ಬ್ರೇಕಿಂಗ್ ನ್ಯೂಸ್
14-12-21 12:11 pm HK Desk news ದೇಶ - ವಿದೇಶ
ಕಾಸರಗೋಡು, ಡಿ.14 : ಕಾಸರಗೋಡು ಬ್ಲಾಕ್ ಪಂಚಾಯತ್ ಬಿಜೆಪಿ ಸದಸ್ಯೆಯೊಬ್ಬರಿಗೆ ಉಗ್ರವಾದ ಮತ್ತು ಲವ್ ಜಿಹಾದ್ ಬೆಂಬಲಿಸಿ ಬರೆದ ಕರಪತ್ರಗಳನ್ನು ಪೋಸ್ಟ್ ನಲ್ಲಿ ಕಳಿಸಲಾಗಿದ್ದು, ಆತಂಕ ವ್ಯಕ್ತವಾಗಿದೆ.
ಬದಿಯಡ್ಕ ಸಮೀಪದ ಪೆರಡಾಲ ಡಿವಿಶನ್ ಪ್ರತಿನಿಧಿಸುವ ಬಿಜೆಪಿಯ ಕೆ.ಎಂ.ಅಶ್ವಿನಿ ಅವರಿಗೆ ಈ ರೀತಿಯ ವಿಕೃತ ಪೋಸ್ಟ್ ಮಾಡಲಾಗಿದ್ದು, ಆಕೆಯ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಕರಪತ್ರಗಳನ್ನು ಪೋಸ್ಟ್ ಮೂಲಕ ಅಶ್ವಿನಿ ಅವರ ವಿಳಾಸಕ್ಕೆ ಕಳಿಸಲಾಗಿತ್ತು. ಅಶ್ವಿನಿ ಕರಪತ್ರಗಳನ್ನು ಬದಿಯಡ್ಕ ಠಾಣೆಗೆ ಒಪ್ಪಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಶ್ವಿನಿ ಅವರು ನೀರ್ಚಾಲು ಸಮೀಪದ ಓಣಿಯಡ್ಕ ಎಂಬಲ್ಲಿ ವಾಸವಿದ್ದಾರೆ. ಈಕೆಯ ವಿಳಾಸಕ್ಕೆ ಪೋಸ್ಟ್ ನಲ್ಲಿ ಕರಪತ್ರಗಳನ್ನು ಕಳುಹಿಸಲಾಗಿತ್ತು. ಕಳುಹಿಸಿದವರ ವಿಳಾಸ ಕುರಾನ್ ಎಜುಕೇಶನ್, ಪೋಸ್ಟ್ ಬಾಕ್ಸ್ ನಂಬರ್ 58, ಮಂಜೇರಿ, ಮಲಪ್ಪುರಂ ಎಂದು ಬರೆಯಲಾಗಿತ್ತು.
ಒಂದು ಕರಪತ್ರದಲ್ಲಿ ಭೂಮಿ ತಿರುಗುವುದನ್ನು ಹೇಗೆ ನಿಲ್ಲಿಸುವುದು ಎಂಬ ಬಗ್ಗೆ ಉಪದೇಶದ ವಾಕ್ಯಗಳಿವೆ. ತಮಿಳು, ಇಂಗ್ಲಿಷ್, ಅರೇಬಿಕ್ ಭಾಷೆಯಲ್ಲಿ ಉಗ್ರವಾದ ಮತ್ತು ಲವ್ ಜಿಹಾದ್ ಪರವಾಗಿ ಬರೆಯಲಾಗಿದೆ. ಕರಪತ್ರದ ಕೆಳಗಡೆ ಮುಹಿಯುದ್ದೀನ್ ಮೊಹಮ್ಮದ್ ಇರುಂಬುಝಿ ಎಂಬ ಹೆಸರನ್ನೂ ಬರೆಯಲಾಗಿದೆ. ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಮಂದಿಗೆ ನನ್ನ ವಿಳಾಸ ಸಿಕ್ಕಿದ್ದು ಹೇಗೆ ಎಂದು ಅಶ್ವಿನಿ ಅಚ್ಚರಿಗೆ ಒಳಗಾಗಿದ್ದಾರೆ. ಇದರ ಹಿಂದೆ ಉಗ್ರವಾದ ಬೆಂಬಲಿಸುವ ಸ್ಥಳೀಯರ ಕೈವಾಡ ಇರುವ ಶಂಕೆಯನ್ನು ಅಶ್ವಿನಿ ವ್ಯಕ್ತಪಡಿಸಿದ್ದಾರೆ.
A member of Kasargod block panchayat has received three pamphlets by post, the contents of which support t terrorism and Love Jihad. K M Ashwini from the BJP who represents Peradala division in the block panchayat received these pamphlets. She has since handed them over to the Badiadka police station. The police have registered a case and begun an investigation.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm