ಬ್ರೇಕಿಂಗ್ ನ್ಯೂಸ್
05-04-22 12:12 pm HK Desk news ದೇಶ - ವಿದೇಶ
ಕೋಜಿಕ್ಕೋಡ್, ಎ.5 : ಹೊಳೆಯ ನಡುವೆ ಬಂಡೆಯಲ್ಲಿ ನಿಂತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದಾಗ ಮದುಮಗ ಬಂಡೆಯಿಂದ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೋಜಿಕ್ಕೋಡ್ ಜಿಲ್ಲೆಯ ಕುತ್ಯಾಡಿ ನದಿಯಲ್ಲಿ ನಡೆದಿದೆ.
ಮೂರು ವಾರಗಳ ಹಿಂದಷ್ಟೇ ವಿವಾಹಿತರಾಗಿದ್ದ ರೆಜಿನ್ ಲಾಲ್ ಮತ್ತು ಕಾನಿಕಾ ದಂಪತಿ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿದ್ದರು. ಹೊಳೆಯ ಮಧ್ಯದ ಬಂಡೆ ಮೇಲೆ ನಿಂತು ಪೋಸು ಕೊಡುತ್ತಿದ್ದ ವೇಳೆ ವರ ರೆಜಿನ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ವೇಳೆ ವಧು ಕೂಡ ನೀರಿಗೆ ಬಿದ್ದಿದ್ದು ಸ್ಥಳೀಯರು ಸೇರಿ ಇಬ್ಬರನ್ನೂ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದು ವಧು ಗಂಭೀರ ಸ್ಥಿತಿಯಲ್ಲಿದ್ದಾಳೆ. ಮಾರ್ಚ್ 14 ರಂದು ಇವರ ವಿವಾಹ ನಡೆದಿತ್ತು.
ಪೆರುವಣ್ಣಮುಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರ ರೆಜಿನ್ ಕುಟ್ಟಿಯಾಡಿ ಪರಿಸರದ ನಿವಾಸಿಯಾಗಿದ್ದು ನದಿಯ ಅಪಾಯದ ಬಗ್ಗೆ ಅರಿವು ಹೊಂದಿದ್ದ. ನದಿಯಲ್ಲಿ ಆಗಿಂದಾಗ್ಗೆ ಅಲೆಗಳು ಬರುವುದು, ಬಂಡೆಗೆ ಅಪ್ಪಳಿಸುವುದರಿಂದ ಅಪಾಯ ಎಂದು ಬೋರ್ಡ್ ಹಾಕಲಾಗಿತ್ತು. ಕುಟ್ಟಿಯಾಡಿಯ ಜಾನಕಿಪುಝ ಹೊಳೆಯ ಮಧ್ಯೆ ದಂಪತಿ ಫೋಟೋ ಶೂಟ್ ಮಾಡುತ್ತಿದ್ದರು.
ಬಂಡೆಗಳ ಆಕರ್ಷಣೆಯ ನಡುವೆ ಆಳವಾದ ಹೊಂಡವಿದೆ. ಹಾಗಾಗಿ ಅಲ್ಲಿಗೆ ತೆರಳುವುದು ಅಪಾಯ ಎಂದು ಸೂಚನೆ ನೀಡಲಾಗಿತ್ತು. ಇಕೋ ಟೂರಿಸಂ ಹೆಸರಲ್ಲಿ ಫೋಟೋ ಶೂಟ್ ಮಾಡಲೆಂದು ಪ್ರವಾಸಿಗರು ಬರುತ್ತಿದ್ದರು. ಆದರೆ ಸ್ಥಳೀಯ ವ್ಯಕ್ತಿಯೇ ಆಗಿರುವ ರೆಜಿನ್, ಅದೇ ಹೊಳೆಯಲ್ಲಿ ನೀರಿಗೆ ಬಿದ್ದು ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ. ಇದೇ ಜಾಗದಲ್ಲಿ ಈ ಹಿಂದೆಯೂ ದುರಂತ ಸಂಭವಿಸಿದ್ದರಿಂದ ಫೋಟೋ ಶೂಟ್ ಮಾಡದಂತೆ ನಿಷೇಧ ಹಾಕಲಾಗಿತ್ತು.
A post-wedding shoot has turned tragic for a groom, who drowned in the Kuttiadipuzha in Kozhikode. The accident happened at Janakikadupuzha in Kuttiadi, Kozhikode. The dead has been identified as Rejil of Kadiyangad in Kuttiadi. Though his wife got stuck in the water currents, was able to save her. She has been admitted in the hospital in a serious condition.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
10-10-25 10:37 pm
HK News Desk
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm