಕಂಡಿದ್ದರು. ಪಾಕಿಸ್ಥಾನದಲ್ಲಿ ಚೀನೀಯರು ರಸ್ತೆ ಮಾರ್ಗ, ಬಂದರು ನಿರ್ಮಿಸುತ್ತಿರುವುದರಿಂದ ಅಲ್ಲಿನ ಸ್ಥಳೀಯ ಪ್ರತ್ಯೇಕತವಾದಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಚೀನೀಯರನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಾರೆ.
Four people, including three Chinese nationals, were killed and several others injured in an explosion in a van near the Confucius Institute at Pakistan's Karachi University on Tuesday, reports said. The attack was carried out by a woman suicide bomber, according to news agency AFP.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm