ಬ್ರೇಕಿಂಗ್ ನ್ಯೂಸ್
10-01-22 11:11 pm HK Desk news ದೇಶ - ವಿದೇಶ
ಪಾಟ್ನಾ, ಜ.9 : ಕಳೆದ ಒಂದು ವರ್ಷದಲ್ಲಿ ಕೊರೊನಾ ವಿರುದ್ಧ ಲಸಿಕೆ ನೀಡಲಾಗುತ್ತಿದೆ. ಸರಕಾರ, ಒಬ್ಬರಿಗೆ ಎರಡು ಬಾರಿ ಉಚಿತ ಲಸಿಕೆ ನೀಡುತ್ತಿದೆ. ಆದರೆ, ಇದರ ದುರ್ಲಾಭವನ್ನು ಪಡೆದ ಮುದುಕನೊಬ್ಬ ಒಂದೇ ವರ್ಷದಲ್ಲಿ ಹನ್ನೊಂದು ಬಾರಿ ಲಸಿಕೆ ಪಡೆದು ಹುಬ್ಬೇರಿಸಿದ್ದಾನೆ.
ಬಿಹಾರದ ಮಾದೇಪುರ ಜಿಲ್ಲೆಯ ಬ್ರಹ್ಮದೇವ ಮಂಡಲ ಎಂಬ 84 ವರ್ಷದ ಮುದುಕ ಈ ವಿಚಿತ್ರ ಸಾಧನೆ ಮಾಡಿದವರು. ಮಾಧೇಪುರ ಜಿಲ್ಲೆಯ ಪುರಿಣಿಯ ನಿವಾಸಿ. ಇವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 11 ಬಾರಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಪ್ರತಿ ಬಾರಿ ಲಸಿಕೆ ಹಾಕಿದಾಗ ಆರೋಗ್ಯವಾಗಿದ್ದಾರೆ ಎಂದಿದ್ದರು. ತನ್ನ ಆರೋಗ್ಯ ಸರಿ ಇಲ್ಲದಿದ್ದಾಗ ನಕಲಿ ದಾಖಲೆಗಳ ತೋರಿಸಿ ಲಸಿಕೆ ಹಾಕಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ವಿನಯ ಕೃಷ್ಣ ಪ್ರಸಾದ್, ಪುರಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದ ವರ್ಷ ಫೆಬ್ರವರಿ 13 ರಂದು ಇವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿತ್ತು. ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 13ರಂದು ಎರಡನೇ ಡೋಸ್ ಲಸಿಕೆ ಹಾಕಲಾಗಿತ್ತು. ನಂತರ ಅವರು ಹೊಸ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಿದ್ದು ಮೇ 19 ರಂದು ಮೂರನೇ ಡೋಸ್ ಪಡೆದಿದ್ದರು. ಆನಂತರ ಜೂನ್ 16, ಜುಲೈ 24, ಆಗಸ್ಟ್ 31, ಸೆಪ್ಟೆಂಬರ್ 11 ಮತ್ತು ಅದೇ ತಿಂಗಳ 22 ಮತ್ತು 24 ರಂದು ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ.
ಜನವರಿ ತಿಂಗಳ ಮೊದಲ ವಾರ 12 ನೇ ಬಾರಿ ಕೋವಿಡ್ ಲಸಿಕೆ ಪಡೆಯಲು ಬಂದಾಗ ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದು ಪರಿಶೀಲನೆ ನಡೆಸಿದಾಗ ಮುದುಕನ ಅಪರಾವತಾರ ತಿಳಿದುಬಂದಿದೆ.
ಬ್ರಹ್ಮದೇವ್, ಅಂಚೆ ಇಲಾಖೆಯಲ್ಲಿ ಕೆಲಸದಲ್ಲಿದ್ದು ನಿವೃತ್ತನಾಗಿದ್ದು ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯದಿಂದಾಗಿ ಈ ರೀತಿ ಲಸಿಕೆ ಪಡೆಯುವಂತಾಗಿತ್ತು. ತನಗೆ ಆರೋಗ್ಯ ತೊಂದರೆ ಇದ್ದುದರಿಂದ ಪದೇ ಪದೇ ಲಸಿಕೆ ಪಡೆದಿದ್ದು ಸ್ವಸ್ಥನಾಗಿದ್ದೇನೆ ಎಂದು ತಿಳಿಸಿದ್ದಾರೆ.
84-year-old man, Brahamdev Mandal, a resident of the Puraini area of Madhepura district in Bihar who claims to have taken 11 doses of the coronavirus vaccine has been booked by Bihar Police.
09-10-25 12:57 pm
Bangalore Correspondent
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
09-10-25 05:33 pm
HK News Desk
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
09-10-25 08:22 pm
Mangalore Correspondent
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷ...
09-10-25 01:59 pm
ರಾಜಕೀಯ ಲಾಭಕ್ಕೆ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದ...
09-10-25 11:58 am
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
09-10-25 05:30 pm
Mangalore Correspondent
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm